This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

National News

ಕಲ್ಕತ್ತಾ ಹೈಕೋರ್ಟ್‌ನಲ್ಲಿ ಜಡ್ಜ್‌ಗಳ ಮಾರಾಮಾರಿ: ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಗಲಬೆ

ಕಲ್ಕತ್ತಾ ಹೈಕೋರ್ಟ್‌ನಲ್ಲಿ ಜಡ್ಜ್‌ಗಳ ಮಾರಾಮಾರಿ: ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಗಲಬೆ

ನವದೆಹಲಿ: ಕಲ್ಕತ್ತಾ ಹೈಕೋರ್ಟ್‌ನ ಇಬ್ಬರು ನ್ಯಾಯಾಧೀಶರ ನಡುವಿನ ಕಲಹ ಕುತೂಹಲ ಮೂಡಿಸಿದ್ದು, ಶುಕ್ರವಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಸುಪ್ರೀಂ ಕೋರ್ಟ್‌, ಶನಿವಾರ ಪ್ರಕರಣ ವಿಚಾರ ನಡೆಸಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಹೈಕೋರ್ಟ್‌ ಏಕಸದಸ್ಯ ಪೀಠದ ನ್ಯಾ ಅಭಿಜಿತ್‌ ಗಂಗೂಲಿ, ವಿಭಾಗೀಯ ಪೀಠದ ನ್ಯಾ.ಸೌಮೆನ್‌ ಸೆನ್‌ ನಡುವೆ ಎಂಬಿಬಿಎಸ್‌ ದಾಖಲಾತಿಯಲ್ಲಿ ನಡೆದಿರುವ ಅವ್ಯವಹಾರದ ಕುರಿತ ತನಿಖಾ ಆದೇಶದ ವಿಚಾರವಾಗಿ ಸಂಘರ್ಷ ತಲೆದೋರಿದೆ.

ನಕಲಿ ಜಾತಿ ಪ್ರಮಾಣಪತ್ರ ಹಗರಣದ ಆರೋಪದಲ್ಲಿ ಸಿಬಿಐ ತನಿಖೆಗೆ ಸಂಬಂಧಿಸಿದಂತೆ ಕಲ್ಕತ್ತಾ ಹೈಕೋರ್ಟ್‌ನ ಏಕ ಸದಸ್ಯ ಪೀಠ ಹಾಗೂ ವಿಭಾಗೀಯ ಪೀಠದಲ್ಲಿನ ಎಲ್ಲಾ ಪ್ರಕ್ರಿಯೆಗಳಿಗೆ ಸುಪ್ರೀಂಕೋರ್ಟ್ ತಡೆ ನೀಡಿದ್ದು,ನ್ಯಾ ಅಭಿಜಿತ್‌ ಗಂಗೋಪಾಧ್ಯಾಯ ಹಾಗೂ ನ್ಯಾ ಸೌಮೆನ್‌ ಸೆನ್‌ ನಡುವಿನ ಕಲಹ ಇತ್ಯರ್ಥಪಡಿಸಲು ಮುಂದಾಗಿರುವ ಸಿಜೆಐ ಡಿವೈ ಚಂದ್ರಚೂಡ್‌ ಅವರ ನೇತೃತ್ವದ ಐವರು ನ್ಯಾಯಾಧೀಶರ ನ್ಯಾಯಪೀಠ ವಿಚಾರಣೆ ನಡೆಸಿದೆ.

ಸರಕಾರಿ ಮೆಡಿಕಲ್‌ ಕಾಲೇಜುಗಳ ದಾಖಲಾತಿಯಲ್ಲಿ ನಡೆದಿರುವ ಅವ್ಯವಹಾರ ಕುರಿತ ಸಿಬಿಐ ತನಿಖೆ ನಡೆಸುವಂತೆ ನ್ಯಾ ಗಂಗೋಪಾಧ್ಯಾಯ ಆದೇಶ ನೀಡಿದ್ದು, ಏಕಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠದ ನ್ಯಾ ಸೌಮೆನ್‌ ಸೆನ್‌ ಅವರಿದ್ದ ಪೀಠ ಮಧ್ಯಂತರ ತಡೆ ನೀಡಿತು. ಈ ಕಾರಣಕ್ಕೆ ಕೆರಳಿದ ನ್ಯಾ ಗಂಗೋಪಾಧ್ಯಾಯ, ”ನ್ಯಾ ಸೆನ್‌ ಅವರು ರಾಜಕೀಯ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದು, ಸುಪ್ರೀಂ ಕೋರ್ಟ್‌ ಮರು ಪರಿಶೀಲಿಸಬೇಕು. ವೈಯಕ್ತಿಕ ಹಿತಾಸಕ್ತಿಗೆ ಅಧಿಕಾರರೂಢ ಪಕ್ಷ ರಕ್ಷಿಸಲು ನ್ಯಾಸೆನ್‌ ಪ್ರಯತ್ನಿಸಿದ್ದಾರೆ,” ಎಂದು ಸಿಜೆಐಗೆ ಪತ್ರ ಬರೆದಿದ್ದರು ಎಂದು ಮಾಹಿತಿ ಬೆಳಕಿಗೆ ಬಂದಿದೆ.

";