This is the title of the web page
This is the title of the web page

Live Stream

January 2025
S M T W T F S
 1234
567891011
12131415161718
19202122232425
262728293031  

| Latest Version 9.4.1 |

State News

ಒಂದೊಮ್ಮೆ ಓದಿ: ಜ್ಞಾನ ಮತ್ತು ಸಂಭಾಷಣೆಯ ವಿನಿಮಯವು ಗರುಡ ಪುರಾಣದ ಆರಂಭಕ್ಕೆ ಕಾರಣವಾಯಿತು.

ಒಂದೊಮ್ಮೆ ಓದಿ: ಜ್ಞಾನ ಮತ್ತು ಸಂಭಾಷಣೆಯ ವಿನಿಮಯವು ಗರುಡ ಪುರಾಣದ ಆರಂಭಕ್ಕೆ ಕಾರಣವಾಯಿತು.

ಹಿಂದೂ ಧರ್ಮವು ಅತ್ಯಂತ ಹಳೆಯ ಧರ್ಮಗಳಲ್ಲಿ ಒಂದಾಗಿದ್ದು, ಸಾಮಾನ್ಯವಾಗಿ ಸನಾತನ ಧರ್ಮ, ಶಾಶ್ವತ ಮಾರ್ಗ, ನಿರಂತರ ಮಾರ್ಗ ಎಂದು ಕರೆಯಲಾಗುತ್ತದೆ. ಬ್ರಹ್ಮ ದೇವರಿಗೆ ಜೀವನದ ಪರಿಕಲ್ಪನೆಯ ಬೋಧಿಸುವ ಕರ್ತವ್ಯವನ್ನು ನೀಡಲಾಗಿದೆ ಎಂದು ಹೇಳಲಾಗುತ್ತದೆ. ಭಗವಾನ್ ವಿಷ್ಣುವು ತನ್ನ ವಾಹನವಾದ ಗರುಡನಿಗೆ ಧರ್ಮ, ಕರ್ಮ ಮತ್ತು ಪಾಪದ ಎಲ್ಲಾ ಜ್ಞಾನವನ್ನು ಬೋಧಿಸಿದರು.

ಈ ಜ್ಞಾನ ಮತ್ತು ಸಂಭಾಷಣೆಯ ವಿನಿಮಯವು ಗರುಡ ಪುರಾಣದ ಆರಂಭಕ್ಕೆ ಕಾರಣವಾಯಿತು. ನರಕ ಮತ್ತು ಸ್ವರ್ಗವಾಸಿಗಳ ಬಗ್ಗೆ ಗರುಡನು ವಿಷ್ಣುವನ್ನು ವಿಚಾರಿಸಿದಾಗ, ವಿಷ್ಣು ಹೀಗೆ ಹೇಳುತ್ತಾರೆ: ಯಾರು ಯಾವಾಗಲೂ ತಪ್ಪು ಕಾರ್ಯ ಮಾಡುವುದನ್ನು ಸಂತೋಷಪಡುತ್ತಾರೆ, ಒಳ್ಳೆಯ ಕಾರ್ಯಗಳಿಂದ ದೂರವಿರುತ್ತಾರೋ ಅಂತಹವರು ನರಕಕ್ಕೆ, ದುಃಖಕ್ಕೆ ಮತ್ತು ಭಯಕ್ಕೆ ಒಳಗಾಗುತ್ತಾರೆ.ಕಲಿಯುಗದಲ್ಲಿ ಯಾರು ಕೆಳಗಿನ ಪಾಪಗಳನ್ನು ಮಾಡುತ್ತಾರೋ ಅಂತಹವರು ವೈತರಣಿ ನದಿಯ ಯಾತನೆಯನ್ನು ನೇರವಾಗಿ ದಾಟಿಕೊಂಡು ನರಕಕ್ಕೆ ಹೋಗಿ, ಅಲ್ಲಿ ತಿರುಗುತ್ತಿರುತ್ತಾರೆ

ಯಾರು ದೇವರ ಸೇವೆಯನ್ನೂ ಮಾಡುತ್ತಾ, ಆದರೆ ಮದ್ಯ ಮತ್ತು ಮಾಂಸದ ಖರೀದಿ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡಿರುವುದು, ತಮ್ಮ ಸಂಗಾತಿಯ ಹೊರತಾಗಿ ಇತರರೊಂದಿಗೆ ಸಂಬಂಧ ಬೆಳೆಸುವವರು.

