This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

State News

ಬಿಜೆಪಿ ಬಗ್ಗೆ ಟೀಕೆ ಮಾಡಲು ನಿಮಗೆ ಏನು ನೈತಿಕತೆ ಇದೆ?  ಡಿಕೆ ಶಿವಕುಮಾರ್  ವಿರುದ್ಧ  ಆರ್ ಅಶೋಕ ವಾಗ್ದಾಳಿ

ಬಿಜೆಪಿ ಬಗ್ಗೆ ಟೀಕೆ ಮಾಡಲು ನಿಮಗೆ ಏನು ನೈತಿಕತೆ ಇದೆ?  ಡಿಕೆ ಶಿವಕುಮಾರ್  ವಿರುದ್ಧ  ಆರ್ ಅಶೋಕ ವಾಗ್ದಾಳಿ

ಬೆಂಗಳೂರು: ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರಲ್ಲ, ದೇಶ ಒಡೆಯುವ ಮಾತಿಗೆ ಹೋದ ಮಾನ ದಿಲ್ಲಿಗೆ ಹೋದರೂ ಬರಲ್ಲ”ಇದು ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾಗಿರುವ ಅನುದಾನದಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ ಅವರು ಮಾಡಿರುವ ವ್ಯಂಗ್ಯವಾಡಿದ್ದಾರೆ.

ಫೆಬ್ರವರಿ 7ರಂದು ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿರುವ ಪ್ರತಿಭಟನೆ ಬಗ್ಗೆ ರಾಜ್ಯದ ಬಿಜೆಪಿ ನಾಯಕರಿಗೆ ಮಾನ ಮರ್ಯಾದೆ ಇದ್ದರೆ ರಾಜ್ಯಕ್ಕೆ ಕೇಂದ್ರದಿಂದ ಆಗಿರುವ ಅನ್ಯಾಯ ಸರಿಪಡಿಸಲಿ ಎಂಬವಾಗ್ದಾಳಿ ನಡೆಸಿರುವ ಅವರು,ಡಿಕೆ ಶಿವಕುಮಾರ್ ಅವರು ಬಿಜೆಪಿ ವಿರುದ್ದ ಕಲಬುರಗಿಯಲ್ಲಿ ನಡೆಸಿದ ವಾಗ್ದಾಳಿ ಬಗೆಗಿನ ವಿಜಯ ಕರ್ನಾಟಕ ವರದಿಯನ್ನು ಆರ್ ಅಶೋಕ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಲಗತ್ತಿಸಿ ಅದಕ್ಕೆ ಪ್ರತಿಕ್ರಿಯಿಸಿದ್ದಾರೆ.

ದೇಶ ವಿಭಜನೆಯ ಮನೆಹಾಳು ಮಾತಾಡಿ ಸ್ವಪಕ್ಷೀಯರಿಂದಲೇ ಛೀಮಾರಿ ಹಾಕಿಸಿಕೊಂಡು ಕಾಂಗ್ರೆಸ್ ಪಕ್ಷದ ಮಾನ ಮರ್ಯಾದೆ ಹರಾಜು ಹಾಕಿರುವ ತಮ್ಮ ಸಹೋದರನನ್ನ ಮುಜುಗರದಿಂದ ಪಾರು ಮಾಡಲು ದಿಲ್ಲಿ ಪ್ರತಿಭಟನೆಯ ನಾಟಕ ಆಡುತ್ತಿರುವ ಡಿಕೆ ಶಿವಕುಮಾರ್
ಅವರೇ, ಬಿಜೆಪಿ ಬಗ್ಗೆ ಟೀಕೆ ಮಾಡಲು ನಿಮಗೆ ಏನು ನೈತಿಕತೆ ಇದೆ? ಎಂದು ಪ್ರಶ್ನಿಸಿದ್ದಾರೆ.

Nimma Suddi
";