This is the title of the web page
This is the title of the web page

Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

Entertainment NewsSports News

ಸೋತ ಬಳಿಕ ಕಣ್ಣೀರು ಹಾಕಿದ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್ ಗೆ ಕಿವಿಮಾತು ಹೇಳಿದ ಅಮಿತಾಭ್

ಸೋತ ಬಳಿಕ ಕಣ್ಣೀರು ಹಾಕಿದ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್ ಗೆ ಕಿವಿಮಾತು ಹೇಳಿದ ಅಮಿತಾಭ್

ಮೇ 26ರಂದು ನಡೆದ ಎಸ್​ಆರ್​ಎಚ್ (SRH)​ ಹಾಗೂ ಕೆಕೆಆರ್ ನಡುವಿನ ಐಪಿಎಲ್​ ಫೈನಲ್ ಪಂದ್ಯದಲ್ಲಿ ಕೆಕೆಆರ್​ ಗೆದ್ದು ಬೀಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಫಿನಾಲೆ ಪಂದ್ಯದಲ್ಲಿ ಕೇವಲ ಹೈದರಾಬಾದ್ ತಂಡ ನೀಡಿದ್ದು 113 ರನ್​ಗಳ ಟಾರ್ಗೆಟ್. ಕೇವಲ 10 ಓವರ್​ಗಳಲ್ಲಿ ಈ ಗುರಿಯನ್ನು ಕೆಕೆಆರ್​ ತಂಡ ಬೆನ್ನು ಹತ್ತಿದೆ.

ಅಮಿತಾಭ್ ಬಚ್ಚನ್ ಅವರಿಗೆ ಕ್ರಿಕೆಟ್ ಬಗ್ಗೆ ವಿಶೇಷ ಪ್ರೀತಿ ಇದ್ದು, ಅವರು ಆಗಾಗ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಸಮಯ ಸಿಕ್ಕಾಗ ಮನೆಯಲ್ಲಿ ಕ್ರಿಕೆಟ್ ನೋಡುತ್ತಾರೆ. ಅವರು ಈ ಬಾರಿ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಿದ್ದಾರೆ. ಅಮಿತಾಭ್​ಗೆ ಹೈದರಾಬಾದ್ ತಂಡ ಹೀನಾಯವಾಗಿ ಸೋತಿದ್ದು ಬೇಸರ ತರಿಸಿದೆ. ಈ ಬಗ್ಗೆ ಅವರು ಬ್ಲಾಗ್​ನಲ್ಲಿ ಬರೆದುಕೊಂಡಿದ್ದಾರೆ.

‘ಐಪಿಎಲ್ ಫೈನಲ್ ಮುಗಿದಿದೆ. ಕೆಕೆಆರ್​ ಸುಲಭ ಜಯ ಸಾಧಿಸಿದ್ದು, ಎಸ್​ಆರ್​​ಎಚ್ ಒಳ್ಳೆಯ ತಂಡವೇ ಆಗಿತ್ತು. ಇತರ ತಂಡಗಳೊಂದಿಗೆ ಅವರು ಒಳ್ಳೆಯ ಪರ್ಫಾರ್ಮೆನ್ಸ್ ನೀಡಿದ್ದರು. ಆದರೆ, ಫಿನಾಲೆಯಲ್ಲಿ ಅವರ ಆಟ ನಿರಾಶಾದಾಯಕವಾಗಿತ್ತು’ ಎಂದಿದ್ದಾರೆ ಅಮಿತಾಭ್ ಬಚ್ಚನ್.

ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್ ಅವರು ಕಣ್ಣೀರು ಹಾಕಿದ್ದಾರೆ. ಅವರನ್ನು ನೋಡಿ ಬೇಸರ ಆಗುತ್ತಿದೆ ಎಂದು ಅಮಿತಾಭ್ ಬಚ್ಚನ್ ಹೇಳಿಕೊಂಡಿದ್ದಾರೆ. ಜೊತೆಗೆ ಕಾವ್ಯಾಗೆ ಕಿವಿಮಾತು ಕೂಡ ಹೇಳಿದ್ದಾರೆ.

Nimma Suddi
";