This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

National News

ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗಿದೆ ಎಂದು ಪ್ರತಿಭಟಿಸುವ ಅಗತ್ಯವಿಲ್ಲ: ಕೇರಳದ ಐಯುಎಂಎಲ್ ಮುಖ್ಯಸ್ಥ

ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗಿದೆ ಎಂದು ಪ್ರತಿಭಟಿಸುವ ಅಗತ್ಯವಿಲ್ಲ: ಕೇರಳದ ಐಯುಎಂಎಲ್ ಮುಖ್ಯಸ್ಥ

ಮಲಪ್ಪುರಂ: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭದ ಎರಡು ದಿನಗಳ ನಂತರ ಜನವರಿ 24 ರಂದು ಮಲಪ್ಪುರಂನಲ್ಲಿ ಕೇರಳದ ಪ್ರಭಾವಿ ಪಾಣಕ್ಕಾಡ್ ಕುಟುಂಬದ ಹಿರಿಯ ಸದಸ್ಯರಾದ ಸಾದಿಕ್ ಅಲಿ ಶಿಹಾಬ್ ತಂಙಳ್ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿದ್ದರು ಎಂದು ಮಾಹಿತಿ ತಿಳಿದು ಬಂದಿದೆ.

ರಾಜಕೀಯ ವಲಯಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್‌ನ ಮಿತ್ರ ಪಕ್ಷವಾದ ಐಯುಎಂಎಲ್, ತಂಙಳ್ ಅವರ ಹೇಳಿಕೆಗಳು ಸಹಿಷ್ಣುತೆ ಮತ್ತು ಸಾಮರಸ್ಯದ ನಿಲುವನ್ನು ಪುನರುಚ್ಚರಿಸುತ್ತವೆ ಎಂದು ಹೇಳಿದರೆ, ಸಮುದಾಯದ ರಾಜಕೀಯ ಪ್ರತಿಸ್ಪರ್ಧಿಗಳು ಐಯುಎಂಎಲ್ ನಾಯಕ ಆರ್‌ಎಸ್‌ಎಸ್ ಭಾಷೆಯನ್ನೇ ಮಾತನಾಡುತ್ತಿದ್ದಾರೆ.

ತಂಙಳ್ ಅವರ ವಿರುದ್ಧವೇ ಪಕ್ಷದ ಸಹಾನುಭೂತಿಗಳು ಬೀದಿಗಿಳಿಯುವ ಸಮಯ ಬರಲಿದೆ ಅಯೋಧ್ಯೆಯಲ್ಲಿ ನಡೆದ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ಉಲ್ಲೇಖಿಸಿ ಮಾತನಾಡಿದ ತಂಙಳ್ , “ನಮ್ಮ ದೇಶದಲ್ಲಿ ಒಂದು ಪ್ರಮುಖ ಬೆಳವಣಿಗೆ ನಡೆದಿದೆ. ದೇಶದ ಬಹುಸಂಖ್ಯಾತ ಸಮುದಾಯ ಬಯಸಿದ್ದ ರಾಮ ಮಂದಿರ ಸಾಕಾರಗೊಂಡಿದೆ.

ದೇಶ ಈಗ ಹಿಂದಕ್ಕೆ ಹೋಗಲು ಸಾಧ್ಯವಿಲ್ಲ. ಅದು ದೇಶದ ಬಹುಸಂಖ್ಯಾತ ಸಮುದಾಯದ ಅಗತ್ಯವಾಗಿದ್ದು, ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗಿದೆ ಎಂದು ಪ್ರತಿಭಟಿಸುವ ಅಗತ್ಯವಿಲ್ಲ. ಬಹುತ್ವ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಅವರವರ ನಂಬಿಕೆಯಂತೆ ಮುಂದುವರಿಯಲು ಸ್ವಾತಂತ್ರ್ಯವಿದೆ ಎಂದು ತಿಳಿಸಿದ್ದರು.