This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Politics News

ಚರಂತಿಮಠರಿಂದ ಗೊಂದಲ:ಗುರು ಆರೋಪ

ನಿಮ್ಮ ಸುದ್ದಿ ಬಾಗಲಕೋಟೆ

ಮಲ್ಲಿಕಾರ್ಜುನ ಚರಂತಿಮಠವರು ಇತ್ತೀಚಿನ ದಿನದಲ್ಲಿ ಬ್ಯಾನರ್ ಮತ್ತು ಪತ್ರಿಕೆಯಲ್ಲಿ ಜಾಹೀರಾತು ನೀಡುವಾಗ ತಮ್ಮ ಭಾವಚಿತ್ರ ಮತ್ತು ಹೆಸರನ್ನು ಬಳಸಿಕೊಂಡು ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿ ಮಾಡಿ ನನಗೆ ಕೆಟ್ಟ ಹೆಸರು ತರುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಗ್ರಾಮೀಣ ಘಟಕದ ಮುಖಂಡ ಗುರು ಅನಗವಾಡಿ ತಿಳಿಸಿದ್ದಾರೆ.

ಶಾಸಕರಾದ ವೀರಣ್ಣ ಚರಂತಿಮಠ ಹಾಗೂ ತಮ್ಮ ಮಧ್ಯೆ ಇರುವ ಒಳ್ಳೆಯ ಸಂಬAಧವನ್ನು ಸಹ ಹಾಳು ಮಾಡುವ ದುರುದ್ದೇಶ ಹೊಂದಲಾಗಿದೆ ಎಂದಿದ್ದಾರೆ.
ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಶಾಸಕರು ಹಾಗೂ ನಮ್ಮ ನಾಯಕರಾದ ವೀರಣ್ಣ ಚರಂತಿಮಠವರ ಮಾರ್ಗದರ್ಶನದಲ್ಲಿ ನಡೆಯುತ್ತೇವೆ. ಪಕ್ಷದ ಹಾಗೂ ವೀರಣ್ಣ ಚದರಂತಿಮಠವರ ಚೌಕಟ್ಟಿನಲ್ಲಿದ್ದುಕೊಂಡು ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ. ಬಿಜೆಪಿ ಪಕ್ಷವೇ ನಮ್ಮ ಉಸಿರು ಪಕ್ಷಕ್ಕೆ ದ್ರೋಹ ಮಾಡುವ ಕೆಲಸ ಎಂದೂ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಮಲ್ಲಿಕಾರ್ಜುನ ಚರಂತಿಮಠವರು ನನ್ನ ಭಾವಚಿತ್ರ ಮತ್ತು ಹೆಸರನ್ನು ಬಳಸಿಕೊಂಡು ಪತ್ರಿಕೆಯಲ್ಲಿ ಜಾಹೀರಾತು ನೀಡುವುದು ಹಾಗೂ ಬ್ಯಾನರದಲ್ಲಿ ಹಾಕಿ ಕೆಟ್ಟ ಹೆಸರು ತರುವ ಕೆಲಸ ಮಾಡುತ್ತಿದ್ದು ಮಲ್ಲಿಕಾರ್ಜುನ ಚರಂತಿಮಠ ಜತೆ ನನ್ನದು ಯಾವುದೇ ಸಂಬAಧ ಇರುವುದಿಲ್ಲ. ವಿನ: ಕಾರಣ ನಮ್ಮ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಲು ನನ್ನನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕಾರ್ಯಕರ್ತರು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಗುರು ಅನಗವಾಡಿ ತಿಳಿಸಿದ್ದಾರೆ.

Nimma Suddi
";