This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Politics News

ತೋಟಗಾರಿಕೆ ಮೇಳ:೨೩ ಫಲಶ್ರೇಷ್ಠರಿಗೆ ಪ್ರಶಸ್ತಿ ಪ್ರಧಾನ

ರಪ್ತು ಪ್ರಮಾಣದಲ್ಲಿ ಶೇ.೨೦ ರಷ್ಟು ಹೆಚ್ಚಳಕ್ಕೆ ಕ್ರಮ : ನಾರಾಯಣಗೌಡ

ನಿಮ್ಮ ಸುದ್ದಿ ಬಾಗಲಕೋಟೆ

ಹಣ್ಣು, ತರಕಾರಿ ಹಾಗೂ ಹೂಗಳ ರಪ್ತು ಪ್ರಮಾಣ ಶೇ.೨.೫ ರಿಂದ ಶೇ.೫.೫ಕ್ಕೆ ತಲುಪಿದ್ದು, ಅದನ್ನು ಶೇ.೨೦ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ತೋಟಗಾರಿಕೆ ಮತ್ತು ರೇಷ್ಮೆ ಸಚಿವರಾದ ಡಾ.ಕೆ.ಸಿ.ನಾರಾಯಣಗೌಡ ಹೇಳಿದರು.

ತೋವಿವಿಯ ಉದ್ಯಾಗಿನಿಯಲ್ಲಿ ಹಮ್ಮಿಕೊಂಡ ತೋಟಗಾರಿಕೆ ಮೇಳದ ಎರಡನೇ ದಿನ ಅತ್ಯುತ್ತಮ ತೋಟಗಾರಿಕೆ ರೈತ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಆನ್‌ಲೈನ್ ವರ್ಚ್ಯೂವಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ತೋಟಗಾರಿಕೆ ಬೆಳೆಗಳಿಗೆ ಹೆಚ್ಚು ಉತ್ತೇನ ನೀಡುವ ಮೂಲಕ ತೋವಿವಿಯ ಸಂಶೋಧನೆಗಳು ರೈತರಿಗೆ ತಲುಪಿಸಿ ಹೊಸ ಶಕ್ತಿ ತುಂಬುವ ಕೆಲಸವಾಗಬೇಕು ಎಂದು ತಿಳಿಸಿದರು.

ರೈತರು ಹೆಚ್ಚಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಬೇಕು. ಇದರಿಂದ ತಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಹಣ್ಣು, ತರಕಾರಿಗಳ ರಪ್ತಿನ ಪ್ರಮಾಣವನ್ನು ಶೇ.೨೦ಕ್ಕೆ ಹೆಚ್ಚಿಸುವ ಗುರಿಯನ್ನು ಸಹ ಹೊಂದಲಾಗಿದೆ. ರಾಜ್ಯದ ತೋಟಗಾರಿಕೆ ವಿಶ್ವವಿಲದ್ಯಾಲಯ ರಾಷ್ಟç ಹಾಗೂ ಅಂತರರಾಷ್ಟç ಮಟ್ಟದಲ್ಲಿ ಹೆಸರು ತರುವಂತ ಕಾರ್ಯವಾಗಬೇಕು. ಇದು ನಮ್ಮ ಆಶೆಯು ಕೂಡಾ ಆಗಿದೆ ಎಂದು ತಿಳಿಸಿದರು.