 

ರಾಜನ ಹೆಂಡತಿ, ಉದಾತ್ತ ಪುರುಷನ ಹೆಂಡತಿಯನ್ನು ಅಪೇಕ್ಷಿಸುವುದು ಮತ್ತು ಒಂದೇ ಕುಟುಂಬದ ಮಹಿಳೆಯರ ಬಗ್ಗೆ ಕಾಮವುಳ್ಳವನಾಗಿರುವುದು. ಯುವತಿಯರನ್ನು ಅವರ ಜ್ಞಾನ ಮತ್ತು ಇಚ್ಛೆಗೆ ವಿರುದ್ಧವಾಗಿ ನಿಂದಿಸುವುದು; ಮುಗ್ಧತೆಯ ಸದ್ಗುಣವನ್ನು ನಿಂದಿಸುವುದು – ಇದು ಪುರುಷ ಮತ್ತು ಮಹಿಳೆಗೂ ಅನ್ವಯವಾಗುತ್ತದೆ.

ಸುಳ್ಳು ಸಾಕ್ಷ್ಯ ನೀಡುವುದು, ನಿರಪರಾಧಿಗಳಿಗೆ ತೊಂದರೆ ಕೊಡಲು ಕೆಟ್ಟ ಕೆಲಸಗಳನ್ನು ಮಾಡುವುದು; ದುಷ್ಟರ ಕೈಯಲ್ಲಿ ಸತ್ಯವನ್ನು ನಾಶಪಡಿಸುವುದು ಘೋರ ಪಾಪಗಳು.

ಮರಗಳನ್ನು ಕಡಿಯುವ ಮೂಲಕ, ಬೆಳೆಗಳು ಮತ್ತು ಕಾಡುಗಳನ್ನು ನಾಶಪಡಿಸುವ ಮೂಲಕ, ಪ್ರಕೃತಿಯ ಆಶ್ರಯಗಳ ನಾಶ ಮಾಡುವ ಮೂಲಕ ಪ್ರಕೃತಿ ಮಾತೆಗೆ ಹಾನಿ ಮತ್ತು ವಿನಾಶವನ್ನು ತರುವುದು.

ವಿಧವೆಯರ ಗೌರವವನ್ನು ನಾಶಪಡಿಸುವುದು; ಮತ್ತು ಮದುವೆಯ ಸಂಬಂಧವನ್ನು ಮುರಿಯಲು ಪುರುಷನನ್ನು ವಶವಾಗಿಸಿಕೊಳ್ಲುವುದು ದೇವರ ದೃಷ್ಟಿಯಲ್ಲಿ ಸಮಾನ ಪಾಪಗಳು.

ಸಂಗಾತಿಯ ಮತ್ತು ಮಕ್ಕಳ ಅಗತ್ಯಗಳನ್ನು ನಿರ್ಲಕ್ಷಿಸುವುದು ಮತ್ತು ಅವರ ಮೇಲೆ ಆಕ್ರಮಣ ಮಾಡುವುದು; ಪೂರ್ವಜರನ್ನು – ಮನೆಯ ಹಿರಿಯರನ್ನು ನಿರ್ಲಕ್ಷಿಸುವುದರಿಂದ ನರಕ ಪ್ರಾಪ್ತಿಯಾಗುವುದು ನಿಶ್ಚಿತ.

