LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

'ಟ್ರಂಪ್' ಆರ್ಥಿಕತೆಯಲ್ಲಿ ವಿಪರೀತ ರಾಜಕೀಯ: ಎಸ್ ಜೈಶಂಕರ್ ಕಿಡಿ!

ಕೋಲ್ಕತ್ತಾ: ಸದ್ಯದ ಯುಗದಲ್ಲಿ ಟ್ರಂಪ್ ಅವರ ಆರ್ಥಿಕತೆಯಲ್ಲಿ ರಾಜಕೀಯ ಹೆಚ್ಚಾಗುತ್ತಿದೆ. ಅನಿಶ್ಚಿತ ಜಗತ್ತಿನಲ್ಲಿ ದೇಶವು ತನ್ನ ಅಗತ್ಯಗಳನ್ನು ಖಚಿತಪಡಿಸಿಕೊಳ್ಳಲು ಪೂರೈಕೆ ಮೂಲಗಳನ್ನು ನಿರಂತರವಾಗಿ ವೈವಿಧ್ಯಗೊಳಿಸುವುದು ಮುಖ್ಯವಾಗಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ."ಅಮೆರಿಕ ವ್ಯವಹರಿಸುವ ರಾಷ್ಟ್ರಗಳಿಗೆ ಒಂದಾದ ನಂತರ ಒಂದರಂತೆ ಹೊಸ ನಿಯಮಗಳನ್ನು ಹಾಕುತ್ತಿದೆ" ಎಂದು ಅವರು ಟೀಕಾ ಪ್ರಹಾರ ನಡೆಸಿದ್ದಾರೆ.

ಕೊಲ್ಕತ್ತಾದ ಐಐಎಂನಿಂದ ಗೌರವ ಡಾಕ್ಟರೇಟ್ ಪಡೆದ ನಂತರ ಮಾತನಾಡಿದ ಜೈಶಂಕರ್, ಭಾರತ ಸ್ವಾವಲಂಬನೆಯ ಹಾದಿಯಲ್ಲಿದೆ. ಕೈಗಾರಿಕೆಗಳಿಗೆ ತನ್ನನ್ನು ಉತ್ಪಾದನಾ ನೆಲೆಯನ್ನಾಗಿ ಮಾಡಿಕೊಳ್ಳುತ್ತಿದೆ ಎಂದು ಅವರು ಹೇಳಿದರು 'ಟ್ರಂಪ್ ಆರ್ಥಿಕತೆಯಲ್ಲಿ ರಾಜಕೀಯ ಹೆಚ್ಚಾಗುತ್ತಿರುವ ಯುಗ ಇದು. ಅದು ಕೇವಲ ಪದವಲ್ಲ'. ಅನಿಶ್ಚಿತ ಜಗತ್ತಿನಲ್ಲಿ ನಮ್ಮ ರಾಷ್ಟ್ರೀಯ ಅಗತ್ಯಗಳನ್ನು ಖಾತರಿಪಡಿಸಿಕೊಳ್ಳಲು ನಾವು ನಿರಂತರವಾಗಿ ಪೂರೈಕೆ ಮೂಲಗಳನ್ನು ವೈವಿಧ್ಯಗೊಳಿಸುವುದು ಹೆಚ್ಚು ಮುಖ್ಯವಾಗಿದೆ ಎಂದರು.ಒಂದಾದ ನಂತರ ಒಂದರಂತೆ ಹೊಸ ನಿಯಮ: ಸಮಕಾಲೀನ ವ್ಯವಸ್ಥೆಯ ದೀರ್ಘಾವಧಿಯ ಒಪ್ಪಂದದಾರನಾಗಿರುವ ಅಮೆರಿಕ ವ್ಯವಹರಿಸುವ ರಾಷ್ಟ್ರಗಳಿಗೆ ಒಂದಾದ ನಂತರ ಒಂದರಂತೆ ಹೊಸ ಹೊಸ ನಿಯಮಗಳನ್ನು ಹಾಕುತ್ತಿದೆ ಎಂದು ಅವರು ಕಿಡಿಕಾರಿದರು.ಸುಂಕುಗಳನ್ನು ಪರಿಹರಿಸಲು ಹಾಗೂ ಸಮಗ್ರ ವ್ಯಾಪಾರ ಒಪ್ಪಂದಕ್ಕಾಗಿ ಭಾರತ ಮತ್ತುಅಮೆರಿಕ ಮಾತುಕತೆಗಳನ್ನು ನಡೆಸುತ್ತಿದೆ ಎಂದು ಹೇಳಿದ ಸಚಿವರು, ಚೀನಾ, ತನ್ನ ನಿಯಮಗಳಿಗೆ ದೀರ್ಘಕಾಲದಿಂದ ಬದ್ಧವಾಗಿದೆ. ಈಗಲೂ ಅದನ್ನು ಮಾಡುತ್ತಿದೆ ಎಂದರು.

