LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಇಮ್ರಾನ್​ ಭೇಟಿ ಬಳಿಕ ಸಹೋದರಿ ಶಾಕಿಂಗ್​ ಹೇಳಿಕೆ!

ರಾವಲ್ಪಿಂಡಿ: ಇಮ್ರಾನ್ ಖಾನ್ (Imran Khan) ಅವರನ್ನು ಭೇಟಿಸಿ ಹೊರಬಂದ ಅವರ ಸಹೋದರಿ ಉಜ್ಮಾ ಖಾನ್ (Uzma Khan) ಮಾಧ್ಯಮದ ಮುಂದೆ ನೀಡಿದ ಶಾಕಿಂಗ್ ಹೇಳಿಕೆಗಳು ಪಾಕಿಸ್ತಾನದ ರಾಜಕೀಯ (Pakistan Politics) ವಾತಾವರಣಕ್ಕೆ ಹೊಸ ತೀವ್ರತೆ ನೀಡಿದೆ. ವಾರಾಂತ್ಯದ ನಂತರ ಪಾಕ್ ಸರ್ಕಾರ ಉಜ್ಮಾಗೆ ಭೇಟಿ ಅನುಮತಿ ನೀಡಿದ್ದು, ಅಡಿಯಾಲ ಜೈಲಿನಲ್ಲಿ ಇಮ್ರಾನ್ ಅವರನ್ನು ಭೇಟಿ ಮಾಡಿದ ಬಳಿಕ ಅವರು ಹೊರಗೆ ಬಂದ ತಕ್ಷಣವೇ ಹಲವಾರು ಗಂಭೀರ ಆರೋಪಗಳನ್ನು ಹೊರ ಹಾಕಿದ್ದಾರೆ.
ಮುನೀರ್​ ಬಗ್ಗೆ ಹೇಳಿದ್ದೇನು ಗೊತ್ತಾ!
ಉಜ್ಮಾ ಅವರ ಹೇಳಿಕೆಯಿಂದಾಗಿ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ. ಇಮ್ರಾನ್ ಅವರನ್ನು ಒಬ್ಬರೇ, ಸಂಪೂರ್ಣ ಪ್ರತ್ಯೇಕ ಕೇಂದ್ರದಲ್ಲಿ ಇರಿಸಲಾಗಿದೆ. ಅವರಿಗೆ ಏನೇ ಆಗಲಿ, ಅದರ ಹೊಣೆ ಸಂಪೂರ್ಣವಾಗಿ ಮುನೀರ್‌ನದು ಎಂದು ಅವರು ಕಣ್ಣೀರು ಹಾಕುತ್ತಾ ಹೇಳಿದರು. ಜೈಲಿನೊಳಗೆ ಇಮ್ರಾನ್‌ ಮೇಲೆ ಮನೋಮಾನಸಿಕ ಒತ್ತಡ ಹಾಗೂ ಅನಾವಶ್ಯಕ ತೊಂದರೆಗಳನ್ನು ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಅವರಿಗೆ ಜೈಲಿನಲ್ಲಿ ಒತ್ತಡ ಹೇರುತ್ತಿದ್ದಾರೆ. ಯಾರಿಗೂ ಭೇಟಿ ಅನುಮತಿ ನೀಡದಿರುವುದೂ ಅದಕ್ಕಾಗಿಯೇ ಎಂಬುದು ಅವರ ವಾದ.
ಇಮ್ರಾನ್​ ಆರೋಗ್ಯ ಸ್ಥಿರ!
