This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

State News

ಹಿಂದೂತ್ವವನ್ನು ಪ್ರಖರವಾಗಿ ಪ್ರತಿಪಾದಿಸುವ ನಾಯಕರು ಯಡಿಯೂರಪ್ಪಗೆ ಬೇಕಿಲ್ಲ: ಕೆಎಸ್ ಈಶ್ವರಪ್ಪ

ಹಿಂದೂತ್ವವನ್ನು ಪ್ರಖರವಾಗಿ ಪ್ರತಿಪಾದಿಸುವ ನಾಯಕರು ಯಡಿಯೂರಪ್ಪಗೆ ಬೇಕಿಲ್ಲ: ಕೆಎಸ್ ಈಶ್ವರಪ್ಪ

ಶಿವಮೊಗ್ಗ: ಇಲ್ಲಿಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವೆ ಎನ್ನುತ್ತಿರುವ ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಅವರ ಪ್ರಚಾರದ ಅಜೆಂಡಾ ಒಂದೇ ಅನಿಸುತ್ತಿದೆ-ಬಿಎಸ್ ಯಡಿಯೂರಪ್ಪ ಕುಟುಂಬ ರಾಜಕಾರಣ.ಇಂದು ನಗರದಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತಾಡಿದ ಅವರು ಯಡಿಯೂರಪ್ಪರಿಂದ ತಾನು ಹೇಗೆ ಮೋಸ ಹೋದೆ ಅನ್ನೋದನ್ನು ಮತ್ತೊಮ್ಮೆ ವಿವರಿಸಿರುವುದು ಬೆಳಕಿಗೆ ಬಂದಿದೆ.

ಯಡಿಯೂರಪ್ಪರಂತೆ ತಾನು ಕುಟುಂಬ ರಾಜಕಾರಣ ಮಾಡುತ್ತಿಲ್ಲ ಯಾಕೆಂದರೆ ತನ್ನ ಮನೆಯಲ್ಲಿ ಶಾಸಕ ಸಂಸದರ್ಯಾರೂ ಇಲ್ಲ, ಆದರೆ ಯಡಿಯೂರಪ್ಪ ಮನೆಯಲ್ಲಿ ಶಾಸಕರಿದ್ದಾರೆ, ಸಂಸದರಿದ್ದಾರೆ ಮತ್ತು ಪಕ್ಷದ ಅಧ್ಯಕ್ಷರೂ ಇದ್ದಾರೆ, ಅದರೆ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ನೀತಿಯಡಿ ತನ್ನ ಮಗನಿಗೆ ಯಾಕೆ ಟಿಕೆಟ್ ಇಲ್ಲ? ಎಂದು ಅವರು ಪ್ರಶ್ನಿಸಿದರು. ಬಸವರಾಜ ಬೊಮ್ಮಾಯಿ ತನಗೆ ಓಪನ್ ಹಾರ್ಟ್ ಸರ್ಜರಿ ಆಗಿದೆ, ಟಿಕೆಟ್ ಬೇಡ ಅಂತ ಚುನಾವಣಾ ಸಮಿತಿ ಸಭೆಯಲ್ಲಿ ಸ್ಪಷ್ಟವಾಗಿ ಹೇಳಿದರೂ ಯಡಿಯೂರಪ್ಪ ತನ್ನ ಕುಟುಂಬಕ್ಕೆ ಪ್ರಾಮಿಸ್ ಮಾಡಿದ್ದ ಟಿಕೆಟ್ ಅವರಿಗೆ ಕೊಡಿಸಿದರು.

ಹಿಂದೂತ್ವವನ್ನು ಪ್ರಖರವಾಗಿ ಪ್ರತಿಪಾದಿಸುವ ನಾಯಕರು ಯಡಿಯೂರಪ್ಪಗೆ ಬೇಕಿಲ್ಲ ಮತ್ತು ರಾಜ್ಯದಲ್ಲಿ ಅವರ ಕುಟುಂಬಕ್ಕೆ ಪರ್ಯಾಯವಾಗಿ ಬೆಳೆಯುವ ಲಿಂಗಾಯತ ಲೀಡರ್ ಇಷ್ಟವಿಲ್ಲ, ಅದೇ ಕಾರಣಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ತುಳಿದರು ಎಂದು ಈಶ್ವರಪ್ಪ ಗಟ್ಟಿ ಧ್ವನಿಯಲ್ಲಿ ವಿವರಿಸಿದರು.

Nimma Suddi
";