This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Politics NewsState News

ದೇಶದ ಜನರಿಗೆ ನರೇಂದ್ರ ಮೋದಿಯವರು ಪುನಃ ಪ್ರಧಾನ ಮಂತ್ರಿ ಅಗುವುದು ಬೇಕಿದೆ: ಬಸನಗೌಡ ಯತ್ನಾಳ್

ದೇಶದ ಜನರಿಗೆ ನರೇಂದ್ರ ಮೋದಿಯವರು ಪುನಃ ಪ್ರಧಾನ ಮಂತ್ರಿ ಅಗುವುದು ಬೇಕಿದೆ: ಬಸನಗೌಡ ಯತ್ನಾಳ್

ವಿಜಯಪುರ: ಭಾರತೀಯ ಸಂಸ್ಕೃತಿಯ ಪ್ರಕಾರ ಯುಗಾದಿಯಂದು ಹೊಸ ವರ್ಷ ಅರಂಭವಾಗುತ್ತದೆ, ಈ ಶುಭ ಸಂದರ್ಭದಲ್ಲಿ ನಾಡಿನ ಜನತೆಗೆ ಶುಭವಾಗಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಇಂದು ಯುಗಾದಿ ಹಬ್ಬದ ಪ್ರಯುಕ್ತ ನಗರದ ಶಿವಯೋಗಿ ಸಿದ್ದರಾಮೇಶ್ವರ ದೇವಸ್ಥಾನಕ್ಕೆ ತೆರಳಿ ಸಮಸ್ತ ನಾಡಿನಲ್ಲಿ ಸುಖಶಾಂತಿ ಸಮೃದ್ಧಿ ನೆಲಸಲಿ, ಸಕಾಲಕ್ಕೆ ಮಳೆಬೆಳೆಯಾಗಲಿ ಮತ್ತು ದೇಶವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸಲು ಮತ್ತು ವಿಶ್ವದ ಶ್ರೇಷ್ಠ ರಾಷ್ಟ್ರವಾಗಿ ಮಾಡಲು ಶಕ್ತನಾಗಿರುವ ಏಕಮಾತ್ರ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿಯವರು ಪುನಃ ಅದೇ ಸ್ಥಾನದಲ್ಲಿ ಮುಂದುವರಿದು ದೇಶದ ಚುಕ್ಕಾಣಿ ಹಿಡಿಯುವಂತಾಗಲೀ ಎಂದು ಹೋಮ ಹವನ ಮತ್ತು ಎಲ್ಲ ಬಗೆಯ ಪೂಜೆಗಳನ್ನು ಮಾಡಿರುವುದಾಗಿ ಎಂದು ತಿಳಿಸಿದರು.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಲ್ಹಾದ್ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ನೀಡುತ್ತಿರುವ ಕಾಮೆಂಟ್ ಗಳ ಬಗ್ಗೆ ಮಾತಾಡಿದ ಶಾಸಕ, ಅವರ ಮೂಲಕ ಯಾರು ಜೋಶಿ ಅವರ ವಿರುದ್ಧ ಹೇಳಿಕೆಗಳನ್ನು ನೀಡಿಸುತ್ತಿದ್ಧಾರೆ ಅಂತ ಚೆನ್ನಾಗಿ ಗೊತ್ತಿದೆ, ಆದರೆ ದೇಶದ ಜನರಿಗೆ ನರೇಂದ್ರ ಮೋದಿಯವರು ಪುನಃ ಪ್ರಧಾನ ಮಂತ್ರಿ ಅಗುವುದು ಬೇಕಿದೆ, ಹಾಗಾಗಿ ಯಾರೇನೇ ಅಪಪ್ರಚಾರ ಮಾಡಿದರೂ ಜೋಶಿ ಗೆಲ್ಲುತ್ತಾರೆ ಎಂದರು.

";