ಡಾ.ಎಮ್.ಎಸ್ ದಡ್ಡೆನ್ನವರ ಬಿಜೆಪಿ ಸೇರ್ಪಡೆ
ಬಾಗಲಕೋಟೆ
ತೆರದಾಳ ಮತಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಕಾಂ ಕಾಂಗ್ರೆಸ್ ಮುಖಂಡ ನೇಕಾರ ಸಮುದಾಯ ಕಣ್ಮಣಿ, ಡಾ.ಎಮ್.ಎಸ್.ದಡ್ಡೇನವರ ಬಿಜೆಪಿ ಸೇರ್ಪಡೆಗೊಂಡರು.
ಶಿವಾನಂದ ಜಿನ್ ನಲ್ಲಿರುವ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ
ಮಾಜಿ ಸಚಿವ ಬಿಜೆಪಿ ಮುಖಂಡ ಕೆ.ಎಸ್.ಈಶ್ಚರಪ್ಪ ಹಾಗೂ ಶಾಸಕ ಡಾ.ವೀರಣ್ಣ ಚರಂತಿಮಠ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡರು.
ಪ್ರಧಾನಿ ಮೋದಿ ಹಾಗೂ ಶಾಸಕ ಚರಂತಿಮಠ ಅವರ ಅಭಿವೃದ್ಧಿ ಪರ ಚಿಂತನೆಗೆ ಮೆಚ್ಚಿ ಡಾ.ಎಮ್.ಎಸ್ ದಡ್ಡೆನ್ನವರ ಬಿಜೆಪಿ ಪಕ್ಷವನ್ನು ಸೇರಿದರು.
ಈ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ,ನಗರ ಮಂಡಲ ಅದ್ಯಕ್ಷ ಸದಾನಂದ ನಾರಾ.ಸೇರಿದಂತೆ ಅನೇಕರು ಭಾಗವಹಿಸಿದ್ದರು.