This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Politics News

ಬೋರ್‌ವೆಲ್ ದುರಸ್ತಿಗೆ ಆಗ್ರಹ

ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಇಳಕಲ್ ತಾಲೂಕಿನ ಗುಡೂರ ಗ್ರಾಮದಲ್ಲಿ ಬೋರ್‌ವೆಲ್ ದುರಸ್ತಿಗೊಳಿಸಿ ನೀರು ಪೂರೈಕೆಗೆ ಮುಂದಾಗಬೇಕು ಜನ ಆಗ್ರಹಿಸಿದ್ದಾರೆ.
ಗ್ರಾಮದಲ್ಲಿ ನೀರಿನ ಕೊರತೆಯಿಂದಾಗಿ ಈ ಹಿಂದೆ ಗ್ರಾಪಂ ವತಿಯಿಂದ ಹಲವು ಬೋರ್‌ವೆಲ್‌ಗಳನ್ನು ಕೊರೆಸಲಾಗಿತ್ತು. ಆದರೆ ಅವುಗಳನ್ನು ನೀರು ಬಾರದೆ ತೀವ್ರ ತೊಂದರೆ ಪಡುವಂತಾಗಿತ್ತು. ಆದರೆ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಹಳೆಯ ಬೋರ್‌ಗಳಲ್ಲಿ ನೀರು ತುಂಬಿಕೊಂಡಿದೆ.
೧೦ಕ್ಕೂ ಹೆಚ್ಚು ಬೋರ್‌ಗಳಲ್ಲಿ ನೀರು ಬಂದಿದ್ದು ಆದರೆ ಬೋರ್‌ವೆಲ್‌ಗಳಲ್ಲಿ ಮಣ್ಣು ತುಂಬಿಕೊಂಡಿರುವುದರಿಂದ ಮೋಟಾರ್ ಇಳಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶೀಘ್ರ ಬೋರ್‌ವೆಲ್‌ಗಳನ್ನು ವಾಶ್ ಮಾಡಿಕೊಡಬೇಕು ಎಂಬುದು ಜನರ ಆಗ್ರಹವಾಗಿದೆ.
ಒಂದು ಅವಧಿಯಲ್ಲಿ ನೀರಿಲ್ಲದೆ ಪರಿತಪಿಸುತ್ತಿದ್ದ ಜನತೆಗೆ ಮಳೆರಾಯ ಕೃಪೆ ತೋರಿದಂತೆ ಕಾಣುತ್ತಿದೆ. ಆದರೆ ಸರಿಯಾದ ಅವಧಿಯಲ್ಲಿ ಸಂಬಂಧಿಸಿದ ಅಧಿಕಾರಿ ವರ್ಗ ಸ್ಪಂಧಿಸದೆ ಇರುವುದರಿಂದ ಬೋರ್‌ವೆಲ್‌ನಲ್ಲಿ ನೀರು ಬಂದರೂ ದೊರಕದ ಸ್ಥಿತಿ ಉಂಟಾಗಿದೆ. ಕೂಡಲೆ ದುರಸ್ತಿಗೆ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಬೋರ್‌ವೆಲ್‌ಗಳಲ್ಲಿ ತುಂಬಿಕೊಂಡ ಮಣ್ಣು ತೆಗೆದು ಅನುಕೂಲ ಮಾಡಿಕೊಡುವಂತೆ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಉಪವಿಭಾಗಕ್ಕೆ ಈಗಾಗಲೆ ಅಕ್ಟೋಬರ್ 20 ರಂದೇ ಗ್ರಾಪಂ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ಪತ್ರ ಬರೆದು 20 ದಿನ ಗತಿಸುತ್ತ ಬಂದರೂ ಇದುವರೆಗೆ ಸ್ಪಂದನೆ ಆಗಿಲ್ಲ. ಗ್ರಾಮದ ಪರಿಸ್ಥಿತಿ ಕುರಿತು ಶಾಸಕರ ಗಮನಕ್ಕೂ ತರಲಾಗಿದೆ ಎನ್ನುತ್ತಾರೆ ಗ್ರಾಪಂ ಮಾಜಿ ಸದಸ್ಯ ಹನಮಂತ ಹಣಮನಾಳ.
ಬೋರ್‌ವೆಲ್‌ಗಳನ್ನು ಶೀಘ್ರ ದುರಸ್ತಿಗೊಳಿಸಿ ಜನತೆಗೆ ನೀರು ಒದಗಿಸಲು ಅಧಿಕಾರಿ ವರ್ಗ, ಗ್ರಾಪಂ ಆಡಳಿತಾಧಿಕಾರಿ ಆಗಿರುವ ತಾಪಂ ಇಒ ಸಿ.ಬಿ.ಮ್ಯಾಗೇರಿ ಅವರು ಕಾಳಜಿ ವಹಿಸಬೇಕು ಎಂದು ಗ್ರಾಮದ ನಿವಾಸಿಗಳು ಆಗ್ರಹಿಸಿದ್ದಾರೆ.

 

Nimma Suddi
";