This is the title of the web page
This is the title of the web page

Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Politics NewsState News

ದೇಶ ಇಬ್ಭಾಗ ಮಾಡಿದ ನಂತರ ನೆಹರು ಬಗ್ಗೆ ಹಿಂದೂಸಭಾ ಅಪಪ್ರಚಾರ ಮಾಡಿದೆ : ವೀರಪ್ಪ ಮೊಯ್ಲಿ

ದೇಶ ಇಬ್ಭಾಗ ಮಾಡಿದ ನಂತರ ನೆಹರು ಬಗ್ಗೆ ಹಿಂದೂಸಭಾ ಅಪಪ್ರಚಾರ ಮಾಡಿದೆ : ವೀರಪ್ಪ ಮೊಯ್ಲಿ

ಚಿಕ್ಕಬಳ್ಳಾಫುರ: ಭಾರತ-ಪಾಕ್​ ಇಬ್ಭಾಗವಾಗಲು ಹಿಂದೂ ಮಹಾಸಭಾ ಕಾರಣವಾಗಿದ್ದು, ಭಾರತ ಇಬ್ಭಾಗ ಮಾಡಲು ಹೇಳಿದ್ದೇ ಹಿಂದೂ ಮಹಾಸಭಾ. ದೇಶ ಇಬ್ಭಾಗ ಮಾಡಿ ನಂತರ ನೆಹರು ಬಗ್ಗೆ ಹಿಂದೂಸಭಾ ಅಪಪ್ರಚಾರ ಮಾಡಿದೆ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಎಂ.ವೀರಪ್ಪ ಮೊಯ್ಲಿ ಗಂಭೀರ ಆರೋಪಿಸಿದರು.

ಚಿಕ್ಕಬಳ್ಳಾಪುರದಲ್ಲಿಂದು ಮಾತನಾಡಿರುವ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಭಾರತದಿಂದ ಪಾಕಿಸ್ತಾನ ಇಬ್ಬಾಗ ಮಾಡಲು ಹೇಳಿದವರೆ ಹಿಂದೂ ಮಹಾ ಸಭಾ. ದೇಶ ಹಿಬ್ಬಾಗ ಮಾಡಿ ನಂತರ ಜವಾಹರ್ ಲಾಲ್ ನೆಹರು ಬಗ್ಗೆ ಹಿಂದೂ ಸಭಾ ಅಪಪ್ರಚಾರ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.ಭಾರತ ಒಂದು ರಾಷ್ಟ್ರವಾಗಿದ್ದು ಮಹಾರಾಜ ಮಹಾನಂದನ ಕಾಲದಲ್ಲಿ ಎಂದರು.

ಮಹಾನಂದನಿಗೆ ಯಾವ ಬ್ರಾಹ್ಮಣ, ಮಹರ್ಷಿಯ ಸಹಾಯ ಇರಲಿಲ್ಲ. ಮಹಾನಂದ ಅತ್ಯಂತ ಕೆಳಜಾತಿಯವರಾಗಿದ್ದರು. ಮಹಾನಂದ ಕೀಳು ಕುಲದಲ್ಲಿ ಹುಟ್ಟಿದವನು ಎಂದು ಹಿಯಾಳಿಸುತ್ತಿದ್ದೇವೆ. ಮಹಾನಂದನ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಇದೇ ವೇಳೆ ಬಿಜೆಪಿ ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳ ಗುರಿ ಇಟ್ಟುಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಮೊಯ್ಲಿ ರಾಜ್ಯದಲ್ಲಿ ಬಿಜೆಪಿ 28 ಕ್ಷೇತ್ರ ಗೆಲ್ಲಬೇಕು ಎಂದು ಅಮೀತ್ ಶಾ ಹೇಳಿದ್ರೆ ಅದಕ್ಕೆ ವಿರುದ್ದವಾಗ ಜನತೀರ್ಪು ಬರುತ್ತೆ ಎಂದು ಹೇಳಿದರು.

Nimma Suddi
";