This is the title of the web page
This is the title of the web page

Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Education NewsLocal NewsState News

ವಿದ್ಯುತ್ ಗುತ್ತಿಗೆದಾರರ ಕಾರ್ಯ ಸಾಮಾಜಿಕ ಕಳಕಳಿ ಹೊಂದಿರಲಿ

ವಿದ್ಯುತ್ ಗುತ್ತಿಗೆದಾರರ ಕಾರ್ಯ ಸಾಮಾಜಿಕ ಕಳಕಳಿ ಹೊಂದಿರಲಿ

ಬಾಗಲಕೋಟೆ
ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘದ ನೂತನ ಪದಾಕಾರಿಗಳಿಗೆ ಸನ್ಮಾನ ಸಮಾರಂಭ ಇತ್ತೀಚೆಗೆ ನವನಗರದ ಖಾಸಗಿ ಹೋಟೆಲ್‌ದಲ್ಲಿ ನಡೆಯಿತು.

ಸಸಿಗೆ ನೀರುಣಿಸುವ ಮೂಲಕ ಅಭಿನಂದನಾ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಅಧೀಕ್ಷಕ ಅಭಿಯಂತರ ಖಲೀಂ ಅಹ್ಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ವಿದ್ಯುತ್ ಗುತ್ತಿಗೆದಾರರು ಮಾಡುವ ಕರ‍್ಯವೂ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ನಿರ್ವಹಿಸುವ ಸಾಮಾಜಿಕ ಕಳಕಳಿಯುಳ್ಳ ಕರ‍್ಯವಾಗಿದೆ ಎಂದರು.

ಸರಕಾರಿ ನೌಕರರು ೬೦ ವರ್ಷ ಸೇವೆ ಸಲ್ಲಿಸಿದಾಗ ಕೊನೆಗೊಳ್ಳುತ್ತದೆ. ಆದರೆ ಗುತ್ತಿಗೆದಾರರು ಮಾಡುವ ಕಾರ್ಯವೂ ನೂರಾರು ವರ್ಷ ಉಳಿಯುತ್ತದೆ. ಗುತ್ತಿಗೆದಾರರು ತಮ್ಮ ವೃತ್ತಿ ಪ್ರಾಮಾಣಿಕತೆ, ಶ್ರದ್ಧಾಭಕ್ತಿ, ಸುರಕ್ಷತಾ ಅಳವಡಿಸಿಕೊಂಡು ಸೇವೆಯಲ್ಲಿ ಮುಂದುವರೆಯಬೇಕೆAದು ಕರೆ ನೀಡಿದರು.

ಮಹೇಶ ಪರೀಟ, ಮೆಹಬೂಬ ಕಾಂಟ್ರಾಕ್ಟರ, ಬಾಲಚಂದ್ರ ಹಾಲಗತ್ತಿ, ನೂತನ ಅಧ್ಯಕ್ಷ ಮಹೇಶಚಂದ್ರ ತೇಲಿ, ಕಾರ್ಯಾಧ್ಯಕ್ಷ ಮಹಾಂತೇಶ ಕರ್ಜಗಿ, ಉಪಾಧ್ಯಕ್ಷ ದೇವರಾಜ ನಾಯ್ಕರ್, ಸಂಗಣ್ಣ ಬಿಳೆಎಲಿ, ಪ್ರಶಾಂತ ಕರಡಿಗುಡ್ಡ, ಮಲ್ಲಯ್ಯ ಹಿರೇಮಠ, ಮುನ್ನಾ ಬಿಸ್ತಿ, ರಮೇಶ ಹಿರೇಮನಿ, ಮಳಿಯಪ್ಪ ಕಣಗಿ, ಮುತ್ತು ಬಾಳಿಕಾಯಿ, ಚಾಂದಸಾಬ ಯಂಡಿಗೇರಿ, ಬಶೀರಅಹ್ಮದ ರಾಮದುರ್ಗ, ಮುತ್ತು ಜಂಬಗಿ, ಸುರೇಶ ಗಂಜಿಹಾಳ, ಜಗದೀಶ ಭಜಂತ್ರಿ, ಜಿ.ಎಂ.ಸಿಂಧೂರ ಇತರರಿದ್ದರು.

 

Nimma Suddi
";