This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Crime News

ಲೋಕ ಅದಾಲತ್:5579 ಪ್ರಕರಣಗಳು ಇತ್ಯರ್ಥ

ಲೋಕ ಅದಾಲತ್:5579 ಪ್ರಕರಣಗಳು ಇತ್ಯರ್ಥ

40 ಜನ ಸಂತ್ರಸ್ಥರಿಗೆ ಸ್ಥಳದಲ್ಲಿಯೇ ಪರಿಹಾರ : ನ್ಯಾ.ದೇಶಪಾಂಡೆ

ನಿಮ್ಮ ಸುದ್ದಿ ಬಾಗಲಕೋಟೆ

ಜಿಲ್ಲಾ ನ್ಯಾಯಾಲಯದ ಅಧೀನದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದ ಒಟ್ಟು 40 ಜನ ಸಂತ್ರಸ್ಥರಿಗೆ ಸ್ಥಳದಲ್ಲಿಯೇ ಪರಿಹಾರಧನದ ಚೆಕ್ ಒದಗಿಸುವ ಕಾರ್ಯ ಮಾಡಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎಸ್.ದೇಶಪಾಂಡೆ ಹೇಳಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲದ ಕಚೇರಿಯಲ್ಲಿಂದು ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಭೂಮಿಯನ್ನು ಕಳೆದುಕೊಂಡ ಸಂತ್ರಸ್ಥರಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ರಾಜೀ ಸಂಧಾನದ ಮೂಲಕ 40 ಜನ ಸಂತ್ರಸ್ತರಿಗೆ ಸ್ಥಳದಲ್ಲಿಯೇ ಪರಿಹಾರ ಧನದ ಚೆಕ್ ಒದಗಿಸುವ ಕಾರ್ಯ ಮಾಡಲಾಗಿದೆ.

ಹುನಗುಂದ ನ್ಯಾಯಾಲಯದಲ್ಲಿಯೂ ಸಹ ಭೂಮಿ ಪರಿಹಾರಕ್ಕೆ ಸಂಬಂಧಿಸಿದ ಅತೀ ಹೆಚ್ಚು 16.57 ಲಕ್ಷ ರೂ.ಗಳ ಪರಿಹಾರದ ವಿತರಿಸುವ ಕಾರ್ಯ ಮಾಡಲಾಗಿದೆ ಎಂದರು.

ರಾಷ್ಟ್ರೀಯ ಲೋಕ ಅದಾಲತ್ ಶಿಬಿರದಲ್ಲಿ ಒಟ್ಟು 11074 ಪ್ರಕರಣಗಳ ಪೈಕಿ 5579 ಪ್ರಕರಣಗಳಿಗೆ ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ. ಬಾಕಿ ಇರುವ 5532 ಮತ್ತು 5542 ವಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟು 11074 ಪ್ರಕರಣಗಳನ್ನು ವಿಚಾರಣೆಗಾಗಿ ತೆಗೆದುಕೊಳ್ಳಲಾಗಿದ್ದು, ಈ ಪೈಕಿ 5579 ಪ್ರಕರಣಗಳನ್ನು ಇತ್ಯರ್ಥ ಪಡಿಸಿ ರಾಜೀ ಸಂಧಾನ ಮಾಡಿಸಲಾಯಿತು. ಈ ಎಲ್ಲ ಪ್ರಕರಣಗಳಿಗೆ ಒಟ್ಟು 21.69 ಕೋಟಿ ರೂ.ಗಳಿಗೆ ರಾಜೀ ಮಾಡಿಸಲಾಗಿದೆ ಎಂದರು.

ಬಾಗಲಕೋಟೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಬಾಕಿ ಇರುವ ಒಟ್ಟು 1751 ಪೈಕಿ 306 ಪ್ರಕರಣಗಳು ಇತ್ಯರ್ಥವಾದರೆ, ಬೀಳಗಿ ಕೋರ್ಟನಲ್ಲಿ 899 ಪ್ರಕರಣಗಳ ಪೈಕಿ 375, ಮುಧೋಳ ಕೋರ್ಟನಲ್ಲಿ 247 ಪ್ರಕರಣಗಳ ಪೈಕಿ 96, ಬನಹಟ್ಟಿ ಕೋರ್ಟನಲ್ಲಿ 899 ಪ್ರಕರಣಗಳ ಪೈಕಿ 375, ಹುನಗುಂದ ಕೋರ್ಟನಲ್ಲಿ 823 ಪೈಕಿ 181, ಜಮಖಂಡಿ ಕೋರ್ಟನಲ್ಲಿ 1051 ಪ್ರಕರಣಗಳ ಪೈಕಿ 168 ಹಾಗೂ ಬಾದಾಮಿ ಕೋರ್ಟನಲ್ಲಿ 680 ಪ್ರಕರಣಗಳ ಪೈಕಿ 231 ಪ್ರಕರಣಗಳನ್ನು ಇತ್ಯರ್ಥಗೊಂಡಿವೆ ಎಂದರು.

ಅಲ್ಲದೇ 5542 ವಾಜ್ಯ ಪೂರ್ವ ಪ್ರಕರಣಗಳಲ್ಲಿ ಕ್ರಿಮಿನಲ್ ಕೌಂಪಂಡೆಬಲ್ ಪ್ರಕರಣ, ಬ್ಯಾಂಕ್ ರಿಕವರಿ, ಕಾರ್ಮಿಕರ ವಿವಾದ, ವೈವಾಹಿಕ ವಿವಾದ, ಭೂ ಪರಿವರ್ತನೆ, ಚೆಕ್ ಬೌಂನ್ಸ್, ಇತರೆ ನಾಗರಿಕ ಪ್ರಕರಣಗಳು ಹಾಗೂ ಪೆಟ್ಟಿ ಕೇಸ್‍ಗೆ ಸಂಬಂಧಿಸಿದ ಪ್ರಕರಣಗಳಿದ್ದವು.

ಲೋಕ ಅದಾಲತ್ ಶಿಬಿರದಲ್ಲಿ ಕಾರ್ಯಕ್ರಮದಲ್ಲಿ ಕುಟಂಬ ನ್ಯಾಯಾಲಯದ ನ್ಯಾಯಾಧೀಶರಾದ ಕ್ರೀಷ್ಣಮೂರ್ತಿ ಪಡಸಲಗಿ, ಚೇಲ್ಡ ಪ್ರೆಂಡ್ಲಿ ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ಬಿ.ರೆಹಮಾನ, ಮುಖ್ಯ ಪ್ರಧಾನ ನ್ಯಾಯಾಧೀಶೆ ಪಲ್ಲವಿ ಆರ್, 1ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ದಾವಪ್ಪ ಎಸ್.ಬಿ, ಪ್ರಧಾನ ದಿವಾಣಿ ನ್ಯಾಯಾಧೀಶ ನಾಗರಾಜ ಎಸ್ ಸೇರಿದಂತೆ ವಕೀಲರು, ಕಕ್ಷಿದಾರರು ಪಾಲ್ಗೊಂಡಿದ್ದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಾ ಪಸ್ತಾಪೂರ ಉಪಸ್ಥಿತರಿದ್ದರು.

Nimma Suddi
";