This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Politics News

ವಿನಯ ಕುಲಕರ್ಣಿ ಪ್ರಕರಣ:ರಾಜಕೀಯ ಪ್ರೇರಿತ

ನಿಮ್ಮ ಸುದ್ದಿ ಬಾಗಲಕೋಟೆ

 ಶಾಸಕ ವಿನಯ ಕುಲಕರ್ಣಿ ಅವರ ಮೇಲಿನ ಸಿಬಿಐ ದಾಳಿ ರಾಜಕೀಯ ಪ್ರೇರಿತವಾಗಿದೆ ಎಂದು ಮಾಜಿ ಸಿಎಂ, ಬಾದಾಮಿ ಶಾಸಕ ಸಿದ್ದರಾಮಯ್ಯ ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದರು.
ಜಿಲ್ಲೆಯ ಬಾದಾಮಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ವಿನಯ ಕುಲಕರ್ಣಿ ಅವರ ಬಂಧನ ಹಿಂದೆ ರಾಜಕೀಯ ವಾಸನೆ ಇದೆ. ತನಿಖೆ ಪೂರ್ಣಗೊಂಡು ಚಾರ್ಜ್ಶೀಟ್ ಹಾಕಿದ ಮೇಲೆ ಮತ್ತು ರೀ ಓಪನ್ ಮಾಡಿ ಸಿಬಿಐಗೆ ವಹಿಸಿದ್ದು ರಾಜಕೀಯ ಪ್ರೇರಿತವಲ್ಲವೇ ಎಂದು ಪ್ರಶ್ನಿಸಿದರು.
ಸಂಸದ ಪ್ರಹ್ಲಾದ್ ಜೋಶಿ ರಾಜಕೀಯ ಸೇಡು ತೀರಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ವಿರೋಧ ಪಕ್ಷದವರ ಬಾಯಿ ಮುಚ್ಚಿಸಿದರೆ ತಮಗಿಷ್ಟ ಬಂದಂತೆ ಆಟ ಆಡಬಹುದು ಎಂದು ಬಿಜೆಪಿಯವರು ತಿಳಿದಂತಿದೆ. ಆದರೆ ಅದು ಸಾಧ್ಯವಿಲ್ಲ ಎಂದರು.
ರಾಜರಾಜೇಶ್ವರಿ ಹಾಗೂ ಶಿರಾ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲ್ಲುವ ವಿಶ್ವಾಸವಿದೆ. ಎರಡೂ ಕ್ಷೇತ್ರದಲ್ಲಿ ಯಾವ ಆಧಾರದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಇಂಟಲಿಜೆನ್ಸಿ ಹೇಳಿದೆಯೋ ಗೊತ್ತಿಲ್ಲ. ನಾನು ಕಣ್ಣಾರೆ ನೋಡಿದ್ದ ಕಾಂಗ್ರೆಸ್ ಪಕ್ಷದ ಪರ ಜನರ ಒಲವು ಹೆಚ್ಚಿದೆ. ಮೋದಿ ಅಲೆ ಎಲ್ಲಿದೆ, ಯಾವ ಅಲೆಯೂ ಇಲ್ಲ. ಗೆಲ್ಲೋದು ಮಾತ್ರ ಕಾಂಗ್ರೆಸ್ ಅಭ್ಯರ್ಥಿಗಳು ಎಂದು ವಿಶ್ವಾಸ ವ್ಯಕ್ತಪಡಿಸಿದರು.