This is the title of the web page
This is the title of the web page

Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Education News

ಬರಹದ ಬೆಳಕು ಕೃತಿ ಬಿಡುಗಡೆ 16 ರಂದು

ಬರಹದ ಬೆಳಕು ಕೃತಿ ಬಿಡುಗಡೆ 16 ರಂದು

ನಿಮ್ಮ ಸುದ್ದಿ ಬಾಗಲಕೋಟೆ

ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದ ಪತ್ರಕರ್ತ ಎಚ್.ಎಚ್.ಬೇಪಾರಿ ಅವರ ಕೃತಿ ಬರಹದ ಬೆಳಕು ಜೂ.16 ರಂದು ಲೋಕಾರ್ಪಣೆಗೊಳ್ಳಲಿದೆ.

ಪಟ್ಟಣದ ಶಾದಿಮಹಲ್ ನಲ್ಲಿ ಸಂಜೆ 4 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಉದಯವಾಣಿ ಪತ್ರಿಕೆ ಹಿರಿಯ ವರದಿಗಾರ ಶ್ರೀಶೈಲ್ ಬಿರಾದಾರ ಕೃತಿ ಲೋಕಾರ್ಪಣೆಗೊಳಿಸಲಿದ್ದು, ಸಾಹಿತಿ ಮಹಾದೇವ ಬಸರಕೋಡ ಕೃತಿ ಪರಿಚಯಿಸಲಿದ್ದಾರೆ.

ಸ್ಥಳೀಯ ಪ್ರಭುಶಂಕರೇಶ್ಚರ ಗಚ್ಚಿನಮಠದ ಶಂಕರರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು ಕೆ.ಎಚ್.ಡಿ.ಸಿ ಮಾಜಿ ಅಧ್ಯಕ್ಷ ರವೀಂದ್ರ ಕಲಬುರ್ಗಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಆರ್.ಜಿ.ಸನ್ನಿ ಅಧ್ಯಕ್ಷತೆ ವಹಿಸಲಿದ್ದಾರೆ.

ಅತಿಥಿಗಳಾಗಿ ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಸಿದ್ಧಲಿಂಗಪ್ಪ ಬೀಳಗಿ, ಕಾನಿಪ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶ ಅಂಗಡಿ ಆಗಮಿಸಲಿದ್ದು ಉದ್ಯಮಿ ರಾಜು ಬೋರಾ ಅವರನ್ನು ಸನ್ಮಾನಿಸಲಾಗುವುದು.

ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಅಜಮೀರ ಮುಲ್ಲಾ, ಉಪಾಧ್ಯಕ್ಷ ಇಸ್ಮಾಯಿಲಸಾಬ ಬೇಪಾರಿ, ಪೀರಾ ಖಾದ್ರಿ, ಕಸಾಪ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ, ಹುನಗುಂದ ವಿಮ ಬ್ಯಾಂಕ್ ನಿರ್ದೇಶಕ ಸೋಮಶೇಖರ ಬಲಕುಂದಿ, ತಾಪಂ ಸಹಾಯಕ ಲೆಕ್ಕಾಧಿಕಾರಿ ಶ್ರೀಶೈಲ ತತ್ರಾಣಿ, ಪಟ್ಟಣ ಪಂಚಾಯಿತಿ ಸದಸ್ಯರಾದ ರಮೇಶ ಮುರಾಳ,  ವಿಜಯಕುಮಾರ ಕನ್ನೂರ, ಸಂತೋಷ ಐಹೊಳ್ಳಿ,  ಬಾಬು ಛಬ್ಬಿ,  ಸಮುದಾಯದ ಮುಖಂಡರಾದ ಮೀರಾಸಾಬ ಮುಲ್ಲಾ,  ಕಾಶೀಮಸಾಬ ಬಾಗೇವಾಡಿ,  ಡಿ.ಪಿ.ಅತ್ತಾರ,ಹಾಫೀಜ ಮುರ್ತುಜಾ ಮೇಲಿನಮನಿ ಇತರರು ಆಗಮಿಸಲಿದ್ದಾರೆಂದು ಪತ್ರಕರ್ತ ಎಚ್.ಎಚ್.ಬೇಪಾರಿ ತಿಳಿಸಿದ್ದಾರೆ.

Nimma Suddi
";