This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime News

ಜಾಲಹಳ್ಳಿಯ ಯುವತಿಗೆ ಪಂಗನಾಮ ಹಾಕಿದ ಆನ್ ಲೈನ್ ಜ್ಯೋತಿಷಿ: 8.16 ಲಕ್ಷ ರೂ ಕಳೆದುಕೊಂಡ ಯುವತಿ

ಜಾಲಹಳ್ಳಿಯ ಯುವತಿಗೆ ಪಂಗನಾಮ ಹಾಕಿದ ಆನ್ ಲೈನ್ ಜ್ಯೋತಿಷಿ: 8.16 ಲಕ್ಷ ರೂ ಕಳೆದುಕೊಂಡ ಯುವತಿ

ಬೆಂಗಳೂರು: ಮನಸ್ತಾಪದಿಂದ ದೂರವಾಗಿದ್ದ ಗೆಳೆಯನೊಂದಿಗೆ ಹಾಗೂ ಕೌಟುಂಬಿಕ ಸಮಸ್ಯೆಗಳ ಪರಿಹಾರಕ್ಕೆ ಆನ್‌ಲೈನ್ ಮುಖಾಂತರ ಪರಿಚಿತನಾದ ಜ್ಯೋತಿಷಿ ಮಾತು ನಂಬಿದ ಯುವತಿಯು 8.36 ಕೋಟಿ ಕಳೆದುಕೊಂಡಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ ಎಂದು ಮಾಹಿತಿ ತಿಳಿದು ಬಂದಿದೆ.

ವಂಚನೆಗೊಳಗಾದ 25 ವರ್ಷದ ವಹೀದಾ (ಹೆಸರು ಬದಲಿಸಲಾಗಿದೆ), ಜ್ಯೋತಿಷಿ ಅಹಮದ್ ದೆಹಲ್ವಿ ಹಾಗೂ ಆತನ ಸಹಚರರ ವಿರುದ್ಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದು, ಜಾಲಹಳ್ಳಿಯಲ್ಲಿ ವಾಸಿಸುತ್ತಿದ್ದ ವಹೀದಾ ಆಕೆಯ ಗೆಳಯನಿಂದ ದೂರವಾಗಿದ್ದಳು. ಅಲ್ಲದೇ ಕುಟುಂಬ ಸದಸ್ಯರ ನಡುವೆಯೂ ಭಿನ್ನಾಭಿಪ್ರಾಯ ಮೂಡಿ, ಸಂಬಂಧಗಳಲ್ಲಿ ಬಿರುಕು ಮೂಡಿದ್ದು, ಇದರಿಂದ ನೊಂದಿದ್ದ ಯುವತಿಯು, ಮಾನಸಿಕ ನೆಮ್ಮದಿ , ಸಮಸ್ಯೆಗಳಿಗೆ ಮುಕ್ತಿ ಪಡೆಯುವ ಸಲುವಾಗಿ ಆನ್ ಲೈನ್ ನಲ್ಲಿ ಜ್ಯೋತಿಷಿಗಳ ಫೋನ್ ಸಂಖ್ಯೆಗಳನ್ನು ಜಾಲಾಡಿದ್ದಳು.

ಈ ವೇಳೆ ಮೊಬೈಲ್ ಸಂಖ್ಯೆ ಒಂದಕ್ಕೆ ಕರೆ ಮಾಡಿದಾಗ, ಅಹಮದ್ ದೆಹಲ್ವಿ ಎಂಬ ವ್ಯಕ್ತಿ ತಾನು ಪ್ರಸಿದ್ಧ ಜ್ಯೋತಿಷಿ ಎಂದು ಹೇಳಿಕೊಂಡಿದ್ದ ವಹೀದಾ ಸಮಸ್ಯೆಗಳನ್ನು ಆಲಿಸಿದ್ದ ಅಹಮದ್ ಕುಟುಂಬದವರ ಮೇಲೆ ಯಾರೋ ಮಾಟ ಮಂತ್ರ (ಬ್ಲ್ಯಾಕ್ ಮ್ಯಾಜಿಕ್ ) ಮಾಡಿಸಿದ್ದಾರೆ. ಈ ಎಲ್ಲ ಸಮಸ್ಯೆಗಳಿಂದ ಮುಕ್ತಿ ಪಡೆಯಲು ವಿಶೇಷ ಪೂಜೆ ಮಾಡಬೇಕು ಎಂದು ತಿಳಿಸಿದ್ದ.

ಮಾನಸಿಕ ಸಂಕಷ್ಟದಲ್ಲಿದ್ದ ವಹೀದಾ ಆತನ ಮಾತು ನಂಬಿ, ಆತನ ಸಲಹೆ ಮೇರೆಗೆ ಗೆಳೆಯ ಮತ್ತು ಕುಟುಂಬ ಸದಸ್ಯರ ಫೋಟೋಗಳನ್ನು ವ್ಯಾಟ್ಸಾಪ್ ಮಾಡಿದ್ದಳು. ಮಾಟ, ಮಂತ್ರ ತಡೆಯಲು ತನಗೆ ಇಂತಿಷ್ಠು ಹಣ ನೀಡಬೇಕು ಎಂದು ನೀಡಬೇಕೆಂದು ಬೇಡಿಕೆ ಇಟ್ಟ ಅಹಮದ್ ತನ್ನ ಸಹಚರನ ಕೈಗೆ ಹಣ ಕೊಟ್ಟು ಕಳುಹಿಸುವಂತೆ ತಿಳಿಸಿದ್ದ. ವಾಟ್ಸ್‌ ಆ್ಯಪ್ ಮೂಲಕ ಕಳುಹಿಸಿಕೊಟ್ಟಿದ್ದರು. ಹೀಗಾಗಿ ವಹೀದಾ ಅವರು ಬಿಇಎಲ್ ಸರ್ಕಲ್ ನಲ್ಲಿ ಅಹಮದನ ಸಹಚರ ಅಬ್ದುಲ್ ರಹಿಮಾನ್ ಎಂಬಾತನಿಗೆ 2.34 ಲಕ್ಷ ರೂಪಾಯಿ ಕೊಟ್ಟಿದ್ದರು. ಕೆಲ ದಿನಗಳ ಬಳಿಕ ಪುನಹ ಹೆಬ್ಬಾಳದಲ್ಲಿ 1.45 ಲಕ್ಷ ರೂ ನೀಡಿದ್ದರು ಎಂದು ಮಾಹಿತಿ ಬೆಳಕಿಗೆ ಬಂದಿದೆ.

";