This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime News

ಉಮಾಶ್ರೀ ಮನೆಗೆ ಕನ್ನ:ಇಬ್ಬರು ಕಳ್ಳರ ಬಂಧನ

ನಿಮ್ಮ ಸುದ್ದಿ ಬಾಗಲಕೋಟೆ
ಮಾಜಿ ಸಚಿವೆ ಉಮಾಶ್ರೀ ಅವರ ಬಾಡಿಗೆ ಮನೆಯಲ್ಲಿ ಕಳ್ಳತನ ನಡೆಸಿದ್ದ ಆರೋಪದ ಮೇರೆಗೆ ಇಬ್ಬರನ್ನು ಪೊಲಿಸರು ಬಂಧಿಸಿದ್ದಾರೆ.
ಜಮಖಂಡಿಯ ಯಲ್ಲಪ್ಪ ಈರಪ್ಪ ಗಡ್ಡಿ ಹಾಗೂ ಮುಧೋಳದ ದುರ್ಗಪ್ಪ ಫಕೀರಪ್ಪ ವಾಲ್ಮಿಕಿ ಬಂಧಿತ ಆರೋಪಿಗಳು. ಬಂಧಿತರಿಂದ 1 ಲಕ್ಷ 94 ಸಾವಿರ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನ.1ರಂದು ರಬಕವಿ-ಬನಹಟ್ಟಿಯಲ್ಲಿನ ಮಾಜಿ ಸಚಿವರ ಉಮಾಶ್ರೀ ಅವರ ಮನೆಯಲ್ಲಿ ಕಳ್ಳತನ ಎಸಗಿ 2 ಲಕ್ಷ ರೂ. ದೋಚಿದ್ದರು ಎಂದು ನ.2ರಂದು ದೂರು ದಾಖಲಾಗಿತ್ತು. ಎಸ್‌ಪಿ ಲೋಕೇಶ ಜಗಲಾಸರ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಬನಹಟ್ಟಿ ಸಿಪಿಐ ಕರುಣೇಶಗೌಡ, ತೇರದಾಳ ಠಾಣೆ ಎಸ್‌ಐ ವಿಜಯ ಕಾಂಬಳೆ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಇಬ್ಬರೂ ಆರೋಪಿಗಳು ರೂಢಿಗತ ಕಳ್ಳರಾಗಿದ್ದು, ಈ ಹಿಂದೆಯೂ ಹಲವು ಪ್ರಕರಣಗಳಲ್ಲಿ ಭಾಗಿ ಆಗಿದ್ದರು ಎಂದು ತಿಳಿದು ಬಂದಿದೆ. ಪೊಲೀಸರ ತಂಡದಲ್ಲಿ ಎಎಸ್‌ಐ ಎಚ್.ಎಸ್.ಮೆಂಡೆಗಾರ, ಎಸ್.ಕೆ.ಸೂರ್ಯವಂಶಿ, ಪಿ.ಬಿ.ಪೂಜಾರಿ, ಕೆ.ಎಚ್.ಸನಹಟ್ಟಿ, ಸಿ.ಎಂ.ಬಡೇಘರ, ಬಿ.ಎಸ್.ಚೌಲಗಿ, ಆರ್.ಎಸ್.ದೇಸಾಯಿ, ವೈ.ಜಿ.ಭಜಂತ್ರಿ, ಆರ್.ವೈ.ಪೂಜೇರಿ, ಎ.ಎ.ಕೋಲೂರ, ಎಂ.ಎಲ್.ಬುಗಟಿ, ಎಂ.ಆರ್.ಕೆಂಚನ್ನವರ, ಎಸ್.ಬಿ.ಬೇವನೂರ, ವಿ.ಎನ್.ಸುವರ್ಣಖಂಡಿ, ಎಸ್.ಪಿ.ಹುಕ್ಕೇರಿ, ಬನಹಟ್ಟಿ ಪೊಲೀಸ್ ಠಾಣೆಯ ಎಎಸ್‌ಐ ಸೈಫನ್ ನಾಟಿಕಾರ, ಸಿಬ್ಬಂದಿ ವಿ.ಎಸ್.ಅಜ್ಜನಗೌಡರ, ಎ.ಎಂ.ಜಮಖಂಡಿ ಭಾಗವಹಿಸಿದ್ದರು.
ಪೊಲೀಸರ ಯಶಸ್ವಿ ಕಾರ್ಯಾಚರಣೆಯನ್ನು ಎಸ್‌ಪಿ ಲೋಕೇಶ ಜಗಲಾಸರ್ ಪ್ರಂಶಸಿಸಿದ್ದಾರೆ.

 

";