This is the title of the web page
This is the title of the web page

Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

State News

ಸಚಿವ ನಿರಾಣಿಯಿಂದ ಭೂಮಿ ಪೂಜೆ

7.86 ಕೋಟಿ ರೂ. ವೆಚ್ಚದ ಕಾಲುವೆ ಕಾಮಗಾರಿಗೆ ನಿರಾಣಿ ಚಾಲನೆ

ನಿಮ್ಮ ಸುದ್ದಿ ಬಾಗಲಕೋಟೆ

ಅಂದಾಜು 7.86 ಕೋಟಿ ರೂ.ಗಳ ವೆಚ್ಚದ ಯಳ್ಳಿಗುತ್ತಿ ಏತ ನೀರಾವರಿ ಪೈಪ ವಿತರಣಾ ಕಾಲುವೆ ಕಾಮಗಾರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕ ಸಚಿವ ಮುರುಗೇಶ ನಿರಾಣಿ ಶುಕ್ರವಾರ ಚಾಲನೆ ನೀಡಿದರು.

ಯಳ್ಳಿಗುತ್ತಿ ಗ್ರಾಮದಲ್ಲಿ ಕೃಷ್ಣಾ‌ ಭಾಗ್ಯ ಜಲ ನಿಗಮ ನಿಯಮಿತದಿಂದ ವಿಶೇಷ ಅಭಿವೃದ್ಧಿ ಯೋಜನೆಯಡಿ ಕಾಲುವೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಈ ಯೋಜನೆಯಿಂದ ಯಳ್ಳಿಗುತ್ತಿ, ಯಂಕಂಚಿ, ಅಂಡಮುರನಾಳ, ಸಿದ್ದನಾಳ ಗ್ರಾಮದ 750 ಹೆಕ್ಟೆರ ರೈತರ ಜಮೀನುಗಳಿಗೆ ಅನುಕೂಲವಾಗಲಿದೆ ಎಂದರು.

ಪೈಪ ನೆಟವರ್ಕ ಉದ್ದ 21.105 ಕಿ.ಮೀ ಇದ್ದು, ಹೆರಕಲ್ ಬ್ರಡ್ಜ ಕಂ ಬ್ಯಾರೇಜ ಹಿನ್ನೀರಿನಿಂದ ಹರಿಸಲಾಗುತ್ತಿದೆ. ಈ ಕಾಮಗಾರಿ ಅವಧಿ 11 ತಿಂಗಳಿದ್ದು, ಈ ಅವಧಿಯಲ್ಲ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರ ಕೋಯಾ ಕಾನಷ್ಟ್ರಕ್ಸನ್ ಲಿಮಿಟೆಡ್ ಅವರಿಗೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ಜಿ.ಪಂ ಮಾಜಿ ಸದಸ್ಯ ಹೂವಪ್ಪ ರಾಠೋಡ ಸೇರಿದಂತೆ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳು ಉಪಸ್ಥಿತರಿದ್ದರು.

Nimma Suddi
";