This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Agriculture News

ಹಸಿಮೆಣಸಿನಕಾಯಿ ಬೆಳೆದ ಹಾವೇರಿ ರೈತ, ಉತ್ತಮ ಫಸಲಿಗೆ ಅನುಸರಿಸಿದ ವಿಧಾನವೇನು?

ಹಸಿಮೆಣಸಿನಕಾಯಿ ಬೆಳೆದ ಹಾವೇರಿ ರೈತ, ಉತ್ತಮ ಫಸಲಿಗೆ ಅನುಸರಿಸಿದ ವಿಧಾನವೇನು?

ಹಾವೇರಿ: ಬಹುತೇಕ ರೈತರು ಮಿಶ್ರಬೆಳೆ, ಪರ್ಯಾಯಬೆಳೆ, ಬಹುಬೆಳೆ ಸೇರಿದಂತೆ ಕೃಷಿಯ ಹಲವು ಪದ್ದತಿಗಳ ಬಗ್ಗೆ ರೈತರು ಹೆಚ್ಚು ಗಮನ ನೀಡುವದಿಲ್ಲ. ಈ ರೀತಿ ಗಮನ ಹರಿಸಿದರೆ ರೈತರಿಗೆ ಒಂದು ಬೆಳೆ ಕೈಕೊಟ್ಟರು ಮತ್ತೊಂದು ಬೆಳೆ ಕೈಹಿಡಿಯುತ್ತದೆ ಎನ್ನುತ್ತಾರೆ ಕೃಷಿ ತಜ್ಞರು.

ಎರಡು ಎಕರೆಯಲ್ಲಿ ಹಸಿಮೆಣಸಿನಕಾಯಿ ಒಂದು ಎಕರೆಯಲ್ಲಿ ಮಾವು ಅಡಿಕೆ, ಚಿಕ್ಕು, ಕಬ್ಬು ಸೇರಿದಂತೆ ಬಹುಬೆಳೆ ಬೆಳೆದು ಬಂಪರ್ ಫಸಲು ತೆಗೆದಿದ್ದಾರೆ.

ಇವರು ಬೆಳೆದ ಹಸಿಮೆಣಸಿನಕಾಯಿಗೆ ಬಂಪರ್ ಬೆಲೆ ಸಿಕ್ಕಿದ್ದು ಎಕರೆಗೆ ಒಂದು ಲಕ್ಷ ರೂಪಾಯಿಯಂತೆ ಆದಾಯ ಪಡೆದಿದ್ದಾರೆ. ಕಳೆದ ಹಲವು ವರ್ಷಗಳಿಂದ ಚಂದ್ರಶೇಖರ ಹಸಿಮೆಣಸಿನಕಾಯಿ ಬೆಳೆಯುತ್ತಿದ್ದಾರೆ.

ಜೈವಿಕ ಉತ್ಪನ್‌ಗಳ ಬಳಕೆಯಿಂದ ಅಧಿಕ ಇಳುವರಿ ಪಡೆದಿದ್ದೇವೆ ಎನ್ನುತ್ತಾರೆ ರೈತ ಚಂದ್ರಶೇಖರ. ಉಷ್ಣಾಂಶ ಅಧಿಕವಾದಾಗ ಮೆಣಸಿನಕಾಯಿ ಬೆಳೆಯಲ್ಲಿ ರಸಹೀರುವ ಕೀಟ ಅಧಿಕವಾಗಿ ಬೆಳೆಯುತ್ತಿದ್ದು, ಕೆಂಪುನೋಣ ಬಿಳಿಜೇಡಗಳ ಕಾಟ ವಿಪರೀತವಾಗಿರುತ್ತದೆ. ಇದರಿಂದ ಮೆಣಸಿನಕಾಯಿ ಗಿಡಕ್ಕೆ ಎಲೆಮುಟುರು ರೋಗ ಮತ್ತು ಕಾಯಿಗಳ ಗಾತ್ರ ಕಡಿಮೆ ಗಾತ್ರವಾಗಿ ಇಳುವರಿ ಸಹ ಕುಂಠಿತವಾಗುತ್ತದೆ.

