This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Politics News

ಶೆಟ್ಟರ್ ಅವರನ್ನು ಕಾಂಗ್ರೆಸ್ ನಲ್ಲಿ ಉಳಿಸಿಕೊಳ್ಳುವಂತದ್ದು ಏನಿದೆ ಹೇಳಿ?

ಶೆಟ್ಟರ್ ಅವರನ್ನು ಕಾಂಗ್ರೆಸ್ ನಲ್ಲಿ ಉಳಿಸಿಕೊಳ್ಳುವಂತದ್ದು ಏನಿದೆ ಹೇಳಿ?

ಹುಬ್ಬಳ್ಳಿ: ಲಕ್ಷ್ಮಣಸವದಿ ಬಿಜೆಪಿಗೆ ಹೋಗ್ತಾರೋ ಇಲ್ವೋ ನೀವು ಅವರನ್ನೇ ಕೇಳ್ಬೇಕು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ತಿಳಿಸಿದರು.

ವಿಧಾನಸಭಾ ಚುವಾವಣೆ ವೇಳೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಲಕ್ಷಣ ಸವದಿ ಈಗ ಜಗದೀಶ್ ಶೆಟ್ಟರ್ ಅವರಂತೆ ಬಿಜೆಪಿ ಸೇರುತ್ತಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗಳಿಗೆ ಈ ರೀತಿ ಸ್ಪಂದಿಸಿದರು.

ಕಾಂಗ್ರೆಸ್ ಶೆಟ್ಟರ್ ಅವರನ್ನು ಉಳಿಸಿಕೊಳ್ಳೋ ಕೆಲಸ ಮಾಡಿಲ್ಲ ಎಂಬ ಸವದಿ ಹೇಳಿಕೆಗೆ, ಪ್ರತಿಕ್ರಿಯಿಸಿದರು ಅವರು ಕಾಂಗ್ರೆಸ್ ನಲ್ಲಿ ಉಳಿಸಿಕೊಳ್ಳುವಂತದ್ದು ಏನಿದೆ ಹೇಳಿ? ಅವರಿಗೆ ನಮ್ಮ ಪಕ್ಷ ಕರ್ಕೊಂಡು ಟಿಕೆಟ್ ಕೊಟ್ಟಿದೆ. ಅವರಿಗೆ ಎಂಎಲ್ಸಿ ಮಾಡಿದ್ದೀವಿ ಉಳಿಸಿಕೊಳ್ಳಬೇಕು ಅಂದ್ರೆ ಯಾವ ರೀತಿ ಉಳಿಸಿಕೊಳ್ಳಬೇಕು? ನನಗೆ ಗೊತ್ತಿಲ್ಲ ಎಂದು ಹೇಳಿದರು.

ಬಿಜೆಪಿ ಆಪರೇಷನ್ ಕಮಲದ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟ ಅವರು, ನಾವು 136 ಜನ ಇದೀವಿ, ಅವರಿಬ್ಬರೂ ಸೇರಿದ್ರೆ 85 ಜನ ಇದ್ದಾರೆ. ಲೆಕ್ಕ ಪ್ರಕಾರ ಹೋದ್ರೆ 53 ಜನ ಹೋಗ್ಬೇಕು 53 ಜನ ಹೋದ್ರೆ ಮಾತ್ರ ಏನಾದ್ರೂ ಆಗಬಹುದು ಎಂದು ಸೂಚಿಸಿದರು.