This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ಆಡಳಿತ ವ್ಯವಸ್ಥೆಯಲ್ಲಿ ಕಂದಾಯ ಇಲಾಖೆ ಪಾತ್ರ ಮುಖ್ಯ

ನಿಮ್ಮ ಸುದ್ದಿ ಬಾಗಲಕೋಟೆ

ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿ ಸರ್ವಕಾಲಕ್ಕೂ ಕಂದಾಯ ಇಲಾಖೆಯ ಪಾತ್ರ ಮುಖ್ಯವಾಗಿದ್ದು, ಕಂದಾಯ ಇಲಾಖೆ ಅತ್ಯಂತ ಪುರಾತನ ಇಲಾಖೆಗಳಲ್ಲಿ ಒಂದಾಗಿದ್ದು ಸ್ವಾತಂತ್ರ‍್ಯ ಪೂರ್ವದಲ್ಲಿ ರಾಜಸ್ವ ಇಲಾಖೆಯೆಂದು ಕರೆಯಲಾಗುತ್ತಿದ್ದ ಈ ಇಲಾಖೆ ಈಗಲೂ ಕೂಡ ಸರಕಾರದ ಬಹು ಪ್ರಮುಖವೆನಿಸುವ ಇಲಾಖೆಗಳಲ್ಲಿ ಒಂದೆನಿಸಿದೆ ಎಂದು ಜಿಲ್ಲಾಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.

ನವನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಹೊಸದಾಗಿ ನೇಮಕಾತಿ ಹೊಂದಿದ ಗ್ರಾಮಲೆಕ್ಕಿಗರಿಗೆ ಕಂದಾಯ ವಿಷಯಗಳ ಬಗ್ಗೆ ೫ ದಿನಗಳ ಮುಖಾಮುಖಿ ತರಬೇತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಭೂ-ಆಡಳಿತ ಮತ್ತು ಭೂ-ಕಂದಾಯ ದಾಖಲಾತಿ ಕಂದಾಯ ಇಲಾಖೆಯ ಪ್ರಮುಖ ಕಾರ್ಯಯೋಜನೆಯಾಗಿದ್ದರೂ ಚುಣಾವಣೆ ಕಾರ್ಯ, ಜಾನುವಾರು ಗಣತಿ, ಕಾನೂನು ಸುವ್ಯವಸ್ಥೆ ಜಾರಿ, ನೈಸರ್ಗಿಕ ವಿಕೋಪಗಳ ನಿರ್ವಹಣೆ ಮುಂತಾದ ಮಹತ್ತರ ಕಾರ್ಯ ಹೊಂದಿದೆ ಎಂದರು.

ಎಲ್ಲ ಇಲಾಖೆ ಸಾರ್ವಜನಿಕರ ಸಾಮಾನ್ಯ ಜೀವನದ ಆಗು ಹೋಗುಗಳಲ್ಲಿ ಜನ ಸಾಮಾನ್ಯರೊಂದಿಗೆ ಅತಿ ಹೆಚ್ಚಾಗಿ ಸ್ಪಂದಿಸುತ್ತಿರುವುದರಿಂದ ಸರಕಾರ ಮತ್ತು ಜನಸಾಮಾನ್ಯರ ನಡುವಿನ ಕೊಂಡಿಯಾಗಿ ಪಾತ್ರ ನಿರ್ವಹಿಸುತ್ತಿದೆ. ಗ್ರಾಮಮಟ್ಟದಲ್ಲಿ ಯೋಜನೆ ಅನುಷ್ಠಾನಗೊಳಿಸುವುದು ಗ್ರಾಮಲೆಕ್ಕಿಗರ ಮುಖ್ಯ ಕರ್ತವ್ಯವಾಗಿದೆ. ಭೂ ಕಂದಾಯ ಕಾಯ್ದೆ ಹಾಗೂ ಭೂ ಸುಧಾರಣೆ ಕಾಯ್ದೆಗಳ ಮಹತ್ವವಾದಂತಹ ವಿಷಯಗಳನ್ನು ತಿಳಿದುಕೊಳ್ಳಲು ಹಾಗೂ ಸಾರ್ವಜನಿಕರೊಂದಿಗೆ ಉತ್ತಮ ಸಂಬಂಧದಿಂದ ಇರುವಿಕೆಯ ಬಗ್ಗೆ ಐದು ದಿನಗಳವರೆಗೆ ನೆಡೆಯುವ ವಿಶೇಷ ತರಬೇತಿಯ ಸದುಪಯೋಗಕ್ಕೆ ಕರೆ ನೀಡಿದರು.

ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಗಂಗಾಧರ ದಿವಟರ, ಹೊಸದಾಗಿ ನೇಮಕಾತಿ ಹೊಂದಿದ ಗ್ರಾಮಲೆಕ್ಕಿಗರಿಗೆ ಕಂದಾಯ ವಿಷಯಗಳ ತರಬೇತಿಯ ಅವಶ್ಯಕತೆ ಮನಗಂಡು ಈ ವಿಶೇಷ ತರಬೇತಿ ಆಯೋಜಿಸಲಾಗಿದೆ. ತರಬೇತಿಗಾಗಿ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಲು ಕೋರಿದರು.

ಇದೇ ಸಂದರ್ಭದಲ್ಲಿ ತರಬೇತಿ ಸಂಸ್ಥೆಗೆ ಬರುವ ಶಿಭಿರಾರ್ಥಿಗಳಿಗೆ ಬೆಸಿಕ್ ಕಂಪ್ಯೂಟರ್ ಟ್ರೈನಿಂಗ್ ನೀಡುವುದಕ್ಕಾಗಿ ಪ್ರಯೋಗಾಲಯದ ಉದ್ಘಾಟನೆ ಮಾಡಿ ಹೊಸ ಗಣಕಯಂತ್ರಗಳಿಗೆ ಚಾಲನೆ ನೀಡಿದರು. ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇವರು ಹೊರತಂದ ಗ್ರಾಮಲೆಕ್ಕಾಕಾರಿ ಕೈಪಿಡಿ ವಿತರಿಸಲಾಯಿತು.ಲ ಜಿಲ್ಲಾ ತರಬೇತಿ ಸಂಸ್ಥೆಯ ಉಪ ಪ್ರಾಚಾರ್ಯ ಮಲ್ಲಿಕಾರ್ಜುನ ಗುಡೂರ, ತರಬೇತಿ ಸಂಸ್ಥೆಯ ಬೋಧಕರಾದ ಸುಲೋಚನಾ ಹೊಸಟ್ಟಿ, ಸಂಪನ್ಮೂಲ ವ್ಯಕ್ತಿಗಳಾದ ಬಿ.ಎಂ.ಮಠ, ಸಿಬ್ಬಂದಿಗಳಾದ ದಾಕ್ಷಾಯಣಿ ನಿಲೂಗಲ್ಲ, ಎಸ್.ಎಸ್.ಪಾಟೀಲ, ಎಸ್.ವೈ.ಮನಗೂಳಿ ಹಾಗೂ ಶೃತಿ ಅಳ್ಳಗಿ ಇದ್ದರು.

 

";