This is the title of the web page
This is the title of the web page

Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

National News

ಎಸ್​ಪಿ, ಕಾಂಗ್ರೆಸ್​ ಮೈತ್ರಿ ದೃಢ, ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಡಲಿದ್ದೇವೆ: ಅಖಿಲೇಶ್​ ಯಾದವ್

ಎಸ್​ಪಿ, ಕಾಂಗ್ರೆಸ್​ ಮೈತ್ರಿ ದೃಢ, ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಡಲಿದ್ದೇವೆ: ಅಖಿಲೇಶ್​ ಯಾದವ್

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ನಡುವಿನ ಮೈತ್ರಿ ಅಖಿಲೇಶ್​ ಯಾದವ್ ಖಚಿತಪಡಿಸಿದ್ದು, ಸೀಟು ಹಂಚಿಕೆ ಕುರಿತು ಎರಡೂ ಪಕ್ಷಗಳ ನಡುವೆ ಭಿನ್ನಾಭಿಪ್ರಾಯವಿರುವುದು ಎಲ್ಲರಿಗೂ ಗೊತ್ತಿದೆ. ಬಂದ ಮಾಹಿತಿ ಪ್ರಕಾರ ಎಲ್ಲವೂ ಸರಿ ಇದೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುವುದಾಗಿ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಘೋಷಿಸಿದ್ದಾರೆ.

ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಮೈತ್ರಿ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆ ನಡೆದಿದೆ. ಸಮಾಜವಾದಿ ಪಕ್ಷವು ಶ್ರಾವಸ್ತಿ ಮತ್ತು ಲಖಿಂಪುರ ಖೇರಿ ಸ್ಥಾನಗಳನ್ನು ನೀಡಿದರೆ 17 ಸ್ಥಾನಗಳಲ್ಲಿ ಚುನಾವಣೆ ಎದುರಿಸಲು ಕಾಂಗ್ರೆಸ್ ಸಿದ್ಧವಾಗಿದೆ. ಆದರೆ ಕಾಂಗ್ರೆಸ್ ಲಖಿಂಪುರ ಖೇರಿ ಮತ್ತು ಶ್ರಾವಸ್ತಿ ಸ್ಥಾನಗಳನ್ನು ತನಗೆ ನೀಡಬೇಕೆಂದು ಬಯಸಿದೆ. ಇದಕ್ಕೆ ಪ್ರತಿಯಾಗಿ ಅವರು ಪಶ್ಚಿಮ ಉತ್ತರ ಪ್ರದೇಶದ ಬುಲಂದ್‌ಶಹರ್ ಸ್ಥಾನವನ್ನು ತೊರೆಯಲು ಸಿದ್ಧರಾಗಿದ್ದಾರೆ.

ಈ ಪ್ರಸ್ತಾವನೆಯನ್ನು ಸಮಾಜವಾದಿ ಪಕ್ಷ ಪರಿಗಣಿಸಿದ್ದು, ಅಂತಿಮ ನಿರ್ಧಾರವನ್ನು ಗುರುವಾರ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ ಯಾತ್ರೆ ಇದ್ದರೂ ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಭಾಗವಹಿಸಲಿಲ್ಲ ಎನ್ನುವ ಕಾರಣ ಹಾಗೂ ಉಭಯ ಪಕ್ಷಗಳ ನಡುವೆ ಸೀಟು ಹಂಚಿಕೆ ವಿವಾದ ನಿನ್ನೆ ರಾತ್ರಿಯವರೆಗೂ ಮುಂದುವರೆದಿದೆ.

ನ್ಯಾಯ ಯಾತ್ರೆ ಮಂಗಳವಾರ ಅಮೇಥಿ, ರಾಯ್ ಬರೇಲಿ ಮೂಲಕ ಲಕ್ನೋಗೆ ಬಂದು ಬುಧವಾರ ಬೆಳಗ್ಗೆ ಉನ್ನಾವೋಗೆ ತೆರಳಿತು.ಸಮಾಜವಾದಿ ಪಕ್ಷವು 11 ಅಭ್ಯರ್ಥಿಗಳನ್ನು ಘೋಷಿಸಿದ್ದು, ಇದರಲ್ಲಿ ಈ ಹಿಂದೆ ಕಾಂಗ್ರೆಸ್‌ಗೆ ನೀಡಲಾಗುವುದು ಎಂದು ಹೇಳಲಾಗಿದ್ದ ವಾರಾಣಸಿ ಕ್ಷೇತ್ರದಲ್ಲೂ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.

Nimma Suddi
";