This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Local NewsNational NewsPolitics NewsState News

ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಬಾಗಲಕೋಟೆ

ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಅವರನ್ನು ಸುಸಂಸ್ಕೃತರು ಎಂದು ಹೇಳಲು ಆಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ತಮ್ಮ ವಿರುದ್ಧ ಸಂಸದ ಅನಂತಕುಮಾರ ಹೆಗಡೆ ಏಕವಚನದಲ್ಲಿ ಮಾತನಾಡಿದ್ದರ ಕುರಿತು ಕೂಡಲಸಂಗಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದು ಅವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಈ ಹಿಂದೆ ಕೇಂದ್ರ ಮಂತ್ರಿ ಆಗಿದ್ದಾಗ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿದವರು. ಅವರಿಂದ ನಾವೆಲ್ಲ ಸಂಸ್ಕೃತಿ ಬಯಸುವುದು ಆಗುವುದಿಲ್ಲ ಎಂದರು.

ಅವರ ಭಾಷೆ ಬಳಕೆ ಎಂದಿಗೂ ಸುಸಂಸ್ಕೃತೆಯಿAದ ಕೂಡಿರುವುದಿಲ್ಲ. ರಾಜ್ಯದ ಮುಖ್ಯಮಂತ್ರಿಗೆ ಗೌರವ ಕೊಡುವವರೂ ಇದ್ದಾರೆ. ಕೊಡದೇ ಇರುವವರೂ ಇದ್ದಾರೆ. ರಾಜಕೀಯವಾಗಿ ಮಾತನಾಡುವವರಿಗೆ ಗೌರವ ಕೊಡಿ ಎಂದು ಹೇಳಲು ಆಗುವುದಿಲ್ಲ. ಅದು ಅವರ ಘನತೆಗೆ ಕುಂದು ಬರುತ್ತದೆಯೇ ವಿನ: ನನಗೇನು ಆಗುವುದಿಲ್ಲ ಎಂದು ಹೇಳಿದರು.

ಕೇಂದ್ರದ ಮಾಜಿ ಮಂತ್ರಿ ಆಗಿದ್ದವರು ಯಾವ ಭಾಷೆ ಬಳಸಬೇಕು ಅನ್ನುವುದು ಅವರಿಗೆ ಗೊತ್ತಿಲ್ಲ ಎಂದರೆ ಅವರು ಸುಸಂಸ್ಕೃತರೂ ಅಲ್ಲ, ಮನುಷ್ಯರೂ ಅಲ್ಲ. ಅಮಾನವೀಯವಾದಂತವರು ಎಂದು ತೋರಿಸುತ್ತಿದೆ ಎಂದರು.

Nimma Suddi
";