ದೇವರ ಸೇವೆಯಲ್ಲಿರುವ ಪುರೋಹಿತ ಬ್ರಾಹ್ಮಣನನ್ನು ಕೊಲ್ಲುವುದು, ಅಮಲೇರಿದ ಸ್ಥಿತಿಯಲ್ಲಿ ಬದುಕುವುದು, ಪವಿತ್ರ ವ್ರತಗಳು ಮತ್ತು ಭರವಸೆಗಳನ್ನು ಉಲ್ಲಂಘಿಸುವುದು, ಭ್ರೂಣವನ್ನು ಕೊಲ್ಲುವುದು ಮತ್ತು ಭ್ರೂಣವನ್ನು ನಾಶಪಡಿಸುವುದು ಘೋರ ಪಾಪವೆಂದು ಪರಿಗಣಿಸಲಾಗಿದೆ. ಇದರಿಂದ ನರಕದಲ್ಲಿ ತೀವ್ರವಾದ ಶಿಕ್ಷೆಗೆ ಕಾರಣವಾಗುತ್ತದೆ.ಮಹಿಳೆಯನ್ನು ಕೊಲೆ ಮಾಡುವುದು, ಹೆಣ್ಣಿನ ಗೌರವವನ್ನು ಕಳಚುವುದು ಮತ್ತು ಅಂತಹ ಕೃತ್ಯ ನಡೆಯುತ್ತಿದ್ದರೂ ಮೂಕಪ್ರೇಕ್ಷಕರಾದವರು, ಗರ್ಭವತಿ ಮಹಿಳೆಗೆ ಹಾನಿ ಮಾಡುವುದು ಅಥವಾ ಅಂತಹವಳನ್ನು ಕೊಲ್ಲುವುದು ಮಹಾಪಾಪ.

ಯಾರದೇ ನಂಬಿಕೆಗೆ ದ್ರೋಹ ಬಗೆಯುವುದು, ವಿಷವನ್ನು ಅಸ್ತ್ರವನ್ನಾಗಿ ಬಳಸಿ ಹತ್ಯೆ ಮಾಡುವುದು.

ಪವಿತ್ರ ತೀರ್ಥಯಾತ್ರೆಗಳ ಸ್ಥಳಗಳನ್ನು ಕೀಳಾಗಿ ನೋಡುವುದು, ಒಳ್ಳೆಯ ಜನರನ್ನು ವಂಚಿಸುವುದು, ಯಾರಾದರೂ ಸಹಾಯ ಮಾಡಿದಾಗ ಅವಮಾನ ಮತ್ತು ನಿಂದನೆಯೊಂದಿಗೆ ಹಿಂದಿರುಗಿಸುವುದು; ಧಾರ್ಮಿಕ ಗ್ರಂಥಗಳು, ಪುರಾಣಗಳು, ವೇದಗಳು, ಮೀಮಾಂಸಾ, ನ್ಯಾಯ ಮತ್ತು ವೇದಾಂತಗಳ ಅಸ್ತಿತ್ವವನ್ನು ಕಡಿಮೆಗೊಳಿಸುವುದು.

ಅಸಹಾಯಕರ ಬಗ್ಗೆ ಕರುಣೆ ತೋರದವರನ್ನು ಮತ್ತು ದುರ್ಬಲರ ಶಿಕ್ಷಿಸುವವರನ್ನು ನೇರವಾಗಿ ನರಕಕ್ಕೆ ಕರೆದೊಯ್ಯಲಾಗುತ್ತದೆ.

ಅಗತ್ಯವಿರುವವರಿಗೆ ಉದ್ದೇಶಪೂರ್ವಕವಾಗಿ ಆಹಾರ ಮತ್ತು ನೀರನ್ನು ನೀಡದಿರುವುದು ಮತ್ತು ಅತಿಥಿಗಳಿಗೆ ಆಹಾರವನ್ನು ನೀಡದೆ ಮನೆಯ ಬಾಗಿಲಿನಿಂದ ವಾಪಸ್​ ಕಳುಹಿಸುವುದು.

ಇತರರಿಗೆ ಸಹಾಯ ಮಾಡಲು ಕೊಟ್ಟಿರುವುದನ್ನು ಕಸಿದುಕೊಳ್ಳುವವರು, ದಾನ ಧರ್ಮಗ ಬಗ್ಗೆ ಪಶ್ಚಾತ್ತಾಪ ಪಡುವವರು, ಬೇರೊಬ್ಬರ ಜೀವನೋಪಾಯವನ್ನು ತಮ್ಮ ಒಳಿತಿಗಾಗಿ ಕಸಿದುಕೊಳ್ಳುವುದು ಮಹಾಪಾಪ.

Nimma Suddi
";