LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದರೋಡೆಯಾಗಿದ್ದ ಹಣದಲ್ಲಿ ಪೊಲೀಸರಿಗೆ ಸಿಕ್ಕಿದ್ದು 5.56 ಕೋಟಿ

ಬೆಂಗಳೂರುಡೈರಿಸರ್ಕಲ್ ​ ಬಳಿ ಹಾಡಹಗಲೇ ನಡೆದಿದ್ದ ರಾಬರಿ  ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತುಕೊನೆಗೂ  ಗ್ಯಾಂಗ್ ಪ್ರಮುಖ ಆರೋಪಿಗಳು ಪತ್ತೆಯಾಗಿದ್ದಾರೆಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆಜೊತೆಗೆ ಕೋಟಿ ಕೋಟಿ ಹಣ ಕೂಡ ಪತ್ತೆ ಹಚ್ಚಿದ್ದಾರೆಈವರೆಗೂ ಸುಮಾರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದುಸುಮಾರು 5.56 ಕೋಟಿ ಪತ್ತೆಯಾಗಿದೆ.

ಬೆಂಗಳೂರು ಹೊರವಲಯದ ಹೊಸಕೋಟೆ ಬಳಿಯ ಒಂದು ಪಾಳುಬಿದ್ದ ಮನೆಯಲ್ಲಿ ಗ್ಯಾಂಗ್ ಗುಟ್ಟಾಗಿ ₹5.56 ಕೋಟಿ ಹಣವನ್ನು ಸಂಗ್ರಹಿಸಿಟ್ಟಿದ್ದರುಹೀಗೆ ಹಣ ಸಂಗ್ರಹಿಸಿಟ್ಟಿದ್ದು ರಹಸ್ಯ ಪೊಲೀಸರಿಂದ ಬಯಲಾಗಿದೆ. ಶುಕ್ರವಾರ ಮಧ್ಯರಾತ್ರಿ ಸೆಂಟ್ರಲ್ ಕ್ರೈಂ ಬ್ರಾಂಚ್ (CCB) ಮತ್ತು ಹೊಸಕೋಟೆ ರೂರಲ್ ಪೊಲೀಸ್ ತಂಡಕ್ಕೆ ದೊರೆತ ಒಂದು ಸಣ್ಣ ಕ್ಲೂ ಆಧರಿಸಿ ಆ ಪಾಳು ಮನೆಯ ಬಳಿ ತಲುಪಿದ್ದರುಮನೆಯಲ್ಲಿ ಯಾರೂ ಇಲ್ಲದಿದ್ದರೂ ಬಾಗಿಲು ಲಾಕ್ ಆಗಿತ್ತುಅನುಮಾನ ಹೆಚ್ಚಾಗಿದ್ದರಂದ ತಕ್ಷಣ ಬಾಗಿಲು ಒಡೆದು ಒಳಗೆ ನುಗ್ಗಿದ ಪೊಲೀಸರು ಕೋಣೆಯೊಂದರಲ್ಲಿ ದೊಡ್ಡ ದೊಡ್ಡ ಸೂಟ್‌ಕೇಸ್‌ಗಳುಗೋಣಿಚೀಲಗಳನ್ನು ಕಂಡುಕೊಂಡಿದ್ದಾರೆ.

ಪೊಲೀಸರ ಕಣ್ಣಿಗೆ ಬಿದ್ದಿದ್ದು ಕೋಟಿ ಕೋಟಿ ರೂಪಾಯಿ ನೋಟಿನ ಬಂಡಲ್​!

