This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

State News

ಕೆರೆ ಅಂಗಳದಲ್ಲಿ ಹಣ್ಣಿನ ಗಿಡ ನಾಟಿ

ಕೆರೆ ಹಸ್ತಾಂತರ

ನಿಮ್ಮ ಸುದ್ದಿ ಬಾಗಲಕೋಟೆ

ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆೆ ಮತ್ತು ಭಗವತಿ ಗ್ರಾ.ಪಂ ಕಿರೇಸೂರ ಅಭಿವೃದ್ದಿ ಸಮಿತಿ ಸಹಯೋಗದಲ್ಲಿ ೨೫೩ನೇ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ತಾಲೂಕಿನ ಕಿರಸೂರ ಗ್ರಾಮದಲ್ಲಿನ ಶಾಸಕ ವೀರಣ್ಣ ಚರಂತಿಮಠ ಜಾನಕಿ ಕೆರೆ ಹಸ್ತಾಂತರ ಮಾಡುವ ಮೂಲಕ ಕೆರೆ ಅಂಗಳದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟರು.

ಭಗವತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಿರಸೂರ ಗ್ರಾಮದಲ್ಲಿನ ಜಾನಕಿ ಕೆರೆ ಹೂಳೆತ್ತುವ ಹಾಗೂ ಕಲ್ಲು ಪಿಂಚಿಂಗ್ ಕಾಮಗಾರಿ ಪೂರ್ಣಗೊಂಡ ಹಿನ್ನಲೆಯಲ್ಲಿ ಕೆರೆ ಹಸ್ತಾಂತರಗೊಳಿಸಲಾಗಿದ್ದು, ಕೆರೆ ಅಂಗಳದಲ್ಲಿ ನೆರಳೆ, ಹುಣಸೆ, ಪೇರಲ ಸೇರಿ ೩೫ ಗಿಡಗಳನ್ನು ನೆಡಲಾಯಿತು.

ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಪುರುಷೋತ್ತಮ ಪಿ.ಕೆ, ಜಿಲ್ಲಾ ನಿರ್ದೇಶಕ ಮಹೇಶ ಎಂ.ಡಿ, ಭಗವತಿ ಗ್ರಾ.ಪಂ ಪಿಡಿಓ ಎಸ್.ಬಿ.ಅಂಕೋಲಿ, ಡಿ.ಜಿ.ಲಮಾಣಿ, ಕಾರ್ಯದರ್ಶಿ ದುಂಡಯ್ಯ ಹಳದೂರ, ಕೆರೆ ಸಮಿತಿ ಉಪಾದ್ಯಕ್ಷ ರುದ್ರಯ್ಯ ಹುನಗುಂದ, ಕಾರ್ಯದರ್ಶಿ ಹಾಗೂ ತಾಲೂಕಿನ ಯೋಜನಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Nimma Suddi
";