This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Politics News

ನಭಿ ನಧಾಫ್:ಮತ್ತೊಂದು ಹುದ್ದೆ

ಮುಸ್ಲಿಂ ರಾಷ್ಟ್ರೀಯ ಮಂಚಿನ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಅನಗವಾಡಿ ನಭಿ ಮ ನದಾಫ್ ಆಯ್ಕೆ

ನಿಮ್ಮ ಸುದ್ದಿ ಬಾಗಲಕೋಟೆ

ಮುಸ್ಲಿಂ ರಾಷ್ಟ್ರೀಯ ಮಂಚ್ ಒಂದು ರಾಷ್ಟ್ರವ್ಯಾಪಿ ಸಂಘಟನೆಯಾಗಿ ಇಂದು ಇಡೀ ದೇಶದಲ್ಲಿ ಹಾಗೂ ರಾಜ್ಯದ 31 ಜಿಲ್ಲೆಗಳಲ್ಲಿ ಇದರ ಕೆಲಸ ಕಾರ್ಯಗಳು ತುಂಬಾ ಯಶಸ್ವಿಯಾಗಿ ನಡೆಯುತ್ತಿವೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾರ್ಗದರ್ಶನದಲ್ಲಿ 2002 ರಲ್ಲಿ ಪ್ರಾರಂಭವಾದ ಮಾನನೀಯ ಹಿಂದಿನ ಸರಸಂಘಚಾಲಕರಾದ ಸುದರ್ಶನ್ ಜಿ ಅವರ ಇಚ್ಛೆಯಂತೆ ಇಂದು ಇಡೀ ದೇಶದಲ್ಲಿ ಮುಸ್ಲಿಂ ಸಮಾಜವನ್ನು ರಾಷ್ಟ್ರೀಯ ಏಕತೆಗಾಗಿ ಹಾಗೂ ಮುಖ್ಯವಾಹಿನಿಗೆ ತರುವ ದೃಷ್ಟಿಯಿಂದ ರಾಷ್ಟ್ರಭಕ್ತಿ ಜಾಗರಣ ಮಾಡುವ ಕೆಲಸವನ್ನು ಮುಸ್ಲಿಂ ರಾಷ್ಟ್ರೀಯ ಮಂಚ್ ಬಹಳ ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿದೆ.

ಬಹುದೊಡ್ಡ ಕೆಲಸವನ್ನು ಮಾಡುತ್ತ ಬಂದಿದೆ ಅದೇ ರೀತಿ ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯ ಅನಗವಾಡಿ ಗ್ರಾಮದ ಶ್ರೀ ನಬಿ ನದಾಫ್ ಅವರನ್ನು ಕರ್ನಾಟಕ ರಾಜ್ಯ ಮುಸ್ಲಿಂ ರಾಷ್ಟ್ರೀಯ ಮಂಚ್ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.

ರಾಜ್ಯ ಸಂಚಾಲಕರಾದ ಶ್ರೀ ಇಲಿಯಾಸ್ ಅಹಮದ್ ಅವರು ಆದೇಶವನ್ನು ಹೊರಡಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹಾಗೂ ಎಲ್ಲಾ ಜಿಲ್ಲೆಗಳಲ್ಲಿ ಉತ್ತಮ ಸಂಘಟನೆ ಮಾಡಲಿ ಎಂದು ಅವರು ಶುಭಕೋರಿದ್ದಾರೆ.

ಇದೇ ಸಂದರ್ಭದಲ್ಲಿ ಸಂಘದ ಎಲ್ಲ ಹಿರಿಯರು ಹಾಗೂ ಮುಸ್ಲಿಂ ಸಮಾಜದ ಹಿರಿಯರು ಯುವಕರು ಇವರನ್ನು ಅಭಿನಂದಿಸಿದ್ದಾರೆ.

ಬೀಳಗಿ ವಿಧಾನಸಭಾ ಮತಕ್ಷೇತ್ರದ ಹಾಲಿ ಸಚಿವರಾದ ಸನ್ಮಾನ್ಯ ಶ್ರೀ ಮುರುಗೇಶ್ ಆರ್ ನಿರಾಣಿ, ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಸನ್ಮಾನ ಶ್ರೀ ವೀರಣ್ಣ ಚರಂತಿಮಠ, ನಾರಾಯಣ ಸಾ ಭಾಂಡಗೆ, ಪಿಎಚ್ ಪೂಜಾರ್, ಅಶೋಕ್ ಲಿಂಬಾವಳಿ, ಹನುಮಂತ ನಿರಾಣಿ, ಶ್ರೀಕಾಂತ್ ಕುಲಕರ್ಣಿ, ಸುಬ್ರಾಯ ಗೌಡ, ವಿರುಪಾಕ್ಷಿ ರೇವಡಿಗಾರ ಹಾಗುೂ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಹಾಗೂ ಮುಸ್ಲಿಂ ಸಮಾಜದ ನಾಯಕರು ಶುಭವನ್ನು ಕೋರಿದ್ದಾರೆ.