ಪ್ರಸ್ತುತ ವರ್ಷ ಬಿಸಿಲಿನ ಪ್ರಕರತೆ ಅಧಿಕವಾಗಿದ್ದು ರೋಗ ರುಜಿನಗಳ ಸಹ ಅಧಿಕವಾಗಿದ್ದವು. ಈ ಸಂದರ್ಭದಲ್ಲಿ ರೈತರ ಕೈಹಿಡಿದಿದ್ದು ಸಾವಯುವ ಕೃಷಿ ಪದ್ದತಿ ಮತ್ತು ಜೈವಿಕ ಗೊಬ್ಬರಗಳು. ಹೌದು ಚಂದ್ರಶೇಖರ ತಮ್ಮ ಜಮೀನುಗಳಿಗೆ ಬಳಸುವದು ತಿಪ್ಪೆಗೊಬ್ಬರ ಮತ್ತು ಕೋಳಿಗೊಬ್ಬರ.

ಮೊದಲ ಬಾರಿ 40 ಕ್ವಿಂಟಲ್ ಹಸಿಮೆಣಸಿನಕಾಯಿ ಕಟಾವ್ ಮಾಡಲಾಗಿದೆ. ಎರಡನೇಯ ಬಾರಿ ಸಹ 40 ಕ್ವಿಂಟಲ್ ಕಟಾವ್ ಮಾಡಿದ್ದಾರೆ. ಉಳಿದಂತೆ ಇನ್ನು 20 ಕ್ಟಿಂಟಲ್ ಹಿಡಿದರೆ ಈ ವರ್ಷ ಎರಡು ಎಕರೆಗೆ ನೂರು ಕ್ವಿಂಟಲ್ ಹಸಿಮೆಣಸಿನಕಾಯಿ ಚಂದ್ರಶೇಖರ್ ಬೆಳೆದಿದ್ದಾರೆ. ಕಳೆದ ಬಾರಿ ಮಾರಾಟ ಮಾಡಿದಾಗ 3500 ರೂಪಾಯಿಗೆ ಕ್ವಿಂಟಲ್‌ ದರದಂತೆ ಹಸಿಮೆಣಸಿನಕಾಯಿ ಮಾರಾಟ ಮಾಡಿದ್ದಾರೆ. ಈ ಬಾರಿ 3000 ರೂಪಾಯಿ ಕ್ವಿಂಟಲ್‌ ದರದಂತೆ ಹಸಿಮೆಣಸಿನಕಾಯಿ ಮಾರಿದ್ದಾರೆ.

ತಮ್ಮ ಮನೆಯಲ್ಲಿ ಜಾನುವಾರುಗಳ ಗೊಬ್ಬರ ಕಡಿಮೆಯಾದರೆ ಬೇರೆ ರೈತರಿಂದ ತಿಪ್ಪೆಗೊಬ್ಬರ ಖರೀದಿ ಮಾಡಿ ಚಂದ್ರಶೇಖರ ಜಮೀನಿಗೆ ಹಾಕಿದ್ದಾರೆ. ಪರಿಣಾಮ ಎರಡು ಎಕರೆಯಲ್ಲಿ ಹಸಿಮೆಣಸಿನಕಾಯಿ ಗಿಡಗಳು ನಳನಳಿಸುತ್ತಿವೆ. ಜೊತೆಗೆ ಗಿಡತುಂಬಾ ಮೆಣಸಿನಕಾಯಿ ಬಿಟ್ಟಿದ್ದು ರೈತನಿಗೆ ಅಧಿಕ ಲಾಭ ತಂದಿದೆ.

ರೈತರು ಮಾತ್ರ ಈ ರೀತಿಯ ವೈವಿಧ್ಯಮಯ ಕೃಷಿಯತ್ತ ಮುಖ ಮಾಡುವುದು ಕಡಿಮೆ. ಆದರೆ ಬಹುಬೆಳೆ ಬೇಸಾಯದ ಮೂಲಕ ಹಾವೇರಿ ತಾಲೂಕು ಆಲದಕಟ್ಟಿಯ ರೈತ ಚಂದ್ರಶೇಖರ ಅಗಡಿ ಬಂಪರ್ ಬೆಳೆ ಬೆಳೆದಿದ್ದಾರೆ.

";