This is the title of the web page
This is the title of the web page

Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

Politics News

ಕಾಶಪ್ಪನವರ ಹೇಳಿಕೆಗೆ ರಾಜು ನಾಯ್ಕರ ತಿರುಗೇಟು

ನಿಮ್ಮ ಸುದ್ದಿ ಬಾಗಲಕೋಟೆ

ದೇಶದಲ್ಲಿ ಯಾರು ಭಯೋತ್ಪಾದಕರಿಗೆ ಬೆಂಬಲಿಸುತ್ತಾರೆ, ಭಯೋತ್ಪಾದಕರ ಸೃಷ್ಟಿಗೆ ಪ್ರೋತ್ಸಾಹ ಯಾರು ನೀಡುತ್ತಾರೆ, ಭಯೋತ್ಪಾದಕತೆಯನ್ನು ಬೇರು ಸಮೇತ ಕಿತ್ತು ಹಾಕಲು ಯಾರು ದಿಟ್ಟ ಕ್ರಮವನ್ನು ಕೈಗೊಂಡಿದ್ದಾರೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಬಿಜೆಪಿ ಸರ್ಕಾರ ೭ ವರ್ಷದಲ್ಲಿ ಏನು ಮಾಡಿದೆ ೭೦ ವರ್ಷದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು ಏನು ಮಾಡಿದೆ ಎಂಬುದನ್ನು ಜನ ಅರಿತಿದ್ದಾರೆ. ಪ್ರಚಾರಕ್ಕಾಗಿ ಇಲ್ಲಸಲ್ಲದ ಹೇಳಿಕೆಯನ್ನು ಕೊಡುವುದನ್ನು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಬಿಡಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಪತ್ರಿಕಾ ಪ್ರಕಟಣೆಯ ಮೂಲಕ ತಿರುಗೇಟು ನೀಡಿದ್ದಾರೆ.

ಉಗ್ರಗಾಮಿಗಳನ್ನು ಸಂತಾನೋತ್ಪತ್ತಿ ಮಾಡಿರುವುದು ಯಾರೆಂಬುದು ಹೇಳಬೇಕಿಲ್ಲ. ಉಗ್ರಗಾಮಿಗಳ ಸಂತಾನೋತ್ಪತ್ತಿಯನ್ನು ಕಟ್ ಮಾಡಲೆಂದೇ ದೇಶದಲ್ಲಿ ಮೋದಿ ಸರ್ಕಾರ ಬಂದಿದೆ. ಯಾರ ಕಾಲದಲ್ಲಿ ಭಯೋತ್ಪಾದಕರ ಅಟ್ಟಹಾಸವಿತ್ತು ಈಗ ಏನಾಗಿದೆ ಎಂಬುದರ ಅರಿವಿಲ್ಲದೇ ತಮ್ಮ ಬಾಯಿಗೆ ಬಂದಂತೆ ಮಾತನಾಡುವುದನ್ನು ಕಾಶಪ್ಪನವರ ಬಿಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶದ ಅಭಿವೃದ್ಧಿ, ದೇಶವನ್ನು ಕಾಯಲು ಚಿಂತನೆ ಮಾಡುತ್ತದೆ ಭಯೋತ್ಪಾದನೆಯನ್ನು ಸೃಷ್ಟಿ ಮಾಡಲು ಅಲ್ಲ. ಆರ್‌ಎಸ್‌ಎಸ್ ಯಾವತ್ತೂ ದೇಶ ಹಾಗೂ ನಮ್ಮ ಸಂಸ್ಕೃತಿಯನ್ನು ಕಾಪಾಡಲು ಕೆಲಸ ಮಾಡುತ್ತದೆ ವಿನ: ರಾಜಕಾರಣ ಮಾಡಲು ಅಲ್ಲ ಎಂಬುದನ್ನು ಕಾಶಪ್ಪನವರ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ವಿಜಯಾನಂದ ಕಾಶಪ್ಪನವರ ತಮ್ಮ ನಾಯಕರನ್ನು ಮೆಚ್ಚಿಸಲು ಆರ್‌ಎಸ್‌ಎಸ್ ಹಾಗೂ ಬಿಜೆಪಿ ನಾಯಕರ ವಿರುದ್ಧ ಮಾತನಾಡುವುದನ್ನು ಬಿಡಬೇಕು. ಈ ರೀತಿ ನಾಲಿಗೆಯನ್ನು ಹರಿಬಿಟ್ಟೆ ಜನ ಪಾಠ ಕಲಿಸಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ರಾಜು ನಾಯ್ಕರ ಹೇಳಿದ್ದಾರೆ.

ಯಾರು ಆಲದ ಮರ, ಯಾರು ಬೊಗಳೋ ನಾಯಿ ಎಂಬುದನ್ನು ನಿಮ್ಮ ಕ್ಷೇತ್ರದ ಜನರಿಗೆ ಗೊತ್ತಿದೆ. ಈಗಾಗಲೇ ಈ ರೀತಿ ಅಬ್ಬರದ ಇಲ್ಲಸಲ್ಲದ ಹೇಳಿಕೆಯನ್ನು , ಆರೋಪ ಮಾಡುವುದನ್ನು ಮಾಡಿದ್ದರಿಂದಲೇ ನಿಮ್ಮ ಕ್ಷೇತ್ರದ ಜನ ನಿಮಗೆ ಪಾಠ ಕಳಿಸಿದ್ದಾರೆಂಬುದನ್ನು ಅರಿತುಕೊಳ್ಳಬೇಕು. ಚುನಾವಣೆ ಬಂದಾಗ ಸುಖಾಸುಮ್ಮನೆ ಆರ್‌ಎಸ್‌ಎಸ್, ಹಿಂದೂ ಸಂಘಟನೆಗಳ ಬಗ್ಗೆ ತಪ್ಪು ಸಂದೇಶವನ್ನು ಜನರಲ್ಲಿ ತುಂಬಿ ರಾಜಕಾರಣ ಮಾಡುವುದನ್ನು ಬಿಟ್ಟು ತಾಕತ್ತು ಇದ್ದರೆ ಬಿಜೆಪಿಯಲ್ಲಿ ಸೆಣಸಾಡಿ ಎಂದು ಕಾಶಪ್ಪನವರಿಗೆ ನಾಯ್ಕರ ಎಚ್ಚರಿಕೆ ನೀಡಿದ್ದಾರೆ.

Nimma Suddi
";