This is the title of the web page
This is the title of the web page

Live Stream

January 2025
S M T W T F S
 1234
567891011
12131415161718
19202122232425
262728293031  

| Latest Version 9.4.1 |

Education NewsLocal NewsState News

ಪಂಚಮಸಾಲಿ ಸಮಾಜದ ಮೂವರು ಸ್ವಾಮೀಜಿ ಭಾಗಿ

ಪಂಚಮಸಾಲಿ ಸಮಾಜದ ಮೂವರು ಸ್ವಾಮೀಜಿ ಭಾಗಿ

ಬಾಗಲಕೋಟೆ

ಜಿಲ್ಲೆಯ ಪಂಚಮಸಾಲಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಆ.೨೦ರಂದು ನಡೆಯಲಿದೆ.

ವಿದ್ಯಾಗಿರಿಯ ಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮ ಸಾಯಿಮಂದಿರದಲ್ಲಿ ಬೆಳಗ್ಗೆ ೧೧ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಕೂಡಲಸಮಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಅಲಗೂರಿನ ಪಂಚಮಸಾಲಿ ಪೀಠದ ಮಹಾದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಪಿ.ನಾಡಗೌಡ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕರಾದ ವಿಜಯಾನಂದ ಕಾಶಪ್ಪನವರ, ಎಚ್.ವೈ.ಮೇಟಿ, ಸಿದ್ದು ಸವದಿ, ಪರಿಷತ್ ಸದಸ್ಯ ಹನಮಂತ ನಿರಾಣಿ, ಮಾಜಿ ಸಚಿವ ಮುರಗೇಶ ನಿರಾಣಿ, ಜಿ.ಎನ್.ಪಾಟೀಲ, ಹನಮಂತ ಮಾವಿನಮರದ, ಸಿದ್ದು ಕೊಣ್ಣೂರ, ಡಾ.ಎ.ಆರ್.ಬೆಳಗಲಿ, ಪಿ.ಎನ್.ಪಾಟೀಲ, ನಾಗರಾಜ ಗಲಗಲಿ, ಶಂಕ್ರಪ್ಪ ನೇಗಲಿ ಇತರರು ಆಗಮಿಸಲಿದ್ದಾರೆ.

Nimma Suddi
";