This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

State News

2047ಕ್ಕೆ ಭಾರತವನ್ನು ಇಸ್ಲಾಮೀಕರಣ ಮಾಡುವ ತಂತ್ರ ರೂಪಿಸಲಾಗಿದೆ: ಜಗದೀಶ್ ಕಾರಂತ ವಿವಾದಾತ್ಮಕ ಹೇಳಿಕೆ

2047ಕ್ಕೆ ಭಾರತವನ್ನು ಇಸ್ಲಾಮೀಕರಣ ಮಾಡುವ ತಂತ್ರ ರೂಪಿಸಲಾಗಿದೆ: ಜಗದೀಶ್ ಕಾರಂತ ವಿವಾದಾತ್ಮಕ ಹೇಳಿಕೆ

ರಾಯಚೂರು: 2047ಕ್ಕೆ ಭಾರತವನ್ನು ಇಸ್ಲಾಮೀಕರಣ ಮಾಡುವ ತಂತ್ರ ರೂಪಿಸಲಾಗಿದ್ದು ಅದನ್ನು ಸಾಧಿಸಲು ಅಂಬೇಡ್ಕರ್ ಸಂವಿಧಾನ ಮತ್ತು ಟಿಪ್ಪುವಿನ ಖಡ್ಗದ ದಾರಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ಮುಖಂಡ ಜಗದೀಶ್ ಕಾರಂತ ಅವರು ವಿವಾದಾತ್ಮಕ ಹೇಳಿಕೆ ನೀಡಿದರು.

ನಗರದಲ್ಲಿ ದೇವಾಲಯದ ಭಕ್ತ ಮಂಡಳಿ ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು, ಇಸ್ಲಾಮೀಕರಣದ ಹುಳ ಭಾರತದಲ್ಲಿ ಹರಿದಾಡುತ್ತಿದೆ, ಕೆಲವರ ಮೆದುಳಿಗೆ ನುಸುಳಿಬಿಟ್ಟಿದೆ. ಅದನ್ನ ಸಾಧಿಸಲು ಅವರು ಆಯ್ದುಕೊಂಡಿರುವುದು ಎರಡು ದಾರಿ. ಮೊದಲನೆಯದು ಅಂಬೇಡ್ಕರ್ ಸಂವಿಧಾನದ ದಾರಿ ಮತ್ತೊಂದು ಟಿಪ್ಪುವಿನ ಖಡ್ಗ ಎಂದು ಹೇಳಿದರು.

ಮುಸಲ್ಮಾನರಿಗೆ ಪಾಕಿಸ್ತಾನ ಕೊಡಲಾಗಿದೆ. ಹಿಂದುಗಳಿಗೆ ಹಿಂದುಸ್ತಾನ ಅಂತ ಸುಮ್ಮನಾಗಿದ್ವಿ. ಈ ಮಧ್ಯೆ ಬಿಹಾರದಲ್ಲಿ ಮೋದಿ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಬೇರೆಯದ್ದೇ ಸತ್ಯ ಬೆಳಕಿಗೆ ಬಂದಿದೆ. ಆರೋಪಿಗಳ ಬಾಯ್ಬಿಟ್ಟ ಸತ್ಯ ಭಯಾನಕವಾಗಿತ್ತು ಎಂದು ತಿಳಿಸಿದರು.

Nimma Suddi
";