ಆದರೂ, ಇಮ್ರಾನ್ ಖಾನ್ ಆರೋಗ್ಯ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ. ಆದರೆ ಅವರು ತುಂಬಾ ಸಿಡುಕಿನಲ್ಲಿದ್ದರು. ಒತ್ತಡ, ಕೋಪ, ಒಂಟಿತನ—ಇವೆಲ್ಲವೂ ಅವರ ಮೇಲೆ ಪರಿಣಾಮ ಬೀರುತ್ತಿದೆ, ಎಂದಿದ್ದಾರೆ. ಇಮ್ರಾನ್ ಅವರ ಮಾತುಗಳನ್ನು ಉಜ್ಮಾ ಬಹಿರಂಗಪಡಿಸದಿದ್ದರೂ, ಅವರು ಮಾನಸಿಕವಾಗಿ ಹೋರಾಟ ಎದುರಿಸುತ್ತಿದ್ದಾರೆ ಎಂಬ ಸೂಚನೆ ನೀಡಿದ್ದಾರೆ. ಉಜ್ಮಾ ಅವರ ಆರೋಪಗಳು ಪಾಕ್ ರಾಜಕೀಯದಲ್ಲಿ ಹೊಸ ತಿರುಗುಬಾಣ ಎಸೆದಿದ್ದು, ಸರಕಾರ ಹಾಗೂ ಸೇನಾ ವಲಯಗಳಿಂದ ಸ್ಪಷ್ಟನೆ ಕೇಳುವ ಬೇಡಿಕೆ ಹೆಚ್ಚಾಗಿದೆ. ಇಮ್ರಾನ್ ಬೆಂಬಲಿಗರು ಇದನ್ನು ರಾಜಕೀಯ ಪ್ರತೀಕಾರ ಎಂದು ಕರೆಯುತ್ತಿದ್ದರೆ, ಸರ್ಕಾರ ಈ ಆರೋಪಗಳನ್ನು ತಳ್ಳಿಹಾಕಿದೆ.
ಮಂಗಳವಾರ ಪ್ರತಿಭಟನೆಗೆ ಕರೆ!

ಈದಾದ ನಂತರ, ಪಿಟಿಐ ಬೆಂಬಲಿಗರು ಮಂಗಳವಾರದ ಭಾರೀ ಪ್ರತಿಭಟನೆಗಳ ಕರೆ ಹಿಂತೆಗೆದುಕೊಂಡಿದ್ದು, ಹೀಗಾದರೂ ಆರೋಪ–ಉದ್ವಿಗ್ನತೆ ಮುಕ್ತವಾಗಿ ನಿಲ್ಲದೇ ಮತ್ತೆ, ಮತ್ತೆ ಉದ್ವಿಗ್ನತೆ ಹೊಗೆಯಾಡುತ್ತಲೇ ಹೋಯಿತು. ಜೈಲು ಸುತ್ತಮುತ್ತಲೂ ಭದ್ರತಾ ನಿಗಾ ಕಡ್ಡಾಯ ಮಾಡಲಾಗಿದ್ದು, ಐದು ಹೆಚ್ಚುವರಿ ಚೆಕ್‌ಪೋಸ್ಟ್‌ಗಳನ್ನು ಅಡಿಯಾಲ ಜೈಲಿನ ಕನಿಷ್ಠ ಮೂರು ಕಿಲೋಮೀಟರ್‌ ವ್ಯಾಪಗ್ರತಿಯಲ್ಲಿ ಸ್ಥಾಪಿಸಲಾಗಿದೆ. ಸುಮಾರು 700 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ, ಗಲಭೆ ಎದುರಿಸುವುದಕ್ಕೆ ಸಿದ್ದತೆ ಘೋಷಿಸಲಾಗಿದೆ. ಪಿಟಿಐ ಕಾರ್ಯಕರ್ತರು ಮತ್ತು ಕುಟುಂಬ ಸದಸ್ಯರು ಕಳೆದ ಕೆಲ ದಿನಗಳಿಂದ ಏರ್ಪಡಿಸುತ್ತಿದ್ದ ಧರಣಿ–ಮೆರವಣಿಗೆಗಳನ್ನೂ ತಾತ್ಕಾಲಿಕವಾಗಿ ರದ್ದುಪಡಿಸಿರುವುದು ಕಂಡು ಬರುತ್ತಿದೆ.
