This is the title of the web page
This is the title of the web page

Live Stream

October 2024
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Politics News

ಕೈ ಕಾರ್ಯಕರ್ತರ ಆಣೆ ಪ್ರಮಾಣ

ನಿಮ್ಮ ಸುದ್ದಿ ಬಾಗಲಕೋಟೆ

ಮುಧೋಳ ಕ್ಷೇತ್ರವನ್ನು ಕೈ ವಶ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಆಕಾಂಕ್ಷಿಗಳಿಬ್ಬರನ್ನು ದೇವರ ಮುಂದೆ ನಿಲ್ಲಿಸಿ ಯಾರಿಗೆ ಟಿಕೆಟ್ ಸಿಕ್ಕರೂ ಪ್ರಾಮಾಣಿಕವಾಗಿ ಕೆಲಸ ಮಾಡುವ ಆಣೆ ಪ್ರಮಾಣವನ್ನು ಕಾರ್ಯಕರ್ತರು ಮಾಡಿಸಿದ್ದಾರೆ.

ಹೌದು, ಮುಧೋಳ ಕ್ಷೇತ್ರವನ್ನು ಈ ಸಲ ಕಾಂಗ್ರೆಸ್ ವಶ ಮಾಡಿಕೊಳ್ಳುವ ಉದ್ದೇಶದಿಂದ ಲೋಕಾಪುರದ ಲೋಕೇಶ್ವರ ಹಾಗೂ ದುರ್ಗಾದೇವಿ ದೇವಸ್ಥಾನಕ್ಕೆ ಆಕಾಂಕ್ಷಿಗಳಾದ ಆರ್.ಬಿ.ತಿಮ್ಮಾಪುರ ಹಾಗೂ ಸತೀಶ ಬಂಡಿವಡ್ಡರ ಅವರನ್ನು ಕರೆಯಿಸಿ ಕಾರ್ಯಕರ್ತರು ಸೇರಿದಂತೆ ಎಲ್ಲರೂ ದೇವರ ಮುಂದೆ ಪ್ರಮಾಣ ಮಾಡಿದ್ದಾರೆ.

ಕಳೆದ ಸಲದ ಚುಣಾವಣೆಯಲ್ಲಿ ಸತೀಶ ಬಂಡಿವಡ್ಡರ ಟಿಕೆಟ್ ಗಿಟ್ಟಿಸಿದ್ದರು. ಆಗ ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಸೈಲಟ್ ಆಗಿ ಉಳಿದರು. ಇದರಿಂದ ಕ್ಷೇತ್ರ ಕಳೆದುಕೊಳ್ಳುವಂಯಾಯಿತು. ಈ ಸಲವೂ ಹಾಗಾಗೋದು ಬೇಡ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಿ ಕ್ಷೇತ್ರ ಉಳಿಸಿಕೊಳ್ಳೋಣ ಎಂದು ದೇವರ ಮುಂದೆ ಆಣೆ ಪ್ರಮಾಣ ಮಾಡಿದ್ದಾರೆ.

ಇದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮತ್ತಷ್ಟು ಹುರುಪು ತುಂಬಿದ್ದು ಯಾರಿಗೆ ಟಿಕೆಟ್ ಸಿಕ್ಕರೂ ಪ್ರಾಮಾಣಿಕವಾಗಿ ಕೆಲಸ ಮಾಡಲು ಅನುಕೂಲವಾಗಲಿದೆ. ನಾಯಕರಾದವರೇ ಸೈಲೆಂಟ್ ಆಗಿ ಬಿಟ್ಟರೆ ಕಾರ್ಯಕರ್ತರಲ್ಲೂ ಉತ್ಸಾಹ ಕಡಿಮೆ ಆಗಲಿದೆ. ಆದರೆ ಈಗ ಎಲ್ಲರೂ ಎಲ್ಲವನ್ನು ಮರೆತು ದೇವರ ಮೇಲೆ ಪ್ರಮಾಣ ಮಾಡಿದ್ದು, ಯಾರೇ ಅಭ್ಯರ್ಥಿಯಾದರೂ ಒಟ್ಟಾಗಿ ಶ್ರಮಿಸಲಿದ್ದಾರೆ.

";