This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Politics NewsState News

ಗ್ಯಾರಂಟಿ ಯೋಜನೆ:ಚುನಾವಣೆ ಪೂರ್ವ ಭರವಸೆ

ಗ್ಯಾರಂಟಿ ಯೋಜನೆ:ಚುನಾವಣೆ ಪೂರ್ವ ಭರವಸೆ

ರಾಮನಗರ

ಗ್ಯಾರೆಂಟಿ ಯೋಜನೆಯಿಂದಾಗಿ ವಿವಿಧ ಇಲಾಖೆಗೆ ಅನುದಾನ ಕೊರತೆ ವಿಚಾರ. ರಾಮನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿಕೆ.

ನಮ್ಮಲ್ಲಿ ಅನುದಾನ‌ಕೊರತೆ ಅನ್ನೋ ಪ್ರಶ್ನೆ ಇಲ್ಲ.
ಗ್ಯಾರೆಂಟಿ ಯೋಜನೆ ಜನರಿಗೆ ಕೊಟ್ಟ ಚುನಾವಣಾ ಪೂರ್ವ ಭರವಸೆ.ಐದು ಯೋಜನೆಗಳಲ್ಲಿ ನಾಲ್ಕು ಅನುಷ್ಠಾನಕ್ಕೆ ಬಂದಿದೆ,.ಕೆಲವಿಂದಿಷ್ಟು ಯೋಜನೆಗೆ ಅನುದಾನ‌ ಕಡಿಮೆ ಆದರೂ ಪರವಾಗಿಲ್ಲ. ಬಡವರಿಗೆ ಮುಟ್ಟುವ ಯೋಜನೆ ಮಾಡಿದ್ದೇವೆ.ಗ್ಯಾರೆಂಟಿ ಯೋಜನೆ ಬಂದ ನಂತರ ಬಿಜೆಪಿ ಯವರಿಗೆ ಕೆಲಸ ಕಡಿಮೆ ಆಗಿದೆ.

ಮುಂದಿನ ದಿನಮಾನಗಳಲ್ಲಿ ಇನ್ನೂ ಕೆಲಸ ಕಡಿಮೆ ಆಗಲಿದೆ.
ಲೋಕಸಭೆ ಚುನಾವಣೆ ನಂತರ‌ ಬಿಜೆಪಿ ಗೆ ಇನ್ನು ಕೆಲಸ ಇರಲ್ಲ.ಎಂದು ಬಿಜೆಪಿ ಗೆ ಸಚಿವ ಶಿವರಾಜ್ ತಂಗಡಗಿ ತಿರುಗೇಟು ನೀಡಿದರು.

40 ಕಾಂಗ್ರೆಸ್ ಶಾಸಕರು ಬಿಎಲ್.ಸಂತೋಷ್ ಸಂಪರ್ಕದಲ್ಲಿದ್ದಾರೆ ಎಂಬ ವಿಚಾರವಾಗಿ ಮಾತನಾಡಿದ ಸಚಿವ,  ಆಪರೇಷನ್ ಮಾಡೋದೇ ಬಿಜೆಪಿ ಕೆಲಸ.
ಯಾವ ವರ್ಷ 113 ಬಂದು ಸರಕಾರ ಮಾಡಿರುವ ಉದಾಹರಣೆ‌ ಇದೆ ಹೇಳಿ.

ಬಿಜೆಪಿಯವರು ನಮಗೂ ಮೋಸ ಮಾಡಿದ್ರು.
ಬಿಜೆಪಿ ಯವರಿಗೆ ಹೇಳಿ ಮಾಡಿರುವಂಥಾ ವ್ಯವಧಾನ ಇಲ್ಲ.
ಹೇಳಿದಂತೆ ಯಾವತ್ತೂ ಮಾಡಿಲ್ಲ.

*ಬಿ ಎಲ್ ಸಂತೋ಼ಷ್ 40 ಮಂದಿ ಅಂತಿದ್ದಾರಲ್ಲ,‌4‌ ಮಂದಿಗಾದ್ರೂ ಕರೆಸಿಕೊಳ್ಳಲಿ.* ಈ ಹಿಂದೆ ಮೋದಿಯವರೂ ಬಂದು ಬಹಳಷ್ಟು ಸುಳ್ಳು ಹೇಳಿ ಹೋಗಿದ್ದಾರೆ. ಮಾತಾಡೊದೊಂದೇ ಬಿಜೆಪಿ ಚಟ.
ಮೋದಿ ಮೈಸೂರು, ಮಂಡ್ಯ, ರಾಮನಗರಕ್ಕೆ ಬಂದು ಸುಳ್ಳು ಹೇಳಿಹೋಗಿದ್ದಾರೆ.ನಮ್ಮದು ಹಂಗಿಲ್ಲ, ನುಡಿದರೆ ನಡಿತೀವಿ.

ಕಾಂಗ್ರೆಸ್ ನಿಂದ ಆಪರೇಶನ್ ಹಸ್ತ ವಿಚಾರ.
ನಾವು‌136‌ ಜನ ಇದೀವಿ, ನಮಗೆ ಅದರ ಅವಶ್ಯಕತೆ ಇಲ್ಲ.
ಅವರು ಯಾಕೆ ಬಂದು ಮೀಟ್ ಮಾಡ್ತಾ ಇದ್ದಾರೆ ಅಂದ್ರೆ
ಗ್ಯಾರೆಂಟಿ ಕೊಟ್ಟಿರೋ ಕಾರಣ. ಮುಂದಿನ ದಿನಮಾನಗಳಲ್ಲಿ ಬಿಜೆಪಿ ಗೆ ಅಸ್ತಿತ್ವ ಇಲ್ಲ.
ಅದಕ್ಕಾಗಿ ಅವರು ಕಾಂಗ್ರೆಸ್ ಸೇರಿಕೊಳುತ್ತಿದ್ದಾರೆ.

ಗ್ಯಾಸ್ ಬೆಲೆ ಇನ್ನೂರು ರೂ ಇಳಿಕೆ ವಿಚಾರ.
ಚುನಾವಣಾ ಗಿಮಿಕ್ ಮಾಡ್ತಾ ಇದ್ದಾರೆ.
10 ವರ್ಷ ಆಗ್ತಾ ಇದೆ, ಅಧಿಕಾರಕ್ಕೆ ಬಂದು.
ರೈತರಿಗೆ ಒಂದು ಎಕರೆ ನೀರಾವರಿ ಮಾಡಿದ್ದಾರಾ.?
ಒಂದು ಉದಾಹರಣೆ ಕೊಡಲಿ.
ನಾವು ಮಾಡಿದ್ದ ಯೋಜನೆಯನ್ನು ತಾವು ಹೇಳಿಕೊಂಡು ಹೋಗ್ತಾ ಇದ್ದಾರೆ.
ನಾವು ಕಟ್ಟಿದ ರೈಲ್ವೇ ಸ್ಟೇಷನ್ ಮಾರ್ತಾ ಇದ್ದಾರೆ.
ಬಿಜೆಪಿ ವಿರುದ್ಧ ಸಚಿವ ಶಿವರಾಜ್ ತಂಗಡಗಿ ಕಿಡಿ.

Nimma Suddi
";