This is the title of the web page
This is the title of the web page

Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime NewsState News

ವಿಜಯಪುರದ ಒಂದೇ ಕುಟುಂಬದ ನಾಲ್ವರ ಸಾವು

ವಿಜಯಪುರದ ಒಂದೇ ಕುಟುಂಬದ ನಾಲ್ವರ ಸಾವು

ಚಿತ್ರದುರ್ಗ

ತಾಲೂಕಿನ ಮಲ್ಲಾಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 50ಎ ಸೇತುವೆ ಬಳಿ ಚಲಿಸುತ್ತಿದ್ದ ಲಾರಿ ಹಿಂಬದಿಗೆ ಕಾರು ಡಿಕ್ಕಿ ಪಡಿಸಿದ ಪರಿಣಾಮ ಐವರು ಮೃತಪಟ್ಟಿದ್ದು, ಇಬ್ಬರು ಮಕ್ಕಳು ಗಾಯಗೊಂಡ ಘಟನೆ ಭಾನುವಾರ ಬೆಳಗಿನಜಾವ ನಡೆದಿದೆ.

ಮೃತರನ್ನು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕುದರಿ ಸಾಲೋಡಗಿಯ ಗ್ರಾಮದ ಸಂಗನಬಸವ ಮಲ್ಲಪ್ಪ ವಂದಾಲ (36), ಪತ್ನಿ ರೇಖಾ ವಂದಾಲ (29), ಪುತ್ರ ಅಗಸ್ತ್ಯ ವಂದಾಲ (8), ಸಂಬಂಧಿ ಭೀಮಾಶಂಕರ್ ವಂದಾಲ (28) ಹಾಗೂ ಕೋಲಾರ ಜಿಲ್ಲೆಯ ಕೆಜಿಎ್ ಮೂಲದ ಚಾಲಕ ಮಧುಸೂದನ್ (25). ಸಂಗನಬಸವ ಅವರ ಮತ್ತೊಬ್ಬ ಪುತ್ರ ಆದರ್ಶ (3), ಪುತ್ರಿ ಅನ್ವಿತ (6) ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬ್ಯಾಂಕ್ ನೌಕರರಾಗಿದ್ದ ಸಂಗನಬಸವರಿಗೆ ರಜೆ ಇದ್ದ ಕಾರಣ ಸಂಗನಬಸವ ಹಾಗೂ ಈರಣ್ಣ ಎಂಬುವರು ಸೇರಿ ಎರಡು ಕುಟುಂಬದವರು ಎರಡು ಕಾರುಗಳಲ್ಲಿ ಚಿಕ್ಕಮಗಳೂರು ಪ್ರವಾಸಕ್ಕೆ ತೆರಳುತ್ತಿದ್ದರು. ಶನಿವಾರ ರಾತ್ರಿ ಸುಮಾರು 11 ಗಂಟೆಗೆ ವಿಜಯಪುರ ಜಿಲ್ಲೆಯಿಂದ ಪ್ರಯಾಣ ಬೆಳೆಸಿದ್ದರು. ಮುಂಜಾನೆ ಸುಮಾರು 3.30ರ ವೇಳೆ ಚಿತ್ರದುರ್ಗ ಬಳಿ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು, ಲಾರಿಯೊಂದಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಭೀಕರ ಅಪಘಾತದಲ್ಲಿ ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಭೀಮಾಶಂಕರ್ ವಂದಾಲ ಗೆಳೆಯ ಕೆಜಿಎ್ ಮೂಲದ ಮಧುಸೂದನ್ ಮೃತಪಟ್ಟಿದ್ದಾರೆ.

ಈರಣ್ಣ ಅವರು ಪ್ರಯಾಣಿಸುತ್ತಿದ್ದ ಕಾರು ಮುಂದೆ ಹೋಗುತ್ತಿದ್ದುಘಿ. ಘಟನೆ ಸಂಭವಿಸುತ್ತಿದ್ದಂತೆ ಈರಣ್ಣ ಅವರ ಕುಟುಂಬ ತಕ್ಷಣ ನೆರವಿಗೆ ಬಂದು ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಹಾಗೂ ಇತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Nimma Suddi
";