ಇಮ್ರಾನ್ ಕುರಿತು ಜೈಲಿನಲ್ಲಿ ಕೊಲೆಯಾಗಿದ್ದಾರೆ ಎಂಬ ವದಂತಿಗಳು ತಗ್ಗಬೇಕೋ ಎಂದು ಸಾಕಷ್ಟು ಜನ ನಿರೀಕ್ಷಿಸುತ್ತಿದ್ದು, ಆದರೆ ಇನ್ನೂ ಹೆಚ್ಚಿನ ಅನುಮಾನಗಳು ಇನ್ನುವರೆಗೂ ಹೋಲಿಕೆಯಾಗಿಲ್ಲ. ಅವುಗಳ ನಡುವೆ, ಅಡಿಯಾಲ ಜೈಲು ಆಡಳಿತ ಮತ್ತು ಪಾಕಿಸ್ತಾನ ಸರ್ಕಾರ  ಇಮ್ರಾ ನ್ ಸಂಪೂರ್ಣವಾಗಿ ಆರೋಗ್ಯದಲ್ಲಿದ್ದಾರೆ ಮತ್ತು ಅವರಿಗೆ ಪೂರೈಕೆಮಾಡಲಾಗುತ್ತಿರುವ ವೈದ್ಯಕೀಯ ಚಿಕಿತ್ಸೆ ನಿರಾಕರಿಸಲಾಗಿಲ್ಲ ಎಂದು ಬಲವಾಗಿ ಹೇಳಿಕೆಯನ್ನು ನೀಡಿದೆ. ಜೊತೆಗೆ, ಜೈಲಿನಿಂದ ವರ್ಗಾವಣೆ ಮಾಡಲಾಗುವುದಿಲ್ಲ ಎಂದು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

Author
Nimma Suddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಸತಿ ನಿಲಯಗಳಿಗೆ ದೀಡಿರ್ ಬೇಟಿ ನೀಡಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಬೆಂಗಳೂರು-ಹಾಸನ-ಮಂಗಳೂರು ಜೋಡಿ ರೈಲು ಹಳಿ ನಿರ್ಮಾಣ; ಸಚಿವ ಎಂ.ಬಿ. ಪಾಟೀಲ ಚರ್ಚೆ!ಸಾರ್ವಜನಿಕ ಹಣದಲ್ಲಿ ಬಾಬರಿ ಮಸೀದಿ ನಿರ್ಮಿಸಲು ಬಯಸಿದ್ದ ನೆಹರೂ ಎಂದ ರಾಜನಾಥ ಸಿಂಗ್ಪುಟಿನ್ ಭೇಟಿ: ಭಾರತದ ಜೊತೆ ಅಣು ಸಹಕಾರ ಒಪ್ಪಂದಕ್ಕೆ ರಷ್ಯಾ ಸಂಪುಟ ಅಸ್ತುಕರ್ನಾಟಕದ ಸಹಕಾರ ಸಂಘಗಳ ಅಭಿವೃದ್ಧಿಗೆ ₹4,164 ಕೋಟಿ: ರಾಜ್ಯಸಭೆಗೆ ಅಮಿತ್ ಶಾ70ಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಹಾರಾಟ ರದ್ದು ; ಬೆಂಗಳೂರು, ಮುಂಬೈ ಸೇರಿ ಅನೇಕ ಏರ್ಪೋರ್ಟ್'ನಲ್ಲಿ ಅವ್ಯವಸ್ಥೆದ. ಆಫ್ರಿಕಾ ವಿರುದ್ಧದ 5 ಪಂದ್ಯಗಳ T20I ಸರಣಿಗೆ ಬಲಿಷ್ಠ ಭಾರತ ತಂಡ ಪ್ರಕಟ |IND vs SAಮೊಬೈಲ್‌ಗಳಲ್ಲಿ 'ಸಂಚಾರ ಸಾಥಿ' ಆಯಪ್‌ ಕಡ್ಡಾಯ ಆದೇಶ ಹಿಂಪಡೆದ ಕೇಂದ್ರ ಸರ್ಕಾರವಾಯುಭಾರ ಕುಸಿತ, ಮುಂದಿನ 24 ಗಂಟೆಗಳಲ್ಲಿ ಧಾರಾಕಾರ ಮಳೆ! ಈ ಭಾಗಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ!ಸಿಬಿಐ ತನಿಖೆ ಆದೇಶ ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ತಮಿಳುನಾಡು ಸರ್ಕಾರ ಮನವಿ