This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Agriculture News

ಬೀದರ್​: ಕಾಡುಹಂದಿ ಕಾಟದಿಂದ ರೈತ ಕಂಗಾಲು, ಸಂಕಷ್ಟಕ್ಕೆ ಸಿಲುಕಿದ ಕಲ್ಲಂಗಡಿ ಬೆಳೆಗಾರ

ಬೀದರ್​: ಕಾಡುಹಂದಿ ಕಾಟದಿಂದ ರೈತ ಕಂಗಾಲು, ಸಂಕಷ್ಟಕ್ಕೆ ಸಿಲುಕಿದ ಕಲ್ಲಂಗಡಿ ಬೆಳೆಗಾರ

ಬೀದರ್​,: ಈ ವರ್ಷ ಬೀದರ್ ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಕಲ್ಲಂಗಡಿಯನ್ನ ರೈತರು ಬೆಳೆಸಿದ್ದರು ಎಂದು ಮಾಹಿತಿ ತಿಳಿದು ಬಂದಿದೆ.

ಮಾರ್ಚ್, ಎಪ್ರಿಲ್ ಮತ್ತು ಮೇ ಎರಡನೇ ವಾರದ ತನಕ ಕಲ್ಲಂಗಡಿಗೆ ಮಾರುಕಟ್ಟೆಯಲ್ಲಿ ಉತ್ತಮವಾದ ಬೆಲೆಯಿತ್ತು. ಆ ಸಮಯದಲ್ಲಿ ಕಟಾವಿಗೆ ಬಂದಿದ್ದ ಕಲ್ಲಂಗಡಿಯಿಂದ ರೈತರು ಉತ್ತಮವಾದ ಆದಾಯ ಗಳಿಸಿಕೊಂಡಿದ್ದರು.

ಆದರೆ, ಈಗ ಕಲ್ಲಂಗಡಿ ಬೆಳೆಸಿದ ರೈತರು, ದರ ಕುಸಿತ ಹಾಗೂ ಕಾಡುಹಂದಿ ಕಾಟದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಲ್ಲಂಗಡಿ ಕಟ್ ಮಾಡಿ ನೋಡಿದರೆ ಕೆಂಪು ಕೆಂಪಾಗಿದ್ದು, ತಿನ್ನಲೂ ಕೂಡ ರುಚಿಯಾಗಿದೆ. ಇಷ್ಟಾದರೂ ಕೂಡ ಕಲ್ಲಂಗಡಿಯನ್ನ ತೆಗೆದುಕೊಳ್ಳಲು ಯಾರು ಮುಂದೆ ಬರುತ್ತಿಲ್ಲ. ಬಂದರೂ ಕೂಡ ಕೆ.ಜಿಗೆ ಐದು ರೂಪಾಯಿವರೆಗೆ ಕೇಳುತ್ತಿದ್ದು, ಐದು ರೂಪಾಯಿ ದರಕ್ಕೆ ಕಲ್ಲಂಗಡಿ ಮಾರಾಟ ಮಾಡಿದ್ರೆ, ಜಮೀನು, ಉಳುಮೆ, ಬಿತ್ತನೆ, ಔಷದೋಪಚಾರ ಮಾಡಿದ ಖರ್ಚು ಕೂಡ ಬರುವುದಿಲ್ಲ ಎಂದು ರೈತರು ತಮ್ಮ ಅಳಲನ್ನ ತೋಡಿಕೊಳ್ಳುತ್ತಿದ್ದಾರೆ.

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲಹಿಪ್ಪಾರ್ಗಾ ಗ್ರಾಮದ ರೈತ ಮಹಿಳೆ ಶಿಲ್ಪಾ ಚಂದ್ರಶೇಖರ್ ಮಾಲೀ ಪಾಟೀಲ್ ಅವರು ತಮ್ಮ ಒಂದೂವರೆ ಎಕರೆಯಷ್ಟು ಜಮೀನಿನಲ್ಲಿ ಕಲ್ಲಂಗಡಿ ಬೆಳೆಸಿದ್ದಾರೆ. ಮಾರ್ಚ್​ನಲ್ಲಿ ಕಲ್ಲಂಗಡಿ ನಾಟಿ ಮಾಡಿದ್ದ ಇವರು, ಈಗ ಮೇ ಕೊನೆಯ ವಾರದಲ್ಲಿ ಕಲ್ಲಂಗಡಿ ಕಟಾವಿಗೆ ಬಂದಿದೆ. ಇನ್ನು ಕಲ್ಲಂಗಡಿ ಬೆಳೆ ನಾಟಿ ಮಾಡುವ ಮುನ್ನ ಹನಿ ನೀರಾವರಿ ಪದ್ದತಿಯಲ್ಲಿ ಬೆಳೆಸಲಾಗಿದೆ.

ಕಳೆ ಬೆಳೆಯಬಾರದೆಂದು ಪ್ಲ್ಯಾಸ್ಟಿಕ್ ಮಲಚಿಂಗ್ ಪದ್ಧತಿಯಲ್ಲಿ ಕಲ್ಲಗಂಡಿ ಬೆಳೆಸಲಾಗಿದೆ. ಇದರಿಂದಾಗಿ ಬೆಳೆ ಉತ್ತಮವಾಗಿ ಬೆಳೆದಿದ್ದು, ಒಂದೊಂದು ಕಲ್ಲಂಗಡಿ ನಾಲ್ಕರಿಂದ ಐದು ಕೆ.ಜಿವರೆಗೆ ತೂಕ ಬರುತ್ತದೆ.

";