This is the title of the web page
This is the title of the web page

Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

National NewsState News

ಅತ್ತಿಗೆ ಸಾವು:ಮುರಳಿ ಶೋಕ

ಅತ್ತಿಗೆ ಸಾವು:ಮುರಳಿ ಶೋಕ

ನಿಮ್ಮ ಸುದ್ದಿ ಬೆಂಗಳೂರು

ಕುಟುಂಬ ಪ್ರವಾಸ ಇದ್ದ ಕಾರಣ ಅತ್ತಿಗೆ ವಿದೇಶಕ್ಕೆ ತೆರಳಿದ್ದರು. ಓಡಾಡಿ ಬಂದು ರಾತ್ರಿ ಮಲಗಿದವರು ಏಳಲೇ ಇಲ್ಲ ಎಂದು ನಟ ಮುರಳಿ ಗಳಗಳನೆ ಕಣ್ಣಿಟ್ಟಿದ್ದಾರೆ.

ಮೂರು ದಿನದ ಹಿಂದಷ್ಟೇ ಕುಟುಂಬ ಸಮೇತರಾಗಿ ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ತಡ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ರಾತ್ರಿ 2.30 ಕ್ಕೆ ಸ್ಪಂದನಾ ನಿಧನ ಸುದ್ದಿ ತಿಳಿದು ಬಂದಿದೆ

ಈ ಕುರಿತು ಭಾವುಕರಾಗಿ ಮಾತನಾಡಿದ ನಟ ಮುರಳಿ, ನನಗೆ ಅಣ್ಣ ಫೋನ್ ಮಾಡಿ ಹೇಳಿದ್ದು ಇಷ್ಟೇ.. ಸಂಬಂಧಿಕರ ಟ್ರಿಪ್‌ಗೆ ಹೋಗಿದ್ದಾರೆ. ಅಣ್ಣ ಶೂಟಿಂಗ್ ಮುಗಿಸಿಕೊಂಡು ಜಾಯಿನ್ ಆಗಿದ್ದಾರೆ. ಹೀಗೆ ಎಲ್ಲಾ ಟೈಮ್ ಸ್ಪೆಂಡ್ ಮಾಡುವಾಗ ಮಲಗಿದವರು ಮತ್ತೆ ಎದ್ದಿಲ್ಲ. ಹಾಗಾಗಿ ಅಂದುಕೊಂಡಿದ್ದರು. ಆದರೆ ಎಲ್ಲಾ ಲೋ ಬಿಪಿ ಅಂದುಕೊಂಡಿದ್ದರು.ಆದರೆ ಮೃತರಾಗಿದ್ದಾರೆ. ಅಲ್ಲಿಂದ ಬಂದ ಮೇಲೆ ಎಲ್ಲಾ ಡಿಲೇಟ್ಸ್ ಗೊತ್ತಾಗಲಿದೆ. ಇದು ಆಗಿರೋದು ನಿಜ ಎಂದು ಕಣ್ಣೀರು ಹಾಕಿದರು.

ಮೃತ ದೇಹವನ್ನು ಬೆಂಗಳೂರಿಗೆ ತರಲು ಸಕಲ ಸಿದ್ಧತೆ ನಡೆಯುತ್ತಿದೆ. ಥೈಲ್ಯಾಂಡ್ ನಲ್ಲೇ ಮರಣೋತ್ತರ ಪರೀಕ್ಷೆ ನಡೆದಿದ್ದು, ನಾಳೆ ಬೆಳಗ್ಗೆ ಬೆಂಗಳೂರಿಗೆ ಮೃತ ದೇಹ ಕರೆತರಲಿದ್ದಾರೆ. ಈ ಬಗ್ಗೆ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್, ಮೃತ ದೇಹ ದೇಶಕ್ಕೆ ಕರೆತರುವ ಬಗ್ಗೆ ಮುಖ್ಯಮಂತ್ರಿ ಗಳ ಜೊತೆಗೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.

Nimma Suddi
";