This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Crime NewsLocal NewsState News

ಬೈಕ್ ನಲ್ಲಿ ಬಂದರು:5 ಲಕ್ಷ ಹಣ ದೋಚಿದರು

ಬೈಕ್ ನಲ್ಲಿ ಬಂದರು:5 ಲಕ್ಷ ಹಣ ದೋಚಿದರು

ನಿಮ್ಮ ಸುದ್ದಿ ಬಾಗಲಕೋಟೆ

ಎರಡು ಬೈಕ್‌ನಲ್ಲಿ ನಾಲ್ಕು ಜನ ಕದೀಮರು ಏಕಾಏಕಿ ಗಾಡಿ ನಿಲ್ಲಿಸಿ ಕಿರಾಣಿ ಅಂಗಡಿ ಮಾಲೀಕರ ಹತ್ತಿರವಿದ್ದ 5.53 ಲಕ್ಷವಿರುವ ಬ್ಯಾಗ್ ಕಿತ್ತುಕೊಂಡು ಪರಾರಿಯಾದ ಘಟನೆ ಮಂಗಳವಾರ ಜಿಲ್ಲೆಯ ಕೂಡಲಸಂಗಮದ ಕಳಸನ ಮಾರ್ಗ ರಸ್ತೆಯಲ್ಲಿ ನಡೆದಿದೆ.

ತಾಲೂಕಿನ ಧನ್ನೂರ ಗ್ರಾಮದಿಂದ ವಿಜಯಪುರಕ್ಕೆ ಕ್ಯಾಂಟರ್ ಮೂಲಕ ಕಿರಾಣಿ ಸಂತೆ ತರಲು ಹೋಗುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ.

ಗ್ರಾಮದ ಕಿರಾಣಿ ಮಾಲೀಕ ಬಸವರಾಜ ಹುದ್ದಾರ ಕಿರಾಣಿ ಸಂತೆಗಾಗಿ ಪ್ರತಿ ಮರೋಳ ಗ್ರಾಮದ ಕ್ಯಾಂಟರ್ ಗಾಡಿಯನ್ನು ತೆಗೆದುಕೊಂಡು ವಿಜಯಪುರದಿಂದ ಕಿರಾಣಿ ಸಂತೆಯನ್ನು ತರುತ್ತಿದ್ದರು.

ಮಂಗಳವಾರ ಕೂಡಲಸಂಗಮದ ಕಳಸನ ಮಾರ್ಗದ ಮೂಲಕ ವಿಜಯಪುರಕ್ಕೆ ಹೋಗುತ್ತಿದ್ದ ವೇಳೆ ಮಾರ್ಗ ಮಧ್ಯೆದಲ್ಲಿ ಎರಡು ಬೈಕ್ ನಲ್ಲಿ ನಾಲ್ವರು ಕಳ್ಳರು ಕ್ಯಾಂಟ‌ರ್ ಗಾಡಿ ಹಿಂಬಾಲಿಸುತ್ತ ಗಾಡಿಯ ಚಾಲಕನಿಗೆ ನಮ್ಮ ಬೈಕ್‌ ಗೆ ಟಚ್ ಮಾಡಿ ಎಂದು ಧಮ್ಮಿ ಹಾಕಿ ಏಕಾಏಕಿ ಗಾಡಿಯನ್ನು ನಿಲ್ಲಿಸಿ, ಡ್ರೈವರ್ ಕೆಳಗೆ ಇಳಿಯುತ್ತಿದ್ದಂತೆ ಇದ್ದ ನಾಲ್ವರು ಕದೀಮರಲ್ಲಿ ಒಬ್ಬನು ಕ್ಯಾಂಟರ್ ಗಾಡಿಯ ಡ್ರೈವರ್‌ನ್ನು ಹಿಡಿದೆಳೆದು ಹಿಂದೆ ಇನ್ನುಳಿದ ಮೂವರು ಕರದ್ಯೋದರೇ ಕದೀಮರು ಗಾಡಿಯಲ್ಲಿ ಕುಳಿತಿದ್ದ ಕಿರಾಣಿ ಅಂಗಡಿಯ ಮಾಲೀಕ ಹುದ್ದಾರ ಅವರಿಗೆ ಮಾರಕಾಸ್ತ್ರವನ್ನು ತೋರಿಸಿ ಕೆಳಗೆ ಇಳಿಸಿ ಕಣ್ಣಿಗೆ ಖಾರದ ಪುಡಿ ಎರಚಿ ಅವರ ಕೈಯಲ್ಲಿದ್ದ 5.53 ಲಕ್ಷ ರೂ.ವಿನ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪ್ರಸನ್ನ ದೇಸಾಯಿ, ಡಿಎಸ್‌ ಪಿ ಪ್ರಭುಗೌಡ ಕಿರೇಹಳ್ಳಿ, ಬೆಂಡೆಗುಂಬಳ, ಪಿಎಸ್‌ಪಿ ಚನ್ನಯ್ಯ ದೇವೂರ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದೆವರೆಸಿದ್ದಾರೆ.

Nimma Suddi
";