This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Entertainment News

‘ಪ್ರಿಯಾಂಕಾ ನಡವಳಿಕೆಯಿಂದ ಸಿನಿಮಾ ಕಳೆದುಕೊಂಡ ನಟನಿಗೆ ನಂತರ ಸಿಗಲೇ ಇಲ್ಲ ಗೆಲುವು

‘ಪ್ರಿಯಾಂಕಾ ನಡವಳಿಕೆಯಿಂದ ಸಿನಿಮಾ ಕಳೆದುಕೊಂಡ ನಟನಿಗೆ ನಂತರ ಸಿಗಲೇ ಇಲ್ಲ ಗೆಲುವು

ರಜನೀಶ್ ದುಗ್ಗಲ್ ಅವರು ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದು, ಅವರು ‘ಮಿಸ್ಟರ್ ಇಂಡಿಯಾ’ ಹಾಗೂ ಮಿಸ್ಟರ್ ಇಂಟರ್​ನ್ಯಾಷನ್’ ಆಗಿ ಗಮನ ಸೆಳೆದಿದ್ದರು ಎಂದು ಮಾಹಿತಿ ತಿಳಿದು ಬಂದಿದೆ.

ಅವರು 2005ರಲ್ಲಿ ಪ್ರಿಯಾಂಕಾ ಚೋಪ್ರಾ ಜೊತೆ ‘ಯಕೀನ್’ ಸಿನಿಮಾ ಮಾಡಬೇಕಿದ್ದು, ಅವರಿಗೆ ಸಿಕ್ಕ ಸಿನಿಮಾ ಆಫರ್ ಪ್ರಿಯಾಂಕಾ ಚೋಪ್ರಾ ವರ್ತನೆಯಿಂದ ಕೈ ತಪ್ಪಿತು. ಈ ಬಗ್ಗೆ ಅವರು ಇತ್ತೀಚೆಗೆ ಹೇಳಿಕೊಂಡಿದ್ದಾರೆ.

‘ಒಂದು ದಿನ ನಿರ್ಮಾಪಕ ಸುಜಿತ್ ಕುಮಾರ್ ಸಿಂಗ್ ನನ್ನನ್ನು ಕರೆದರು. ಪ್ರಿಯಾಂಕಾ ಚೋಪ್ರಾ ಹೊಸಬರ ಜೊತೆ ನಟಿಸಲ್ಲ ಎನ್ನುತ್ತಿದ್ದಾರೆ ಎಂದು ಹೇಳಿದರು. ನೀವು ನನ್ನ ಮೇಲೆ ಸಾಕಷ್ಟು ಹಣ ಸುರಿದಿದ್ದೀರಲ್ಲ, ನಟಿಯನ್ನು ಬದಲಾಯಿಸಿ ಎಂದು ನಿರ್ಮಾಪಕರಿಗೆ ಹೇಳಿದೆ.

ಸಿನಿಮಾ ಬಿಸ್ನೆಸ್ ಹೇಗೆ ನಡೆಯುತ್ತದೆ ಎನ್ನುವುದರ ಅರಿವು ನನಗೆ ಇರಲಿಲ್ಲ. ಪ್ರಿಯಾಂಕಾ ನಿರ್ಧಾರ ತಪ್ಪು ಎನ್ನುವುದಿಲ್ಲ. ಆದರೆ, ಅವರು ನನ್ನ ಜೊತೆ ನಟಿಸುತ್ತೇನೆ ಎನ್ನಬೇಕಿತ್ತು’ ಎಂದಿದ್ದಾರೆ ರಜನೀಶ್.

ಸಿದ್ದಾರ್ಥ್ ಕಣ್ಣನ್ ಜೊತೆ ನಡೆದ ಸಂದರ್ಶನದಲ್ಲಿ ರಜನೀಶ್ ಈ ಬಗ್ಗೆ ಮಾತನಾಡಿದ್ದಾರೆ. ಹೊಸಬರ ಜೊತೆ ಸಿನಿಮಾ ಮಾಡಲ್ಲ ಎಂದು ಪ್ರಿಯಾಂಕಾ ಹೇಳಿದ್ದರು., ನಿರ್ಮಾಪಕರು ರಜನೀಶ್ ಬದಲು ಬೇರೆಯವರನ್ನು ಆಯ್ಕೆ ಮಾಡಿಕೊಂಡಿದ್ದರು. ‘ಯಕೀನ್ ಚಿತ್ರಕ್ಕೆ ನಾನು ಮೊದಲ ಆಯ್ಕೆ ಆಗಿದ್ದೆ.

ನಾನು ಈ ಚಿತ್ರಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದೆ. ನನ್ನೂರಿನಿಂದ ಮುಂಬೈ ಶಿಫ್ಟ್ ಆದೆ. ನಿರ್ಮಾಪಕರು ನನ್ನ ಜೊತೆ ಮೂರು ಸಿನಿಮಾಗಳ ಡೀಲ್ ಮಾಡಿಕೊಂಡಿದ್ದರು. ಯಕೀನ್ ಸಿನಿಮಾದಲ್ಲಿ ಪ್ರಿಯಾಂಕಾ ಜೊತೆ ನಾನು ನಟಿಸಬೇಕಿತ್ತು.

ನನಗೆ ನಿರ್ಮಾಪಕರು ಜುಹುನಲ್ಲಿ ಪೆಂಟ್​ಹೌಸ್ ನೀಡಿದ್ದರು. ಓಡಾಡೋಕೆ ಕಾರು ಹಾಗೂ ಅದಕ್ಕೆ ಡ್ರೈವರ್ ಕೂಡ ಕೊಟ್ಟಿದ್ದರು. ನಿತ್ಯವೂ ನನ್ನ ಫ್ಲ್ಯಾಟ್​ಗೆ ಊಟ ಬರುತ್ತಿತ್ತು. ನಾನು ನಟನೆಯ ಬಗ್ಗೆ ಮಾತ್ರ ಗಮನ ಹರಿಸಿದೆ. ಆಗ ಬಂದ ಹಲವು ಜಾಹೀರಾತುಗಳನ್ನು ಕೈ ಬಿಟ್ಟೆ’ ಎಂದಿದ್ದಾರೆ ರಜನೀಶ್.

";