This is the title of the web page
This is the title of the web page

Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

Local NewsPolitics NewsState News

ನಿರಾಣಿ ವಿರುದ್ಧ ಭಿಕ್ಷಾಟನೆ ಅಭಿಯಾನ; ಹೆಗಡೆ

ನಿರಾಣಿ ವಿರುದ್ಧ ಭಿಕ್ಷಾಟನೆ ಅಭಿಯಾನ; ಹೆಗಡೆ

ನಿರಾಣಿ ವಿರುದ್ಧ ಭಿಕ್ಷಾಟನೆ ಅಭಿಯಾನ; ಹೆಗಡೆ

ಬಾಗಲಕೋಟೆ: ಮಾಜಿ‌ ಸಚಿವ ಮುರುಗೇಶ ನಿರಾಣಿ ವಿರುದ್ಧ ಭಿಕ್ಷಾಟನೆ ಅಭಿಯಾನ ನಡೆಸಲು ನಾವು ನಿರ್ಧರಿಸಿದ್ದೇವೆ ಎಂದು ರೈತ ಸಂಘದ ಮುಖಂಡ ಯಲ್ಲಪ್ಪ ಹೆಗಡೆ ಹೇಳಿದರು.

ನಗರದಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಅವರು ಮುಧೋಳದ ನಿರಾಣಿ ಸಕ್ಕರೆ ಕಾರ್ಖಾನೆ 24 ವರ್ಷಗಳಿಂದ ತೆರಿಗೆ ಕಟ್ಟಿಲ್ಲವೆಂದು ಆರೋಪಿಸಿದ್ದು, ಕೆಲವು ಆರೋಪಗಳಿಗೆ ಸಾಕ್ಷ್ಯಾಧಾರ ಗಳಿವೆ ಎಂದು ಸಮರ್ಥಿಸಿಕೊಂಡರು.

ಮಾಜಿ ಸಚಿವ ಮುರಗೇಶ ನಿರಾಣಿ ವಿರುದ್ಧ ಬರುವ ಆಗಸ್ಟ್ 28 ರಂದು ವಿನೂತನ ಪ್ರತಿಭಟನೆಗೆ ರೈತ ಸಂಘ ಸಜ್ಜಾಗಿದ್ದು, ತಮ್ಮ ವಕೀಲರ ಮೂಲಕ ಲೀಗಲ್ ನೋಟಿಸ್‘ಗೆ ಉತ್ತರಿಸಲಾಗಿದೆ ಎಂದರು.

ಮಾಜಿ‌ ಸಚಿವ ಮುರಗೇಶ ನಿರಾಣಿ‌ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಸಕ್ಕರೆ,ಅಲಾರಾಮ್,ಸೀರೆ ವಿತರಿಸಿದ್ದರು ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಮುಧೋಳದ ನಿರಾಣಿ ಸಕ್ಕರೆ ಕಾರ್ಖಾನೆ ಕಳೆದ 24 ವರ್ಷಗಳಿಂದ ತೆರಿಗೆ ತುಂಬಿಲ್ಲ ಎಂದು ಕಿಡಿಕಾರಿದರು. ಇನ್ನೂ ಬೀಳಗಿಯಲ್ಲಿ ಆಗಸ್ಟ 28 ರಿಂದ ಮಾಜಿ ‌ಸಚಿವ ನಿರಾಣಿ ಆರೋಗ್ಯದ ಹಿತದೃಷ್ಟಿಯಿಂದ ಸ್ಥಳೀಯರಿಂದ ಐದು, ಹತ್ತು ರೂಪಾಯಿ ಸೇರಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮನಿಯಾರ್ಡರ್ ಮಾಡಲಾಗುವುದು,

ಭಿಕ್ಷಾಟಣೆ ಮೂಲಕ‌ಹಣ ಸಂಗ್ರಹಿಸುತ್ತೇವೆ, ಮಾನಸಿಕ ,ಶಾರೀರಿಕ‌ ಹಿಂಸೆಯಾಗಿದ್ದರಿಂದ ಅದರ ಖರ್ಚು ವೆಚ್ಚಕ್ಕೆ ಹಣ ಸಂಗ್ರಹಿಸುತ್ತೇವೆ , ಆಸ್ಪತ್ರೆಗೆ ತೋರಿಸಿಕೊಳ್ಳಲಿ‌ ಎಂದು ಹಣ ಸಂಗ್ರಹಿಸುತ್ತೇವೆ, ವಿಭಿನ್ನವಾದ ಹೋರಾಟ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಚುನಾವಣಾ ಸಂದರ್ಭದಲ್ಲಿ ಮಾಡಿದ ಆರೋಪಗಳಿಂದ ಶಾರೀರಿಕವಾಗಿ ಮಾನಸಿಕವಾಗಿ ನೋವಾಗಿದೆ ಎಂದು ನಿರಾಣಿ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ. ನೋಟಿಸ್’ನಲ್ಲಿ ಮಾನಸಿಕ ಹಾಗೂ ಶಾರೀರಿಕ ಹಿಂಸೆಗೆ ಐದು ಕೋಟಿ ಪರಿಹಾರ ಕೇಳಿದ್ದಾರೆ ಎಂದರು.

Nimma Suddi
";