ಚೀಲಗಳು ತೆಗೆದ ತಕ್ಷಣ ಪೊಲೀಸರ ಕಣ್ಣಿಗೆ ಬಿದ್ದಿದ್ದು ಕೋಟಿ ಕೋಟಿ ರೂಪಾಯಿಗಳ ನೋಟುಗಳ ಬಂಡಲ್‌ಗಳುತಕ್ಷಣ ಇದನ್ನು ವಶ ಪಡೆಸಿಕೊಂಡ ಪೊಲೀಸರು ಸ್ಥಳದಲ್ಲೇ ನಿಟ್ಟುಸಿರು ಬಿಟ್ಟರುತಕ್ಷಣ ಪೊಲೀಸರು ಸಿ.ಸಿ.ಬಿಜಂಟಿ ಆಯುಕ್ತರಿಗೆಡಿಸಿಪಿ ಮಟ್ಟದ ಅಧಿಕಾರಿಗಳಿಗೆ ಮತ್ತು ಪೊಲೀಸ್ ಆಯುಕ್ತ ಕಚೇರಿಗೆ ಮಾಹಿತಿ ರವಾನಿಸಿದರುಮಧ್ಯರಾತ್ರಿಯೇ ಹೆಚ್ಚುವರಿ ತಂಡಗಳು ಆಗಮಿಸಿ ಹಣವನ್ನು ಎಣಿಕೆ ಮಾಡಿ ವಶಪಡಿಸಿಕೊಂಡವು. ಒಂದೇ ಬಾರಿಗೆ ದೊಡ್ಡ ಕಾರ್ಯಾಚರಣೆಯಲ್ಲಿ ಈ ಪ್ರಕರಣದಲ್ಲಿ ಒಟ್ಟು ರಿಕವರಿ ಆದ ಹಣ ₹5. 76 ಕೋಟಿಗೆ ತಲುಪಿದೆ. ಉಳಿದ ₹1.35 ಕೋಟಿ ಇನ್ನೂ ಪತ್ತೆಯಾಗಬೇಕಿದೆ.
ತನಿಖೆಯಲ್ಲಿ ತಿಳಿದುಬಂದಂತೆದರೋಡೆಯಾದ ದೊಡ್ಡ ಮೊತ್ತವನ್ನು ತಕ್ಷಣ ತವರು ಊರುಗಳಿಗೆ ಒಯ್ಯುವುದು ರಿಸ್ಕ್ ಎಂದು ಭಾವಿಸಿದ ಗ್ಯಾಂಗ್ ಈ ಪಾಳುಬಿದ್ದ ಮನೆಯನ್ನೇ ತಾತ್ಕಾಲಿಕ ಠೇವಣಿ ಕೊಠಡಿಯಾಗಿ ಬಳಸಿಕೊಂಡಿತ್ತು. ಈ ಮನೆ ಗ್ಯಾಂಗ್‌ನ ಒಬ್ಬ ಸದಸ್ಯನ ಸಂಬಂಧಿಕರಿಗೆ ಸೇರಿದ್ದಾಗಿ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆಯಾರೂ ವಾಸಿಸದ ಮನೆ ಎಂಬ ಕಾರಣಕ್ಕೆ ಇದು ಸುರಕ್ಷಿತ ಎಂದು ಭಾವಿಸಿದ್ದರುಆದರೆ ಪೊಲೀಸರ ತಾಂತ್ರಿಕ ತನಿಖೆಗುಪ್ತಚರ ಮಾಹಿತಿ ಮತ್ತು ಬಂಧಿತ ಆರೋಪಿಗಳ ವಿಚಾರಣೆಯಿಂದ ಈ ಸ್ಥಳ ಪತ್ತೆಯಾಗಿದೆ.
Author
Nimma Suddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಸತಿ ನಿಲಯಗಳಿಗೆ ದೀಡಿರ್ ಬೇಟಿ ನೀಡಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಬೆಂಗಳೂರು-ಹಾಸನ-ಮಂಗಳೂರು ಜೋಡಿ ರೈಲು ಹಳಿ ನಿರ್ಮಾಣ; ಸಚಿವ ಎಂ.ಬಿ. ಪಾಟೀಲ ಚರ್ಚೆ!ಸಾರ್ವಜನಿಕ ಹಣದಲ್ಲಿ ಬಾಬರಿ ಮಸೀದಿ ನಿರ್ಮಿಸಲು ಬಯಸಿದ್ದ ನೆಹರೂ ಎಂದ ರಾಜನಾಥ ಸಿಂಗ್ಪುಟಿನ್ ಭೇಟಿ: ಭಾರತದ ಜೊತೆ ಅಣು ಸಹಕಾರ ಒಪ್ಪಂದಕ್ಕೆ ರಷ್ಯಾ ಸಂಪುಟ ಅಸ್ತುಕರ್ನಾಟಕದ ಸಹಕಾರ ಸಂಘಗಳ ಅಭಿವೃದ್ಧಿಗೆ ₹4,164 ಕೋಟಿ: ರಾಜ್ಯಸಭೆಗೆ ಅಮಿತ್ ಶಾ70ಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಹಾರಾಟ ರದ್ದು ; ಬೆಂಗಳೂರು, ಮುಂಬೈ ಸೇರಿ ಅನೇಕ ಏರ್ಪೋರ್ಟ್'ನಲ್ಲಿ ಅವ್ಯವಸ್ಥೆದ. ಆಫ್ರಿಕಾ ವಿರುದ್ಧದ 5 ಪಂದ್ಯಗಳ T20I ಸರಣಿಗೆ ಬಲಿಷ್ಠ ಭಾರತ ತಂಡ ಪ್ರಕಟ |IND vs SAಮೊಬೈಲ್‌ಗಳಲ್ಲಿ 'ಸಂಚಾರ ಸಾಥಿ' ಆಯಪ್‌ ಕಡ್ಡಾಯ ಆದೇಶ ಹಿಂಪಡೆದ ಕೇಂದ್ರ ಸರ್ಕಾರವಾಯುಭಾರ ಕುಸಿತ, ಮುಂದಿನ 24 ಗಂಟೆಗಳಲ್ಲಿ ಧಾರಾಕಾರ ಮಳೆ! ಈ ಭಾಗಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ!ಸಿಬಿಐ ತನಿಖೆ ಆದೇಶ ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ತಮಿಳುನಾಡು ಸರ್ಕಾರ ಮನವಿ