This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

State News

ಪಾಕಿಸ್ತಾನವನ್ನು ಯಾರಾದರೂ ಬೆಂಬಲಿಸಿದ್ರೆ ಗುಂಡಿಕ್ಕಿ ಕೊಲ್ಲಲಿ: ಸಚಿವ ಕೆ.ಎನ್ ರಾಜಣ್ಣ

ಪಾಕಿಸ್ತಾನವನ್ನು ಯಾರಾದರೂ ಬೆಂಬಲಿಸಿದ್ರೆ ಗುಂಡಿಕ್ಕಿ ಕೊಲ್ಲಲಿ: ಸಚಿವ ಕೆ.ಎನ್ ರಾಜಣ್ಣ

ತುಮಕೂರು: ಪಾಕಿಸ್ತಾನವನ್ನು ಯಾರಾದರೂ ಬೆಂಬಲಿಸಿದ್ರೆ ಗುಂಡಿಕ್ಕಿ ಕೊಲ್ಲಲಿ. ಯುಪಿ ಮಾದರಿಯಲ್ಲಿ ನಮ್ಮಲ್ಲೂ ಕಾನೂನು ತರಲಿ. ಯುಪಿಯಲ್ಲಿ ಕಾನೂನೇ ಇಲ್ಲ. ಆದರೂ ಸಮಾಜಘಾತುಕರ ಮನೆಗಳನ್ನು ಕೆಡವುತ್ತಾರೆ. ಈಗ ಭಯಬಿದ್ದು ಕಂಟ್ರೋಲ್ ಆಗಿಲ್ವಾ? ಹಾಗೆ ಮಾಡಲಿ. ಅಭಿವೃದ್ಧಿಯಾಗಬೇಕು ಅಂದರೆ ಸಮಾಜದಲ್ಲಿ ಶಾಂತಿ ನೆಲೆಸಬೇಕು. ಶಾಂತಿ ನೆಮ್ಮದಿಗಾಗಿ ಇಂತಹ ಕ್ರಮ ಅಗತ್ಯ ಎಂದು ಯೋಗಿ ಆದಿತ್ಯನಾಥ್ ಕ್ರಮವನ್ನು ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು.

ಲೋಕಸಭೆ ಟಿಕೆಟ್ ಕಾಂಗ್ರೆಸ್‌ನ ಮೊದಲ ಪಟ್ಟಿ ಬಿಡುಗಡೆ ಹಿನ್ನಲೆಯಲ್ಲಿ ಮಾತನಾಡಿದ ಸಚಿವ ರಾಜಣ್ಣ, ತುಮಕೂರಿನಲ್ಲಿ ಮುದ್ದಹನುಮೇಗೌಡರಿಗೆ ಟಿಕೆಟ್ ಆಗಿದ್ದು, ನನ್ನ ಉಸ್ತುವಾರಿ ಹಾಸನದಲ್ಲಿ ಶ್ರೇಯಸ್ ಪಟೇಲ್ ಗೆ ಟಿಕೆಟ್ ಸಿಕ್ಕಿದ್ದು, ಹಾಸನದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಶ್ರೇಯಸ್ ಪುಟ್ಟಸ್ವಾಮಿ ಗೌಡರ ಮೊಮ್ಮಗ. ಹಾಸನದಲ್ಲಿ ಪುಟ್ಟಸ್ವಾಮಿ ಗೌಡರಿಗೆ ಒಳ್ಳೆ ಹೆಸರಿದೆ. ಟಿಕೆಟ್ ಆಕಾಂಕ್ಷಿತರಿಗೆ ಅಸಮಾಧಾನ ಇದ್ದೇ ಇರುತ್ತದೆ. ಅದೆಲ್ಲಾ ಸರಿಯಾಗುತ್ತದೆ.

ಸೀಟು ಘೋಷಣೆ ಆಗೋವರೆಗೂ ಅದು ಸಹಜ. ಘೋಷಣೆ ಆದ ಬಳಿಕ ಎಲ್ಲವೂ ಸರಿಯಾಗುತ್ತದೆ. ಹೈ ಕಮಾಂಡ್ ತೀರ್ಮಾನ ಬಳಿಕ ಎಲ್ಲವೂ ಒಪ್ಪಿಕೊಳ್ಳಬೇಕು.ಜನ ಮುದ್ದಹನುಮೇಗೌಡ ಒಳ್ಳೆಯವರು ಅಂತಾರೆ ಕೆಟ್ಟವರು ಅನ್ನಲ್ಲ. ಹಾಗಾಗಿ ಅವರೇ ಗೆಲ್ಲುತ್ತಾರೆ. ಜೊತೆಗೆ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆ ಜನ ಮರೆಯಲ್ಲ. ಹಾಗಾಗಿ ಮುದ್ದಹನುಮೇಗೌಡರು ಗೆಲ್ಲುತ್ತಾರೆ. ಬಿಜೆಪಿ ಸಂಸದ ಜಿ.ಎಸ್ ಬಸವರಾಜ್ ಯಾರಿಗೆ ಸಪೋರ್ಟ್ ಮಾಡುತ್ತಾರೋ ಗೊತ್ತಿಲ್ಲ. ಅದು ಅವರ ವೈಯಕ್ತಿಕ ವಿಚಾರ. ನಮ್ಮದು ಒಂದನೇ ಪಟ್ಟಿ ಬಿಡುಗಡೆಯಾಗಿದೆ. ಬಿಜೆಪಿಯವರದ್ದು ಅದೂ ಆಗಿಲ್ಲ’ ಎಂದು ತಿಳಿಸಿದರು.

Nimma Suddi
";