ಅಭದ್ರತೆಯ ಭೀತಿಯಲ್ಲಿ ತೃತೀಯ ರಾಷ್ಟ್ರಗಳು:

ಇತರ ರಾಷ್ಟ್ರಗಳು ಸ್ಪರ್ಧೆಯ ಮೇಲೆ ಗಮನ ಹರಿಸಬೇಕೇ ಅಥವಾ ಅದನ್ನು ನಿಲ್ಲಿಸುವ ವ್ಯಾಪಾರ ಒಪ್ಪಂದಗಳು ಮೇಲೆ ಗಮನ ಹರಿಸಬೇಕೇ ಎಂಬುದು ಸ್ಪಷ್ಟವಾಗಿಲ್ಲ. ತೃತೀಯ ರಾಷ್ಟ್ರಗಳು ಜಾಗತೀಕರಣ, ಪೂರೈಕೆ ಅಭದ್ರತೆಯಂತಹ ಒತ್ತಡಕ್ಕೆ ಸಿಲುಕಿ ನಲುಗುತ್ತಿವೆ. ಭಾರತ ಅಪ್ರತಿಮ ಪ್ರಗತಿ: ಭಾರತವು ಮೂಲಸೌಕರ್ಯ ಮತ್ತು ಇತ್ತೀಚಿನ ವೈಜ್ಞಾನಿಕ ಬೆಳವಣಿಗೆಗಳಲ್ಲಿ ಅಪ್ರತಿಮ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ಅವರು ಪ್ರತಿಪಾದಿಸಿದರು.

Author
Nimma Suddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಸತಿ ನಿಲಯಗಳಿಗೆ ದೀಡಿರ್ ಬೇಟಿ ನೀಡಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಬೆಂಗಳೂರು-ಹಾಸನ-ಮಂಗಳೂರು ಜೋಡಿ ರೈಲು ಹಳಿ ನಿರ್ಮಾಣ; ಸಚಿವ ಎಂ.ಬಿ. ಪಾಟೀಲ ಚರ್ಚೆ!ಸಾರ್ವಜನಿಕ ಹಣದಲ್ಲಿ ಬಾಬರಿ ಮಸೀದಿ ನಿರ್ಮಿಸಲು ಬಯಸಿದ್ದ ನೆಹರೂ ಎಂದ ರಾಜನಾಥ ಸಿಂಗ್ಪುಟಿನ್ ಭೇಟಿ: ಭಾರತದ ಜೊತೆ ಅಣು ಸಹಕಾರ ಒಪ್ಪಂದಕ್ಕೆ ರಷ್ಯಾ ಸಂಪುಟ ಅಸ್ತುಕರ್ನಾಟಕದ ಸಹಕಾರ ಸಂಘಗಳ ಅಭಿವೃದ್ಧಿಗೆ ₹4,164 ಕೋಟಿ: ರಾಜ್ಯಸಭೆಗೆ ಅಮಿತ್ ಶಾ70ಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಹಾರಾಟ ರದ್ದು ; ಬೆಂಗಳೂರು, ಮುಂಬೈ ಸೇರಿ ಅನೇಕ ಏರ್ಪೋರ್ಟ್'ನಲ್ಲಿ ಅವ್ಯವಸ್ಥೆದ. ಆಫ್ರಿಕಾ ವಿರುದ್ಧದ 5 ಪಂದ್ಯಗಳ T20I ಸರಣಿಗೆ ಬಲಿಷ್ಠ ಭಾರತ ತಂಡ ಪ್ರಕಟ |IND vs SAಮೊಬೈಲ್‌ಗಳಲ್ಲಿ 'ಸಂಚಾರ ಸಾಥಿ' ಆಯಪ್‌ ಕಡ್ಡಾಯ ಆದೇಶ ಹಿಂಪಡೆದ ಕೇಂದ್ರ ಸರ್ಕಾರವಾಯುಭಾರ ಕುಸಿತ, ಮುಂದಿನ 24 ಗಂಟೆಗಳಲ್ಲಿ ಧಾರಾಕಾರ ಮಳೆ! ಈ ಭಾಗಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ!ಸಿಬಿಐ ತನಿಖೆ ಆದೇಶ ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ತಮಿಳುನಾಡು ಸರ್ಕಾರ ಮನವಿ