ಕೊರೊನಾ ಹಿನ್ನಲೆಯಲ್ಲಿ ಸರಕಾರದ ರಾಜ್ಯಸ್ವಕ್ಕೆ ಕೊರತೆ ಇರುವದರಿಂದ ಅನುದಾನ ಬಿಡುಗಡೆಗೆ ವಿಳಂಬವಾಗಿದೆ. ಆ ಕೊರತೆಯನ್ನು ನೀಗಿಸಲು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ತೋವಿವಿಯ ನೀಡಿರುವ ಮನವಿಯನ್ನು ಸರಕಾರ ಗಂಭೀರವಾಗಿ ಪರಿಣಿಸಿದ್ದು, ರೈತರಿಗೆ ಹೊಸ ಶಕ್ತಿಯನ್ನು ತುಂಬುವ ಕಾರ್ಯವಾಗಬೇಕು ಎಂದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮತ್ತು ಸಣ್ಣ ನೀರಾವರಿ ಸಚಿವರಾದ ಮಧುಸ್ವಾಮಿ ಮಾತನಾಡಿ ತೋಟಗಾರಿಕೆ ಬೆಳೆಗೆ ಹೆಚ್ಚಿನ ಶಕ್ತಿ ತುಂಬಿ ರೈತರ ಇಳುವರಿಯನ್ನು ಹೆಚ್ಚಿಸಬೇಕು. ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವದರಿಂದ ಕಾಯಿಲೆಗಳ ಪ್ರಮಾಣವು ಸಹ ಕಡಿಮೆಯಾಗುತ್ತದೆ. ಹಣ್ಣುಗಳನ್ನು ನಿರೀಕ್ಷಿತ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ಕಡಿಮೆ ಖರ್ಚಿನಲ್ಲಿ ಇಳುವರಿ ಹೆಚ್ಚಿನ ಬರುವ ಸಂಶೋಧನೆಗಳು ಆಗಬೇಕು. ಕೇವಲ ಉತ್ಪಾದನೆಯಲ್ಲಿ ಗಮನ ಹರಿಸದೇ ಮಾರುಕಟ್ಟೆಯ ಸ್ಥಿತಿಗತಿಗಳ ಬಗ್ಗೆಯೂ ರೈತರಿಗೆ ಸಲಹೆ ನೀಡಬೇಕು. ಬೆಳೆದ ರೈತನಿಗೆ ಲಾಭ ದೊರೆಯುವಂತೆ ಮಾಡುವ ಕಾರ್ಯ ವಿಶ್ವವಿದ್ಯಾಲಯದ್ದಾಗಿದೆ ಎಂದು ತಿಳಿಸಿದರು.

ನವದೆಹಲಿಯ ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ವೆಂಕಟ ಸುಬ್ರಮನ್ಯ ಮಾತನಾಡಿ ಈ ವರ್ಷ ಹಣ್ಣು ಮತ್ತು ತರಕಾರಿ ಬೆಳೆಗಳ ವರ್ಷವಾಗಿರುವದರಿಂದ ಅವರುಗಳಿಗೆ ಸಾಕಷ್ಟು ಉತ್ತೇಜನ, ಬಳಕೆ ಹೆಚ್ಚಾಗಬೇಕು. ವೈವಿದ್ಯಮಯ ಸಾಂಬಾರ ಪದಾರ್ಥಗಳ ಬೆಳೆಗಳನ್ನು ರೈತರು ಅಳವಡಿಸಿಕೊಳ್ಳಬೇಕು. ತಮ್ಮ ಹೊಲ ಮತ್ತು ತೋಟಗಳಲ್ಲಿ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಬಳಕೆ ಅಗತ್ಯವಾಗಿದೆ. ವಾತಾವರಣದಲ್ಲಿ ಉಂಟಾಗುವ ಬದಲಾವಣೆಯಿಂದ ಬೆಳೆಗಳು ಬಹಳಷ್ಟು ನಾಶವಾಗುತ್ತಿವೆ. ಇದಕ್ಕೆ ಶಕ್ತಿ ತುಂಬಲು ಸರಕಾರ ಮುಂದಾಗಬೇಕು. ಉತ್ಪನ್ನಗಳ ಶೇಖರಣೆಗೆ ಶೀಥಲ ಘಟಕ ಸ್ಥಾಪನೆ, ಶೀಥಲ ವಾಹನ ಸೌಕರ್ಯ ಅಗ್ಯತ್ಯವಾಗಿದೆ ಎಂದರು.

ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಉಪಾದ್ಯಕ್ಷ ಮುತ್ತಪ್ಪ ಕೋಮಾರ, ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಬಿ.ಚಟ್ಟಿ ಹಾಗೂ ರಾಷ್ಟç ಪ್ರಶಸ್ತಿ ಪುರಸ್ಕೃತ ಸೊನ್ನದ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ, ತೋವಿವಿಯ ಕುಲಪತಿ ಡಾ.ಕೆ.ಎಂ.ಇಂದಿರೇಶ, ವಿಸ್ತರಣಾ ನಿರ್ದೇಶಕ ಡಾ.ವೈ.ಕೆ.ಕೋಟಿಕಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

೨೩ ಫಲಶ್ರೇಷ್ಠರಿಗೆ ಪ್ರಶಸ್ತಿ ಪ್ರಧಾನ
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಪ್ರತಿ ಜಿಲ್ಲೆಗೆ ಒಬ್ಬರಂತೆ ಒಟ್ಟು ೨೩ ಜನರಿಗೆ ಅತ್ಯುತ್ತಮ ತೋಟಗಾರಿಕೆ ರೈತ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಅದರಲ್ಲಿ ಬಾಗಲಕೋಟೆ ಜಿಲ್ಲೆಯ ಶರಣವ್ವ ಹಾದಿನಮಿ, ಬೆಳಗಾವಿಯ ಲಕ್ಷಿö್ಮÃಕಾಂತ ಸೊಲ್ಲಾಪೂರ, ಬೆಂಗಳೂರು ಗ್ರಾಮಾಂತರ ಪ್ರದೇಶದ ನಿತುನ್ ಎನ್, ಬೆಂಗಳೂರು ನಗರದ ಗೋಪಾಲಕೃಷ್ಣ ಎಚ್.ಕೆ, ಬೀದರನ ವಿಜಯ ಸೂರ್ಯವಂಶಿ, ಚಾಮರಾಜನಗರದ ನಾಗಾರ್ಜುನ ಕುಮಾರ್ ಎಸ್.ಎಂ, ಚಿಕ್ಕಬಳ್ಳಾಪೂರದ ಶಿವಪ್ರಸಾದ ಎಸ್.ಎನ್, ಧಾರವಾಡ ಜಿಲ್ಲೆಯ ಬಸವರಾಜ ವಿಭೂತಿ, ಗದಗ ಜಿಲ್ಲೆಯ ಹನುಮಪ್ಪ ಸಾಲಿ, ಹಾವೇರಿ ಜಿಲ್ಲೆಯ ಗೋಪಾಲಗೌಡ ಬಸನಗೌಡರ, ಹಾಸನ ಜಿಲ್ಲೆಯ ಕೆ.ಪಿ.ಗೋಪಕುಮಾರ, ಕಲಬುರ್ಗಿ ಜಿಲ್ಲೆಯ ನಿಜಲಿಂಗಪ್ಪ ಕಲ್ಯಾಣ, ಕೋಲಾರ ಜಿಲ್ಲೆಯ ಎನ್.ಧರ್ಮಲಿಂಗA ನಾರಾಯಣಸ್ವಾಮಿ, ಮಂಡ್ಯ ಜಿಲ್ಲೆಯ ಪಿ.ಎಸ್.ವಿಜಯಕುಮಾರ, ಮೈಸೂರ ಜಿಲ್ಲೆಯ ಶ್ರೀಮತಿ ದಾಸಿ, ರಾಮನಗರ ಜಿಲ್ಲೆಯ ಹೊನ್ನೆಗೌಡ ಮುನಿಯಪ್ಪ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಹಾಬಲೇಶ್ವರ ಹೆಗಡೆ, ತಮಕೂರು ಜಿಲ್ಲೆಯ ರಾಕಶೇಖರಯ್ಯ ಬಸವೇಗೌಡ, ವಿಜಯಪುರ ಜಿಲ್ಲೆಯ ಪ್ರವೀಣ ಬಾಳಿಗೇರಿ, ಯಾದಗಿರಿ ಜಿಲ್ಲೆಯ ಅನಂತಪ್ಪ ರಾಥೋಡ, ಬಳ್ಳಾರಿ ಜಿಲ್ಲೆಯ ಸತ್ಯನಾರಾಯಣ ಶೆಟ್ಟಿ, ಕೊಪ್ಪಳ ಜಿಲ್ಲೆಯ ಮಾರುತಿ ನಾಯಕ, ರಾಯಚೂರು ಜಿಲ್ಲೆಯ ಶಿವಕುಮಾರ ಪಾಟೀಲ ಅವರಿಗೆ ಪ್ರಶಸ್ತಿ ನೀಡಲಾಯಿತು.

";