This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Politics News

ಚರಂತಿಮಠರಿಗೆ ಸಚಿವ ಸ್ಥಾನಕ್ಕೆ ಆಗ್ರಹ

ಬಾಗಲಕೋಟೆ

ಅಭಿವೃದ್ಧಿಯ ಹರಿಕಾರರೆಂದೆನಿಸಿಕೊಂಡ ಬಾಗಲಕೋಟೆ ಕ್ಷೇತ್ರದ ಶಾಸಕ ಡಾ.ವೀರಣ್ಣ ಚರಂತಿಮಠ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಅಮೀನಗಡ ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯರು ಆಗ್ರಹಿಸಿದ್ದಾರೆ.

ವೀರಣ್ಣ ಚರಂತಿಮಠ ಅವರು ಕ್ಷೇತ್ರದ ಶಾಸಕರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಯಾವುದೇ ಫಲಾಪೇಕ್ಷೆ ಬಯಸದೆ ಬಿಜೆಪಿಯ ನಿಷ್ಟಾವಂತರಾಗಿದ್ದುಕೊಂಡು ಅಭಿವೃದ್ಧಿ ಕಾರ್ಯದಿಂದಲೇ ತಮ್ಮನ್ನು ತಾವು ಗುರ್ತಿಸಿಕೊಂಡಿದ್ದಾರೆ. ಅವರಿಗೆ ನೂತನವಾಗಿ ರಚಿತವಾಗುವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವ ಮೂಲಕ ಅವರ ಸೇವೆ ರಾಜ್ಯಾದ್ಯಂತ ದೊರೆಯುವಂತಾಗಲಿ.

ಆ ಮೂಲಕ ರಾಜ್ಯಕ್ಕೂ ಪಕ್ಷಕ್ಕೂ ಒಳ್ಳೆಯದಾಗಲಿದೆ ಎಂದು ಪಪಂ ಅಧ್ಯಕ್ಷ ಸಂಗಪ್ಪ ತಳವಾರ, ಉಪಾಧ್ಯಕ್ಷೆ ಶಂಕ್ರಮ್ಮ ಗೌಡರ, ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯಕುಮಾರ ಕನ್ನೂರ, ಸದಸ್ಯ ಗುರುನಾಥ ಚಳ್ಳಮರದ, ಪರಶುರಾಮ ಪುರ್ತಗೇರಿ, ಮುಖಂಡರಾದ ರಾಮಣ್ಣ ಬ್ಯಾಕೋಡ, ರಾಘವೇಂದ್ರ ಗೌಡರ, ಸಂತೋಷ ಐಹೊಳ್ಳಿ ಆಗ್ರಹಿಸಿದ್ದಾರೆ.