This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

State News

ಕೂಡಲಸಂಗಮ ಸ್ವಾಮೀಜಿ ಘೋಷಣೆ:19 ರಂದು ಸಿಎಂ ಮನೆ ಎದುರು ಪ್ರತಿಭಟನೆ

19ಕ್ಕೆ ಸಿಎಂ ಮನೆ ಮುಂದೆ ಪ್ರತಿಭಟನೆ 

ನಿಮ್ಮ ಸುದ್ದಿ ಶಿಗ್ಗಾವಿ

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಲ್ಲಿ ಸರಕಾರ ನೀಡಿದ ಗಡುವು ಮುಗಿದಿದೆ. ಹೀಗಾಗಿ ಸೆ.19 ರಂದು ಬಸವರಾಜ ಬೊಮ್ಮಾಯಿ ಅವರ ಶಿಗ್ಗಾವಿ ಯಲ್ಲಿರುವ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವದು ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಶಿಗ್ಗಾವಿ, ಸವಣೂರ ತಾಲೂಕಿನ ಪ್ರತಿ ಗ್ರಾಮಗಳಿಗೆ ಸಂಚರಿಸಿ ಹೋರಾಟಕ್ಕೆ ಅಣಿಗೊಳಿಸಲಾಗುತ್ತಿದೆ. ಸಮಾಜದ ಸಂಘಟನೆ ಮಾಡಲಾಗುತ್ತಿದೆ. ಜಗಕ್ಕೆ ಅನ್ನ ನೀಡುವ ಕಾಯಕದಲ್ಲಿ ನಿರತರಾದ ಪಂಚಮಸಾಲಿ ಜನಾಂಗಕ್ಕೆ ಸರಕಾರದ ಯಾವುದೇ ಸೌಲಭ್ಯ ನೀಡುವಲ್ಲಿ ಅನ್ಯಾಯವಾಗುತ್ತಿದೆ ಎಂದರು.

“ಸಮಾಜದ ಬಡ ಮಕ್ಕಳ ಭವಿಷ್ಯದ ಕಲ್ಯಾಣಕ್ಕಾಗಿ ಹೋರಾಡುವದು ಅನಿ ವಾರ್ಯವಾಗಿದೆ. 2ಎ ಮೀಸಲಾತಿ ಪಡೆಯಲೇಬೇಕಾಗಿದೆ. ಯಾವುದೇ ಕಾರಣಕ್ಕೂ ಸಿಎಂ ಇತರರ ಒತ್ತಡಕ್ಕೆ ಮಣಿಯಬಾರದು,” ಎಂದು ಒತ್ತಾಯಿಸಿದರು.

Nimma Suddi
";