This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Health & FitnessState News

ಬಿರು ಬಿಸಿಲಿಗೆ 400‌ ಕೋಟಿ ರೂ ಮೌಲ್ಯದ ಮಾವು ಬೆಳೆ ನಾಶ: ಬೆಳೆನಾಶಕ್ಕೆ ಹವಾಮಾನ ವೈಪರಿತ್ಯವೇ ಕಾರಣ

ಬಿರು ಬಿಸಿಲಿಗೆ 400‌ ಕೋಟಿ ರೂ ಮೌಲ್ಯದ ಮಾವು ಬೆಳೆ ನಾಶ: ಬೆಳೆನಾಶಕ್ಕೆ ಹವಾಮಾನ ವೈಪರಿತ್ಯವೇ ಕಾರಣ

ರಾಮನಗರ: ನದಿಗಳು ಬತ್ತುತ್ತಿವೆ. ಕೆರೆಗಳು ಖಾಲಿ ಆಗಿದ್ದು, ಕುಡಿಯುವ ನೀರಿಗೂ ಪರಡುವಂತಹ ಸ್ಥಿತಿ ಎದುರಾಗಿದೆ. ಮತ್ತೊಂದೆಡೆ ಬೆಳೆ ಒಣಗಿ ಹೋಗುತ್ತಿದ್ದು ರೈತರು ಕಂಗಾಲಾಗಿದ್ದಾರೆ.

ಜೊತೆಗೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಹೀಗಾಗಿ ಬಿರು ಬಿಸಿಲಿಗೆ ಮಾವು ಒಣಗಿ ಕೈಕೊಟ್ಟಿದೆ. 400‌ ಕೋಟಿ ರೂ. ಅಧಿಕ ಮೌಲ್ಯದ ಬೆಳೆ ಹಾನಿ ಆಗಿದ್ದು, ಸಾಲ ಮಾಡಿ ಮಾವು ಬೆಳೆದ ರೈತರ ಬಾಳು ದುಃಸ್ಥಿತಿಗೆ ತಲುಪಿದೆ.

ರಾಮನಗರ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್​ ಕೂಡಲೇ‌ ನೆರವಿಗೆ ಬರುವಂತೆ ವಿಮೆ ಕಂಪನಿಗಳಿಗೂ ಜಿಲ್ಲಾಡಳಿತ ಪತ್ರ ಬರೆದಿದ್ದು, ವಿಮೆ ಹಣ ನೀಡಿ ರೈತರಿಗೆ ಆತ್ಮ ಸ್ಥೈರ್ಯ ತುಂಬಲು ಜಿಲ್ಲಾಡಳಿತ ಪ್ರಯತ್ನ ನಡೆಸಿದೆ.

ಮಾವು ಬೆಳೆದ ಶೇಕಡಾ ನೂರರ ಪೈಕಿ ಕೇವಲ 10 ರಿಂದ 15% ಮಾತ್ರ ಇಳುವರಿ ಸಿಗುತ್ತಿದೆ. ಒಟ್ಟು 33 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಇಳುವರಿಗೆ ಬಂದ ಮಾವಿಗೂ ಬೇಡಿಕೆ ಕುಸಿದಿದೆ. ಬಿಸಿಲಿನ ಪರಿಣಾಮ, ಫಂಗಸ್​ನಿಂದ ಮಾವಿನಕಾಯಿ ಕೂಡಿವೆ. ರಾಮನಗರ ರೈತರು ಅತ್ಯಂತ ರುಚಿ ಮತ್ತು ವಿವಿಧ ಪ್ರಕಾರ ಮಾವು ಬೆಳೆಯುತ್ತಿದ್ದರು. ರಾಜ್ಯ ಮಾತ್ರವಲ್ಲದೆ ವಿದೇಶಕ್ಕೂ ರಫ್ತಾಗುತ್ತಿತ್ತು.

ಒಟ್ಟು 400‌ ಕೋಟಿಗೂ ಅಧಿಕ ಮೌಲ್ಯದ ಬೆಳೆ ನಾಶವಾಗಿದ್ದು, ಬೆಳೆನಾಶಕ್ಕೆ ಹವಾಮಾನ ವೈಪರಿತ್ಯವೇ ಕಾರಣ ಎಂದು ವರದಿ ನೀಡಲಾಗಿದೆ. ಸದ್ಯ ಬೆಳೆ‌ನಾಶದ ಒಟ್ಟು ವರದಿ ಜಿಲ್ಲಾಧಿಕಾರಿ ಕಚೇರಿ ಸೇರಿದೆ. ಬಳಿಕ ರಾಜ್ಯ‌ ಸರಕಾರಕ್ಕೆ ವರದಿ ಒಪ್ಪಿಸಲಾಗುವುದು ಎಂದು ಮಾಹಿತಿ ತಿಲಿದು ಬಂದಿದೆ.

ರಾಮನಗರ (Ramanagara) ಮಾವು ರೈತರ ಸ್ಥಿತಿ ಅರಿಯಲು ಎನ್​ಡಿಆರ್​ಎಫ್​ ತಂಡದಿಂದ ವರದಿ ತಯಾರಿ ಮಾಡಿದ್ದು, ಇಡೀ ಜಿಲ್ಲೆ‌ ಸುತ್ತಾಡಿ ಜಿಲ್ಲಾಡಳಿತ ವರದಿ ಸಿದ್ಧ ಪಡಿಸಿದೆ.

";