This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Agriculture News

ದಾವಣಗೆರೆ: ಕೃಷಿಕರು ಕರೆಂಟ್‌ ಶಾಕ್‌ಗೆ ತುತ್ತು, ಮೋಟಾರ್‌ ಪಂಪು ಸುಟ್ಟು ರೈತರಿಗೆ ಸಾವಿರಾರು ರೂ. ಖರ್ಚು

ದಾವಣಗೆರೆ: ಕೃಷಿಕರು ಕರೆಂಟ್‌ ಶಾಕ್‌ಗೆ ತುತ್ತು, ಮೋಟಾರ್‌ ಪಂಪು ಸುಟ್ಟು ರೈತರಿಗೆ ಸಾವಿರಾರು ರೂ. ಖರ್ಚು

ದಾವಣಗೆರೆ: ಬರದಲ್ಲಿ ಬೋರ್‌ವೆಲ್‌ ನೀರಾವರಿಯೇ ಕೃಷಿಗೆ ಆಸರೆಯಾಗಿರುವ ವಿಷಮ ಸ್ಥಿತಿಯಲ್ಲೂ ಕೃಷಿಕರು ಕರೆಂಟ್‌ ಶಾಕ್‌ಗೆ ತುತ್ತಾಗುತ್ತಿದ್ದು, ಪೂರೈಕೆ ಆಗುವ ಕರೆಂಟ್‌ಗೂ ವೋಲ್ಟೇಜ್‌ ಇಲ್ಲದೆ ಪಂಪ್‌ಸೆಟ್‌ಗಳು ಸುಟ್ಟು ಈ ದುರಿತ ಕಾಲದಲ್ಲಿ ರೈತರು ಸಾವಿರಾರು ರೂ. ಖರ್ಚು ಭರಿಸಬೇಕಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಓಬಿರಾಯನ ಕಾಲದಲ್ಲಿ ಹಾಕಿರುವ ವಿದ್ಯುತ್‌ ಸರಬರಾಜು ಮಾರ್ಗಗಳ ಸಾಮರ್ಥ್ಯ ಹೆಚ್ಚಿಸಿ ಮೇಲ್ದರ್ಜೆಗೇರಿಸದ ಕಾರಣ ದಿನಕ್ಕೆ ಏಳು ತಾಸು ಬದಲಿಗೆ ಸಿಗುವ ನಾಲ್ಕೈದು ತಾಸು ಕೂಡ ವಿದ್ಯುತ್‌ ಸಿಗದೆ ರೈತರು ಬಸವಳಿದಿದ್ದು, ಪ್ರಮುಖವಾಗಿ ಬರದಲ್ಲಿ ಅಡಕೆ ಸೇರಿ ಇತರೆ ಬೆಳೆಗಳ ತೋಟಗಳ ಉಳಿಸಿಕೊಳ್ಳಲು ಹರ ಸಾಹಸ ಪಡುತ್ತಿದ್ದಾರೆ.ಈ ವರ್ಷ ಜನವರಿ ತಿಂಗಳಲ್ಲಿಯೇ ಕೃಷಿ ಕ್ಷೇತ್ರ ಕರೆಂಟ್‌ ಸಂಕಷ್ಟಕ್ಕೆ ಸಿಲುಕುತ್ತಿದ್ದು, ರೈತರು ಕಂಗಾಲಾಗಿ ಬೀದಿಗಿಳಿದಿದ್ದಾರೆ.

ಪೂರೈಕೆ ಆಗುತ್ತಿರುವ ವಿದ್ಯುತ್‌ನಲ್ಲಿ ವೋಲ್ಟೇಜ್‌ ಸಮಸ್ಯೆಯಿದೆ. ಜತೆಗೆ ಗಂಟೆ, ಅರ್ಧಗಂಟೆಗೊಮ್ಮೆ ನಿಲುಗಡೆ ಆಗುತ್ತಿದೆ.ಕೃಷಿ ಪಂಪ್‌ಸೆಟ್‌ಗಳಿಗೆ ಅಗತ್ಯವಿರುವಷ್ಟು ವೋಲ್ಟೇಜ್‌ ಸಿಗದೆ ಪಂಪ್‌ಸೆಟ್‌ಗಳು ಸುಟ್ಟು ಹೋಗುತ್ತಿವೆ. ಒಮ್ಮೆ ಪಂಪ್‌ಸೆಟ್‌ ಸುಟ್ಟರೆ 8 ರಿಂದ 10 ಸಾವಿರ ಖರ್ಚು ಬರುತ್ತಿದ್ದು, ಇದರಿಂದ ರೈತರಿಗೆ ಆರ್ಥಿಕ ಹೊರೆ ಹೆಚ್ಚುತ್ತಿದೆ. ಗಂಟೆಗೊಮ್ಮೆ ಲೋಡ್‌ ಶೆಡ್ಡಿಂಗ್‌ ಆದರೆ ಬೆಳೆಗಳು ಹಾಗೂ ತೋಟಗಳಿಗೆ ನೀರು ಹಾಯಿಸುವುದು ಹೇಗೆ?. ಹಾಗಾಗಿ ಅಗತ್ಯ ಇರುವಷ್ಟು ವೋಲ್ಟೇಜ್‌ನೊಂದಿಗೆ ಗುಣಮಟ್ಟದ ವಿದ್ಯುತ್‌ ಪೂರೈಕೆ ಮಾಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.

ಏಳು ತಾಸು ಹಗಲು ವೇಳೆ ವಿದ್ಯುತ್‌ ಪೂರೈಕೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದೆವು. ಆದರೆ ಈಗ ಯಾವ ಹೊತ್ತಾದರೂ ಪರವಾಗಿಲ್ಲಏಳು ತಾಸು ವಿದ್ಯುತ್‌ ಕೊಡಿ ಎಂದು ಕೇಳುತ್ತಿದ್ದೇವೆ. ಆದರೆ ವೋಲ್ಟೇಜ್‌ ಸಮಸ್ಯೆ ಜತೆ ಲೋಡ್‌ ಶೆಡ್ಡಿಂಗ್‌ನಿಂದಾಗಿ ದಿನಕ್ಕೆ ನಾಲ್ಕೈದು ತಾಸು ಕೂಡ ವಿದ್ಯುತ್‌ ಸಿಗುತ್ತಿಲ್ಲ. ಜತೆಗೆ ವೋಲ್ಟೇಜ್‌ ಕೊರತೆಯಿಂದ ಪಂಪ್‌ಸೆಟ್‌ಗಳು ಸುಡುತ್ತಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿದ್ಯುತ್‌ ಪೂರೈಕೆ ಮತ್ತು ವಿತರಣೆ ಕಡೆಗೂ ಗಮನ ಹರಿಸಿ ರೈತರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂಬುದು ರೈತರ ಆಗ್ರಹವಾಗಿದೆ.

";